ತೀರ್ಥಹಳ್ಳಿ ಶಿಕಾರಿ ಶೂಟ್​! ಪೊಲೀಸರು ದಾಖಲಿಸಿದ್ರು ಸುಮೋಟೋ ಕೇಸ್​! ಎಫ್​ಐಆರ್​ನಲ್ಲಿ ಏನಿದೆ!? ನಡೆದಿದ್ದೇನು?

Thirthahalli police have registered a suo motu case in connection with the firing near Dasanagadde in Theerthahalli taluk. ತೀರ್ಥಹಳ್ಳಿ ತಾಲ್ಲೂಕು ದಾಸನಗದ್ದೆ ಸಮೀಪ ನಡೆದ ಫೈರಿಂಗ್​ ಸಂಬಂಧ ತೀರ್ಥಹಳ್ಳಿ ಪೊಲೀಸರು ಸುಮೋಟೋ ಕೇಸ್ ದಾಖಲಿಸಿದ್ದಾರೆ.

ತೀರ್ಥಹಳ್ಳಿ ಶಿಕಾರಿ ಶೂಟ್​!  ಪೊಲೀಸರು ದಾಖಲಿಸಿದ್ರು ಸುಮೋಟೋ ಕೇಸ್​! ಎಫ್​ಐಆರ್​ನಲ್ಲಿ ಏನಿದೆ!? ನಡೆದಿದ್ದೇನು?

KARNATAKA NEWS/ ONLINE / Malenadu today/ Aug 6, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ದಾಸನಗದ್ದೆ ಹಿರೆಗದ್ದೆ ಗ್ರಾಮದ ಸಮೀಪ ನಡೆದಿದ್ದ ಶಿಕಾರಿ ಶೂಟ್ ಪ್ರಕರಣ ಸಂಬಂದ ಪೊಲೀಸರು ಸುಮೋಟೋ ಕೇಸ್ ದರ್ಜ್​ ಮಾಡಿದ್ದಾರೆ. ಈ ಸಂಬಂಧ  : IPC 1860 (U/s-341,323,504,506) ಅಡಿಯಲ್ಲಿ ಕೇಸ್ ಆಗಿದೆ. 

ಎಫ್​ಐಆರ್​ನಲ್ಲಿ ಏನಿದೆ? 

ತೀರ್ಥಹಳ್ಳಿ ಪೊಲೀಸರು ದಾಖಲಿಸಿರುವ ಎಫ್​ಐಆರ್​ ನ ಪ್ರಕಾರ,  ತೀರ್ಥಹಳ್ಳಿ ಪೊಲೀಸ್ ಸ್ಟೇಷನ್​ ಪಿಸಿ  ಟೌನ ಕೊಪ್ಪ ಸರ್ಕಲ್ ಬಳಿಯಲ್ಲಿ, ಮಾಹಿತಿ ಸಂಗ್ರಹಣೆಯಲ್ಲಿದ್ಧಾಗ, ಅವರಿಗೆ ಶಿಕಾರಿಯ ಮಾಹಿತಿ ಲಭ್ಯವಾಗಿದ್ದು, ಗುಂಡು ತಗಲಿರುವ ವಿಚಾರ ಗೊತ್ತಾಗಿದೆ. ತಕ್ಷಣವೇ ಅವರು,  ತೀರ್ಥಹಳ್ಳಿ, ಸರ್ಕಾರಿ ಜೆಸಿ, ಆಸ್ಪತ್ರೆಗೆ ಬಂದು ವಿಚಾರಿಸಿದ್ದಾರೆ. ಈ ವೇಳೆ ಗಾಯಾಳು ಮಾಹಿತಿ ನೀಡಿದ್ಧಾರೆ. 

ನಡೆದಿದ್ದೇನು?

ಎಫ್​ಐಆರ್​ನಲ್ಲಿ ಇರುವಂತೆ ರಾಕೇಶ್ ಹಾಗೂ ರಾಜೇಶ್ ಎಂಬ ಅಣ್ಣತಮ್ಮ ಕಾಡುಹಂದಿಯ ಶಿಕಾರಿಗೆ ಹೋಗಿದ್ದು, ದಾಸನಗದ್ದೆ ಬಳಿ ಕಾಣಿಸಿದ ಹಂದಿಗೆ ಗುಂಡು ಹೊಡೆದಿದ್ದಾರೆ. ಈ ವೇಳೆ ರಾಕೇಶ್ ಹೊಡೆದ  ಗುಂಡು ಹಂದಿಗೆ ಬೀಳದ ಹಿನ್ನೆಲೆ ರಾಜೇಶ್ ಗುಂಡು ಹಾರಿಸಿದ್ಧಾರೆ. ಆದರೆ ಹಂದಿಗೆ ಗುಂಡು ಬೀಳುವ ಬದಲು ರಾಕೇಶ್​ರ ಕಾಲಿಗೆ ಗುಂಡು ಬಿದ್ದಿದೆ ಎಂದು ಆರೋಪಿಸಲಾಗಿದೆ. ಸದ್ಯ ಈ ವಿಚಾರದ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. 

 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು