ಕೊಚ್ಚಿನ್ ಶಿಪ್ಯಾರ್ಡ್ನಲ್ಲಿ ವಿವಿಧ ಹುದ್ದೆ: ಅರ್ಜಿ ಆಹ್ವಾನ

Cochin Shipyard Invites Applications for Various Posts ಕೊಚ್ಚಿನ್ ಶಿಪ್ಯಾರ್ಡ್ನಲ್ಲಿ ವಿವಿಧ ಹುದ್ದೆ: ಅರ್ಜಿ ಆಹ್ವಾನ

ಕೊಚ್ಚಿನ್ ಶಿಪ್ಯಾರ್ಡ್ನಲ್ಲಿ ವಿವಿಧ ಹುದ್ದೆ: ಅರ್ಜಿ ಆಹ್ವಾನ

KARNATAKA NEWS/ ONLINE / Malenadu today/ Aug 6, 2023 SHIVAMOGGA NEWS 

ಉಡುಪಿ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ನಲ್ಲಿ ಖಾಲಿ ಇರುವ ಮ್ಯಾನೇಜರ್ ಹಾಗೂ ಸಹಾಯಕ ಜನರಲ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಸಹಾಯಕ ಜನರಲ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 9 ಹಾಗೂ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 16 ಮತ್ತು ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ https://udupicsl.com/ ನ್ನ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ತೀರ್ಥಹಳ್ಳಿ ಶಿಕಾರಿ ಶೂಟ್​! ಪೊಲೀಸರು ದಾಖಲಿಸಿದ್ರು ಸುಮೋಟೋ ಕೇಸ್​! ಎಫ್​ಐಆರ್​ನಲ್ಲಿ ಏನಿದೆ!? ನಡೆದಿದ್ದೇನು?

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ದಾಸನಗದ್ದೆ ಹಿರೆಗದ್ದೆ ಗ್ರಾಮದ ಸಮೀಪ ನಡೆದಿದ್ದ ಶಿಕಾರಿ ಶೂಟ್ ಪ್ರಕರಣ ಸಂಬಂದ ಪೊಲೀಸರು ಸುಮೋಟೋ ಕೇಸ್ ದರ್ಜ್​ ಮಾಡಿದ್ದಾರೆ. ಈ ಸಂಬಂಧ  : IPC 1860 (U/s-341,323,504,506) ಅಡಿಯಲ್ಲಿ ಕೇಸ್ ಆಗಿದೆ. 

ಎಫ್​ಐಆರ್​ನಲ್ಲಿ ಏನಿದೆ? 

ತೀರ್ಥಹಳ್ಳಿ ಪೊಲೀಸರು ದಾಖಲಿಸಿರುವ ಎಫ್​ಐಆರ್​ ನ ಪ್ರಕಾರ,  ತೀರ್ಥಹಳ್ಳಿ ಪೊಲೀಸ್ ಸ್ಟೇಷನ್​ ಪಿಸಿ  ಟೌನ ಕೊಪ್ಪ ಸರ್ಕಲ್ ಬಳಿಯಲ್ಲಿ, ಮಾಹಿತಿ ಸಂಗ್ರಹಣೆಯಲ್ಲಿದ್ಧಾಗ, ಅವರಿಗೆ ಶಿಕಾರಿಯ ಮಾಹಿತಿ ಲಭ್ಯವಾಗಿದ್ದು, ಗುಂಡು ತಗಲಿರುವ ವಿಚಾರ ಗೊತ್ತಾಗಿದೆ. ತಕ್ಷಣವೇ ಅವರು,  ತೀರ್ಥಹಳ್ಳಿ, ಸರ್ಕಾರಿ ಜೆಸಿ, ಆಸ್ಪತ್ರೆಗೆ ಬಂದು ವಿಚಾರಿಸಿದ್ದಾರೆ. ಈ ವೇಳೆ ಗಾಯಾಳು ಮಾಹಿತಿ ನೀಡಿದ್ಧಾರೆ. 

ನಡೆದಿದ್ದೇನು?

ಎಫ್​ಐಆರ್​ನಲ್ಲಿ ಇರುವಂತೆ ರಾಕೇಶ್ ಹಾಗೂ ರಾಜೇಶ್ ಎಂಬ ಅಣ್ಣತಮ್ಮ ಕಾಡುಹಂದಿಯ ಶಿಕಾರಿಗೆ ಹೋಗಿದ್ದು, ದಾಸನಗದ್ದೆ ಬಳಿ ಕಾಣಿಸಿದ ಹಂದಿಗೆ ಗುಂಡು ಹೊಡೆದಿದ್ದಾರೆ. ಈ ವೇಳೆ ರಾಕೇಶ್ ಹೊಡೆದ  ಗುಂಡು ಹಂದಿಗೆ ಬೀಳದ ಹಿನ್ನೆಲೆ ರಾಜೇಶ್ ಗುಂಡು ಹಾರಿಸಿದ್ಧಾರೆ. ಆದರೆ ಹಂದಿಗೆ ಗುಂಡು ಬೀಳುವ ಬದಲು ರಾಕೇಶ್​ರ ಕಾಲಿಗೆ ಗುಂಡು ಬಿದ್ದಿದೆ ಎಂದು ಆರೋಪಿಸಲಾಗಿದೆ. ಸದ್ಯ ಈ ವಿಚಾರದ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. 

ಇನ್ನಷ್ಟು ಸುದ್ದಿಗಳು 

 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು