ರಿಕ್ಷಾ ಸೀಟಿನ ಹಿಂದ ಚಿನ್ನವಿದ್ದ ಬ್ಯಾಗ್ ಬಿಟ್ಟು ಹೋದ ಪ್ರಯಾಣಿಕರು! ಆಟೋ ಚಾಲಕನಿಂದ ಸೇಫಾಯ್ತು ಆಭರಣ! ಹೇಗೆ ಗೊತ್ತಾ

An auto driver in Sagar has returned the bag left by the passenger in his rickshawಸಾಗರದ ಆಟೋ ಚಾಲಕನೊಬ್ಬ ತನ್ನ ರಿಕ್ಷಾದಲ್ಲಿ ಪ್ರಯಾಣಿಕರು ಬಿಟ್ಟುಹೋಗಿದ್ದ ಬ್ಯಾಗ್ ವಾಪಸ್ ಮಾಡಿದ್ಧಾರೆ

ರಿಕ್ಷಾ ಸೀಟಿನ ಹಿಂದ ಚಿನ್ನವಿದ್ದ ಬ್ಯಾಗ್ ಬಿಟ್ಟು ಹೋದ ಪ್ರಯಾಣಿಕರು! ಆಟೋ ಚಾಲಕನಿಂದ ಸೇಫಾಯ್ತು ಆಭರಣ! ಹೇಗೆ ಗೊತ್ತಾ

KARNATAKA NEWS/ ONLINE / Malenadu today/ Sep 18, 2023 SHIVAMOGGA NEWS

ಚಿನ್ನಾಭರಣ ಇದ್ದ ಬ್ಯಾಗ್​ವೊಂದನ್ನ ಅದರ ಮಾಲೀಕರಿಗೆ ವಾಪಸ್ ಮಾಡಿ ಆಟೋ ಚಾಲಕರೊಬ್ಬರು ಪ್ರಾಮಾಣಿಕತೆ ತೋರಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಈ ಘಟನೆ ನಡೆದಿದೆ. 

ಇಲ್ಲಿನ ಚಂದ್ರಮಾವಿನಕೊಪ್ಪದಿಂದ ಪ್ರಯಾಣಿಕರೊಬ್ಬರು ಆಟೋ ಹತ್ತಿದ್ದರು. ಸೊರಬ ರಸ್ತೆಯಲ್ಲಿ ಸಿಗುವ ಬೈಪಾಸ್ ಬಳಿ ಅವರು ಇಳಿದಿದ್ದರು. ಈ ವೇಳೆ ತಮ್ಮ ಬ್ಯಾಗ್​ನ್ನು ಆಟೋದಲ್ಲಿ ಬಿಟ್ಟಿದ್ದರು. ಅಲ್ಲಿಂದ ಆಟೋ ಮುಂದಕ್ಕೆ ಸಾಗಿತ್ತು. ಆನಂತರ ಆಟೋಸೀಟಿನ ಹಿಂದಿದ್ದ ಬ್ಯಾಗ್ ನೋಡಿದ ಚಾಲಕ, ಅದನ್ನು ಸೀದಾ ಸಾಗರ ಟೌನ್ ಸ್ಟೇಷನ್​ಗೆ ತಂದಿದ್ದಾನೆ. 

ಪೊಲೀಸರು ಬ್ಯಾಗ್ ಪಡೆದು ಅದರ ಮಾಲೀಕರನ್ನು ಕರೆಸಿಕೊಂಡು ಅವರಿಗೆ ವಾಪಸ್ ನೀಡಿದ್ದಾರೆ. ಈ ವೇಳೆ ಆಟೋಚಾಲಕನ ಪ್ರಾಮಾಣಿಕತೆ ಬ್ಯಾಗ್​ನ ಮಾಲೀಕರು ಹಾಗೂ ಪೊಲೀಸರಿಂದಲೂ ಪ್ರಶಂಸೆಗೆ ಒಳಗಾಯ್ತು 


ಇನ್ನಷ್ಟು ಸುದ್ದಿಗಳು