MALENADUTODAY.COM/ SHIVAMOGGA / KARNATAKA WEB NEWS
ಕರ್ನಾಟಕ ಚುನಾವಣೆ 2023
ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣ ರಂಗು ಇವತ್ತು ವಿಶೇಷ ಕಳೆಯನ್ನು ಪಡೆದುಕೊಳ್ಳಲಿದೆ. ನಾಮಪತ್ರ ಸಲ್ಲಿಕೆಯ ಭರಾಟೆ ಜಿಲ್ಲೆಯಲ್ಲಿ ಜೋರಾಗಿದ್ದು ಸೊರಬ ತಾಲ್ಲೂಕಿನಲ್ಲಿ ಮಧು ಬಂಗಾರಪ್ಪ ಹಾಗೂ ಕುಮಾರ್ ಬಂಗಾರಪ್ಪ ಒಂದೇ ದಿನ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
Read / ಶಿವಮೊಗ್ಗ ಕಾಂಗ್ರೆಸ್ ಕಚೇರಿ ಎದುರೂಹೈಡ್ರಾಮಾ/ ಟೈರ್ಗೆ ಬೆಂಕಿ/ ಗ್ರಾಮಾಂತರದಲ್ಲಿ ಸಿಡಿದ ನಾರಾಯಣ ಸ್ವಾಮಿ!? ಕಾರಣ?
ಸೊರಬದಲ್ಲಿ ಸೋದರರ ಬಲ ಪ್ರದರ್ಶನ
ಹಾಲಿ ಶಾಸಕ ಕುಮಾರ್ ಬಂಗಾರಪ್ಪರ ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಸೊರಬದಲ್ಲಿರುವ ರಂಗನಾಥ ಸ್ವಾಮಿ ದೇವಾಲಯಕ್ಕೆ ಬೆಳಗ್ಗೆ 10 ಗಂಟೆಗೆ ತೆರಳಿರುವ ಅವರು, ಅಲ್ಲಿ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಲು ತೆರಳಲಿದ್ದಾರೆ. ಈ ವೇಳೆ ತಹಶೀಲ್ದಾರ್ ಕಚೇರಿಯವರೆಗೂ ಮೆರವಣಿಗೆ ನಡೆಯಲಿದೆ.
ಇನ್ನೂ ಕುಮಾರ್ ಬಂಗಾರಪ್ಪರವರ ಎದುರಾಳಿ ಮಧು ಬಂಗಾರಪ್ಪ ಕೂಡ ಇವತ್ತೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಬೆಳಗ್ಗೆ ಅವರು ಸಹ ರಂಗನಾಥ ಸ್ವಾಮಿ ದೇವಾಲಯಕ್ಕೆ ಪೂಜೆ ಸಲ್ಲಿಸಿ 11.30-12 ಗಂಟೆಯಯೊಳೆಗೆ ತಹಶೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.
ಇಬ್ಬರು ಮುಖಂಡರು ರಾಜಕೀಯ ಶಕ್ತಿಪ್ರದರ್ಶನದ ಮೆರವಣಿಗೆಗೆ ಸಾಕ್ಷಿಯಾಗಲಿದ್ದು, ಪರಸ್ಪರ ಎದುರಾಗುವ ಸಾಧ್ಯತೆ ಇದೆ.
Read/ ಶಾಸಕರಿಗಿಂತಲೂ ಅವರ ಪತ್ನಿಯೇ ಸಿರಿವಂತ ರೂ!/ ಚುನಾವಣಾ ಸ್ವಾರಸ್ಯ!
ಸಾಗರದಲ್ಲಿ ಬೇಳೂರು ನಾಮಪತ್ರ ಸಲ್ಲಿಕೆ
ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಬೇಳೂರು ಗೋಪಾಲಕೃಷ್ಣ ರವರು ಸಹ ಇವತ್ತೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಬೆಳಗ್ಗೆ 11:30ಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಲಿದ್ದಾರೆ. ಕಾಂಗ್ರೆಸ್ ಪಕ್ಷದ ಕಚೇರಿಯಿಂದ ಕಾಗೋಡು ತಿಮ್ಮಪ್ಪನವರ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ತೆರಳಿ ಕ್ಷೇತ್ರ ಚುನಾವಣೆ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಲಿದ್ದಾರೆ.
Read / ಶಿವಮೊಗ್ಗ ಕಾಂಗ್ರೆಸ್ ಕಚೇರಿ ಎದುರೂಹೈಡ್ರಾಮಾ/ ಟೈರ್ಗೆ ಬೆಂಕಿ/ ಗ್ರಾಮಾಂತರದಲ್ಲಿ ಸಿಡಿದ ನಾರಾಯಣ ಸ್ವಾಮಿ!? ಕಾರಣ?
ತೀರ್ಥಹಳ್ಳಿಯಲ್ಲಿ ರಾಜರಾಂ ನಾಮಪತ್ರ ಸಲ್ಲಿಕೆ
ಇನ್ನೂ ಇತ್ತ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ದಲ್ಲಿ ಇವತ್ತು 12: 30 ಕ್ಕೆ ಜೆಡಿಎಸ್ ಅಭ್ಯರ್ಥಿ ಯಡೂರು ರಾಜಾರಾಂ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಇದಕ್ಕೂ ಮೊದಲು ಅವರು ರ್ಯಾಲಿ ನಡೆಸಲಿದ್ದಾರೆ.
ಶಿವಮೊಗ್ಗದಲ್ಲಿ ಆಪ್ ನಾಮಪತ್ರ
ಶಿವಮೊಗ್ಗ ನಗರ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ನೇತ್ರಾವತಿ. ಟಿ ಗೌಡ ಇವತ್ತು 10:30 ಕ್ಕೆ ನಾಮಪತ್ರ ಸಲ್ಲಿಸಲಿದ್ದು ನಗರದ ಶಿವಪ್ಪ ನಾಯಕ ವೃತ್ತದಿಂದ ಮೆರವಣಿಗೆ ನಡೆಯಲಿದೆ. ನಗರದ ಗಾಂಧಿ ಪಾರ್ಕ್ನ ಬಸವಣ್ಣನ ಪುತ್ತಳಿಕೆಗೆ, ಮಾಲಾರ್ಪಣೆ ಮಾಡಿ , ತದನಂತರ ಮಹಾನಗರ ಪಾಲಿಕೆ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಪಾಲಾರ್ಪಣೆ ಮಾಡುವುದರೊಂದಿಗೆ ನಾಮಪತ್ರ ಸಲ್ಲಿಸಲಿದ್ದಾರೆ
ನಾಳೆ ಇನ್ನೂ ಜೋರಿದೆ ನಾಮಪತ್ರ ಭರಾಟೆ
ಪಕ್ಷಗಳ ಪಟ್ಟಿ ಬಿಡುಗಡೆಯ ಗೊಂದಲದಿಂದ ಈ ಸಲ ನಾಮಪತ್ರ ಸಲ್ಲಿಕೆ ವಿಳಂಭವಾಗುತ್ತಿದೆ. ಆದಾಗ್ಯು ನಾಳೆ ಶಿವಮೊಗ್ಗದಲ್ಲಿ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿ ನಡೆಯಲಿದೆ. ಭದ್ರಾವತಿಯಲ್ಲಿ ಶಾರದಾ ಅಪ್ಪಾಜಿಗೌಡ, ತೀರ್ಥಹಳ್ಳಿಯಲ್ಲಿ ಆರಗ ಜ್ಞಾನೇಂದ್ರ, ಹಲವರು ನಾಳೆಯೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಇದನ್ನು ಸಹ ಓದಿ
Read /Shikaripura/ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಾಗರಾಜ್ ಗೌಡ ಪಕ್ಷೇತರವಾಗಿ ಸ್ಪರ್ಧೆ!?
Read /karnataka election / ಇನ್ಯಾರಿಗೂ ಅಲ್ಲ, ಈ ಸಲ ಬಿಜೆಪಿ ಟಿಕೆಟ್ 100 % ನನಗೆ ಅಂತಿದ್ದಾರೆ ಇವ ರೂ! ನಿಜನಾ
Read / ಶಿವಮೊಗ್ಗ ಕಾಂಗ್ರೆಸ್ ಕಚೇರಿ ಎದುರೂಹೈಡ್ರಾಮಾ/ ಟೈರ್ಗೆ ಬೆಂಕಿ/ ಗ್ರಾಮಾಂತರದಲ್ಲಿ ಸಿಡಿದ ನಾರಾಯಣ ಸ್ವಾಮಿ!? ಕಾರಣ?
Read / karnataka election 2023 / ಸಿಟಿ ಮಾಲ್ನಲ್ಲಿ ಮತ ಜಾಗೃತಿ/ ಮೆಗ್ಗಾನ್ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಪ್ರತ್ಯೇಕ ಚಿಕಿತ್ಸಾ ಕೊಠಡಿ/ ಚುನಾವಣಾ ವೀಕ್ಷಕರ ನೇಮಕ
Read / Karnataka election/ ಸೋಶಿಯಲ್ ಮೀಡಿಯಾ ಹೇಳ್ತಿದ್ಯಾ ಸತ್ಯ! ಶಿವಮೊಗ್ಗಕ್ಕೆ ಇವರೇನಾ ಬಿಜೆಪಿ ಅಭ್ಯರ್ಥಿ! ಏನಿದು?
Read / karnataka election 2023/ ಶಿಕಾರಿಪುರದಲ್ಲಿ ವಿಜಯೇಂದ್ರ ಪ್ರಚಾರಕ್ಕೆ ಎದುರಾಯ್ತು ದಿಕ್ಕಾರದ ಆಕ್ರೋಶ! ಕಾರಣವೇನು?
Read / Karnataka election 2023/ ಶಿವಮೊಗ್ಗ ಜಿಲ್ಲೆ ಏಪ್ರಿಲ್ 15 ರಂದು ಎಷ್ಟು ನಾಮಪತ್ರ ಸಲ್ಲಿಕೆಯಾಯ್ತು? ವಿವರ ಇಲ್ಲಿದೆ
Read/ ಶಾಸಕರಿಗಿಂತಲೂ ಅವರ ಪತ್ನಿಯೇ ಸಿರಿವಂತ ರೂ!/ ಚುನಾವಣಾ ಸ್ವಾರಸ್ಯ!
ನಮ್ಮ ಸೋಶೀಯಲ್ ಮೀಡಿಯಾ ಲಿಂಕ್ಗಳು ಕ್ಲಿಕ್ ಮಾಡಿ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS/
kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt, firstnews kannada, Shivamogga today, shivamogga news, shivamogga live, shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #Kannada_News
