ಜೈಲಿನಲ್ಲಿಯೇ ಹ್ಯಾಪಿ ಬರ್ತ್ಡೇ ಕೇಸ್! 5 ತಿಂಗಳ ನಂತ್ರ ದಾಖಲಾಯ್ತು ಎಫ್ಐಆರ್! ಏನಿದು ಶಿವಮೊಗ್ಗ ಸೆಂಟ್ರಲ್ ಜೈಲ್ ಕಥೆ!??
A case has been registered at Tunganagar police station on the complaint of the Superintendent of Shivamogga Central Jail. ಶಿವಮೊಗ್ಗ ಕೇಂದ್ರ ಕಾರಾಗೃಹ ಸೋಗಾನೆಯ ಅಧೀಕ್ಷಕಿಯವರು ನೀಡಿದ ದೂರಿನನ್ವಯ ತುಂಗಾನಗರ ಪೊಲೀಸ್ ಸ್ಟೇಷನ್ನಲ್ಲಿ ಕೇಸ್ ದಾಖಲಾಗಿದೆ.
KARNATAKA NEWS/ ONLINE / Malenadu today/ Aug 6, 2023 SHIVAMOGGA NEWS
ಕಳೆದ ಮಾರ್ಚ್ ತಿಂಗಳಿನಲ್ಲಿ ಸಾಗರ ಟೌನ್ ಪೊಲೀಸ್ ಸ್ಟೇಷನ್ನಲ್ಲಿ ದಾಖಲಾದ ಕೇಸ್ವೊಂದು ಇದೀಗ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಸದ್ದು ಮಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಇದೀಗ ತುಂಗಾನಗರ ಪೊಲೀಸ್ ಸ್ಟೇಷನ್ನಲ್ಲಿ ಪ್ರಕರಣ ಎಫ್ಐಆರ್ ಆಗಿದ್ದು, ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಈ ಬಗ್ಗೆ ದೂರು ದಾಖಲಾಗಿದೆ.
ಏನಿದು ಪ್ರಕರಣ?
ಕಳೆದ ಮಾರ್ಚ್ ತಿಂಗಳಿನಲ್ಲಿ ಸಾಗರ ಪೊಲೀಸರು ಅನುಮಾನಸ್ಪದವಾಗಿ ರಸ್ತೆಯಬದಿಯಲ್ಲಿ ವಾಹನವೊಂದನ್ನ ತಪಾಸಣೆಗೊಳಪಡಿಸಿದ್ದರು. ಅದರಲ್ಲಿ ನಿಷೇಧಿತ ಮಾತ್ರೆಗಳು ಹಾಗೂ ಮಾದಕವಸ್ತುಗಳು ದೊರೆತಿದ್ವು. ಈ ಸಂಬಂಧ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಕರಾವಳಿಯಲ್ಲಿ ಓರ್ವನ ಕೊಲೆ ಸುಪಾರಿ ಕೇಸ್ನ ಸುಳಿವು ಸಿಕ್ಕಿತ್ತು. ಅಲ್ಲದೆ ಡಾನ್ ಆಗಬಯಸಿದ್ದ ಯುವಕನ ಕ್ರೈಂ ಕೃತ್ಯಕ್ಕೆ ಬ್ರೇಕ್ ಹಾಕಿದ್ದರು. ಇದರ ಪೂರ್ತಿ ಸ್ಟೋರಿ ಇಲ್ಲಿದೆ ಓದಿ ಡಾನ್ ಆಗುವ ಆಸೆಯಲ್ಲಿ ಮಂಗಳೂರಿಂದ ಶಿವಮೊಗ್ಗಕ್ಕೆ ಬಂದವ ಫಸ್ಟ್ ಕೇಸ್ನಲ್ಲಿಯೇ ಫಿಟ್ ಆದ! ರೋಚಕವಾಗಿದೆ ಒಂದು ಮಾತ್ರೆ ಕಥೆ JP STORY
ಇದೇ ವಿಚಾರದಲ್ಲಿ ತನಿಖಾ ಸಂದರ್ಭದಲ್ಲಿ ಸಾಗರ ಪೊಲೀಸರಿಗೆ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿರುವ ಸಜಾಬಂದಿಗಳು ಜೈಲಿನಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಿದ್ದವಂತೆ. ಅದರಂತೆ ಪ್ರಕರಣದ ತನಿಖಾಧಿಕಾರಿಗಳು ಕೇಂದ್ರ ಕಾರಾಗೃಹಕ್ಕೆ ಭೇಟಿಕೊಟ್ಟು ಈ ಸಂಬಂಧ ತನಿಖೆಯನ್ನು ನಡೆಸಿದ್ದರು. ಇದರ ಬೆನ್ನಲ್ಲೆ ಸಾಕಷ್ಟು ರೇಡ್ಗಳು ಸಹ ನಡೆದಿದ್ದವು. ಆದರೆ ರೇಡ್ನಲ್ಲಿ ಅಥವಾ ತನಿಖೆಯಲ್ಲಿ ಯಾವುದೇ ವಸ್ತುಗಳು ಪತ್ತೆಯಾಗಿರಲಿಲ್ಲ. ಸಾಕ್ಷ್ಯಗಳು ಸಹ ಸಿಕ್ಕಿರಲಿಲ್ಲ.
ಇದೀಗ ಪ್ರಕರಣ ಸಂಬಂಧ ಸ್ವತಃ ಕೇಂದ್ರ ಕಾರಾಗೃಹದ ಅಧೀಕ್ಷಕಿಯವರಿಂದಲೆ ತುಂಗಾನಗರ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಾಗಿದ್ದು, ಜೈಲಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಅದರ ಫೋಟೋ ವಿಡಿಯೋಗಳನ್ನು ತೆಗೆಯಲು ಮೊಬೈಲ್ಗಳನ್ನು ಬಳಸಿದ್ದು, ಮತ್ತು ಸಾಗರ ಟೌನ್ನಲ್ಲಿ ದಾಖಲಾದ ಪ್ರಕರಣದಲ್ಲಿ ಸಿಕ್ಕಿರುವ ಸಾಕ್ಷ್ಯಗಳನ್ನು ಉಲ್ಲೇಖಿಸಿ ದೂರು ನೀಡಲಾಗಿದೆ. ಪೊಲೀಸರು ಎಫ್ಐಆರ್ ದರ್ಜ್ ಮಾಡಿದ್ದಾರೆ. ಒಟ್ಟಾರೆ, ಮಾರ್ಚ್ ತಿಂಗಳಿನಲ್ಲಿ ನಡೆದ ಪ್ರಕರಣವೊಂದು ಇದೀಗ ಬೇರೆಯದ್ದೆ ರೂಟ್ಗೆ ಬಂದು ತುಂಗಾನಗರ ಪೊಲೀಸ್ ಸ್ಟೇಷನ್ನಲ್ಲಿ ಕೇಸ್ ದಾಖಲಾಗಿದೆ. ಕೈದಿಗಳ ಹುಟ್ಟುಹಬ್ಬದ ಫೋಟೋಗಳು ಇಷ್ಟಕ್ಕೆಲ್ಲಾ ಕಾರಣವಾಗಿರುವುದು ವಿಶೇಷ
ಇನ್ನಷ್ಟು ಸುದ್ದಿಗಳು
-
ತಾಯಿ ಜಗನ್ಮಾತೆ ಈ ಸುಂದರನ ಸರ್ವಾಂಗ ಸುಂದರನಾಗಿ ಮಾಡುವಳೇ!? ವೈರಲ್ ಆಯ್ತು ಹರಕೆ!
-
ಭದ್ರಾವತಿ ಭದ್ರಗಿರಿ, ಶಿವಮೊಗ್ಗ ಗುಡ್ಡೆಕಲ್ ಆಡಿ ಕೃತ್ತಿಕೆ ಜಾತ್ರೆ! ಯಾವಾಗ ಗೊತ್ತ ಭರಣಿ ಕಾವಡಿ ಉತ್ಸವ?