BREAKING NEWS / ಶಿವಮೊಗ್ಗ ಪೊಲೀಸರಿಂದ ಮತ್ತೊಬ್ಬ ರೌಡಿಶೀಟರ್ಗೆ ಗುಂಡು/ ಕಾರಿಗೆ ಬೆಂಕಿ ಹಾಕಿದವನಿಗೆ ಬುಲೆಟ್ ಫೈರ್
ಶಿವಮೊಗ್ಗದ ಕೆಲದಿನಗಳ ಹಿಂದೇ ಕಾರಿಗೆ ಬೆಂಕಿ ಹಚ್ಚಿದ್ದರ ಸಂಬಂಧ ದುಷ್ಕರ್ಮಿಗಳ ವಿರುದ್ಧ ಕೇಸ್ ದಾಖಲಾಗಿತ್ತು. ಈ ಸಂಬಂಧ ಆರೋಪಿಯನ್ನ ಹಿಡಿಯಲು ಪೊಲೀಸರು ತೆರಳಿದ್ದರು. ಈ ವೇಳೇ ಆರೋಪಿಯು ಸಿಬ್ಬಂದಿ ಶಿವರಾಜ್ ಅವರ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ್ಧಾನೆ.
ಶಿವಮೊಗ್ಗ ಪೊಲೀಸರು ಮತ್ತೊಬ್ಬ ರೌಡಿಗೆ ಗುಂಡೇಟು ನೀಡಿದ್ಧಾರೆ. ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿ ರೌಡಿ ಮೋಟು ಪ್ರವೀಣನ ಪೊಲೀಸರು ಫೈರ್ ಮಾಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆ ಪಿಎಸ್ಐ ಆರೋಪಿಯನ್ನು ಹಿಡಿಯಲು ಹೋಗಿದ್ದವೇಳೆ , ಆತ ಹಲ್ಲೆಗೆ ಮುಂದ್ಧಾಗಿದ್ದರಿಂದ ಫೈರ್ ಮಾಡಿದ್ದಾರೆ.
ಇದನ್ನು ಸಹ ಓದಿ : ದೇವರ ಮುಂದೆ ಅಜ್ಜಿ ಮರ್ಡರ್/ ಕೇಳೋರೆ ಇಲ್ಲದ ಅನಾಥೆ ಸಾವಿಗೆ, ನ್ಯಾಯ ಕೊಡಿಸಿದ ಶಿವಮೊಗ್ಗ ಪೊಲೀಸ್/ EXCLUSIVE JP REPORT
ಶಿವಮೊಗ್ಗದ ಕೆಲದಿನಗಳ ಹಿಂದೇ ಕಾರಿಗೆ ಬೆಂಕಿ ಹಚ್ಚಿದ್ದರ ಸಂಬಂಧ ದುಷ್ಕರ್ಮಿಗಳ ವಿರುದ್ಧ ಕೇಸ್ ದಾಖಲಾಗಿತ್ತು. ಈ ಸಂಬಂಧ ಆರೋಪಿಯನ್ನ ಹಿಡಿಯಲು ಪೊಲೀಸರು ತೆರಳಿದ್ದರು. ಈ ವೇಳೇ ಆರೋಪಿಯು ಸಿಬ್ಬಂದಿ ಶಿವರಾಜ್ ಅವರ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ್ಧಾನೆ.
ಈ ವೇಳೆ ಶಿವಮೊಗ್ಗ ಗ್ರಾಮಾಂತರ ಠಾಣೆ ಪಿಎಸ್ಐ ರಮೇಶ್ ಆರೋಪಿಗೆ ಪೊಲೀಸರ ಮೇಲೆ ದಾಳಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಆದರೆ ಆರೋಪಿ ಕೇಳದೇ ಮತ್ತೆ ಹಲ್ಲೆ ಮುಂದಾಗಿದ್ದಾರೆ. ಈ ವೇಳೇ ಪಿಎಸ್ಐ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಆನಂತರವೂ ಆರೋಪಿ ಹಲ್ಲೆಗೆ ಮುಂದಾದಾಗ ಆತನ ಮೇಲೆ ಫೈರ್ ಮಾಡಲಾಗಿದೆ.
ಇದನ್ನು ಸಹ ಓದಿ : ಶಿವಮೊಗ್ಗ ಪೊಲೀಸರಿಂದ ತತ್ತಕ್ಷಣದ ಕಾರ್ಯಾಚರಣೆ/ 20 ಚೆಕ್ಪೋಸ್ಟ್ನಲ್ಲಿ 46 ಕೇಸ್/ ಏನಿದು? ವಿವರ ನೋಡಿ
ಸದ್ಯ ಘಟನೆಯಲ್ಲಿ ಸಿಬ್ಬಂದಿ ಶಿವರಾಜ್ ಗಾಯಗೊಂಡಿದ್ದು ಅವರನ್ನು ಹಾಗೂ ಗುಂಡೇಟು ತಿಂದಿರುವ ಆರೋಪಿ ಮೋಟು ಪ್ರವೀಣ್ನನ್ನ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನೂ ಮೋಟು ಪ್ರವೀಣ ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಆಗಿದ್ದು, ಈತನ ವಿರುದ್ಧ 15 ಕೇಸ್ಗಳಿವೆ . ಘಟನೆ ಸಂಬಂಧ ಎಸ್ಪಿ ಮಿಥುನ್ ಕುಮಾರ್ ಮಾಧ್ಯಮ ಗ್ರೂಪ್ನಲ್ಲಿ ಮಾಹಿತಿ ನೀಡಿದ್ದು, ಘಟನೆಯ ವಿವರ ಹಂಚಿಕೊಂಡಿದ್ಧಾರೆ.
ಇದನ್ನು ಸಹ ಒದಿ :ಜನ ಸ್ವಯಂಸೇವಕರಾದ್ರು/ ರಾಜಕಾರಣಿ ಡಾಕ್ಟರ್ ಆದ್ರು/ ಸಾಗರಿಕರ ಮಾನವೀಯತೆಗೆ ಸಾಕ್ಷಿಯಾದ ಆಕ್ಸಿಡೆಂಟ್
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link