ರಿಕ್ಷಾ ಸೀಟಿನ ಹಿಂದ ಚಿನ್ನವಿದ್ದ ಬ್ಯಾಗ್ ಬಿಟ್ಟು ಹೋದ ಪ್ರಯಾಣಿಕರು! ಆಟೋ ಚಾಲಕನಿಂದ ಸೇಫಾಯ್ತು ಆಭರಣ! ಹೇಗೆ ಗೊತ್ತಾ

KARNATAKA NEWS/ ONLINE / Malenadu today/ Sep 18, 2023 SHIVAMOGGA NEWS

ಚಿನ್ನಾಭರಣ ಇದ್ದ ಬ್ಯಾಗ್​ವೊಂದನ್ನ ಅದರ ಮಾಲೀಕರಿಗೆ ವಾಪಸ್ ಮಾಡಿ ಆಟೋ ಚಾಲಕರೊಬ್ಬರು ಪ್ರಾಮಾಣಿಕತೆ ತೋರಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಈ ಘಟನೆ ನಡೆದಿದೆ. 

ಇಲ್ಲಿನ ಚಂದ್ರಮಾವಿನಕೊಪ್ಪದಿಂದ ಪ್ರಯಾಣಿಕರೊಬ್ಬರು ಆಟೋ ಹತ್ತಿದ್ದರು. ಸೊರಬ ರಸ್ತೆಯಲ್ಲಿ ಸಿಗುವ ಬೈಪಾಸ್ ಬಳಿ ಅವರು ಇಳಿದಿದ್ದರು. ಈ ವೇಳೆ ತಮ್ಮ ಬ್ಯಾಗ್​ನ್ನು ಆಟೋದಲ್ಲಿ ಬಿಟ್ಟಿದ್ದರು. ಅಲ್ಲಿಂದ ಆಟೋ ಮುಂದಕ್ಕೆ ಸಾಗಿತ್ತು. ಆನಂತರ ಆಟೋಸೀಟಿನ ಹಿಂದಿದ್ದ ಬ್ಯಾಗ್ ನೋಡಿದ ಚಾಲಕ, ಅದನ್ನು ಸೀದಾ ಸಾಗರ ಟೌನ್ ಸ್ಟೇಷನ್​ಗೆ ತಂದಿದ್ದಾನೆ. 

ಪೊಲೀಸರು ಬ್ಯಾಗ್ ಪಡೆದು ಅದರ ಮಾಲೀಕರನ್ನು ಕರೆಸಿಕೊಂಡು ಅವರಿಗೆ ವಾಪಸ್ ನೀಡಿದ್ದಾರೆ. ಈ ವೇಳೆ ಆಟೋಚಾಲಕನ ಪ್ರಾಮಾಣಿಕತೆ ಬ್ಯಾಗ್​ನ ಮಾಲೀಕರು ಹಾಗೂ ಪೊಲೀಸರಿಂದಲೂ ಪ್ರಶಂಸೆಗೆ ಒಳಗಾಯ್ತು 


ಇನ್ನಷ್ಟು ಸುದ್ದಿಗಳು 

 


 

Leave a Comment