JP EXCLUSIVE / 4 ಹೆಣ್ಣಾಳು, 8 ಗಂಡಾಳು ! 25 ಕ್ಕೂ ಹೆಚ್ಚು ಸಿರಿವಂತರಿಗೆ ದೋಖಾ! ಒಂದುವರೆ ಕೋಟಿ ವಂಚನೆ? ತೀರ್ಥಹಳ್ಳಿ ಹನಿಟ್ರ್ಯಾಪ್​ ಟೀಂ ಮಹಾ ಸೆಕ್ಸ್​ ಸ್ಕ್ಯಾಂಡಲ್​ PART 1

Malenadu Today

KARNATAKA NEWS/ ONLINE / Malenadu today/ Aug 2, 2023 SHIVAMOGGA NEWS

ಇದು ಜೆಪಿ ಎಕ್ಸ್​ಕ್ಲ್ಯೂಸಿವ್ ವರದಿ! 

ಕಳೆದ  ಜೂನ್ ತಿಂಗಳಿನಲ್ಲಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನಡೆದಿದ್ದ ಹನಿಟ್ರ್ಯಾಪ್​ ಕೇಸ್ ದಾಖಲಾಗಿತ್ತು. ಕಳೆದ ಒಂದು ತಿಂಗಳ ಅವಧಿಯಲ್ಲಿ ಈ ಹನಿಟ್ರ್ಯಾಪ್​ ಪ್ರಕರಣ ರೋಚಕ ಟ್ವಿಸ್ಟ್​ ಪಡೆದುಕೊಂಡಿದೆ. ಅದರ ವಿವರವನ್ನು ಕೆಳಿದರೇ ಒಂದು ಕ್ಷಣ ದೇವ್ರೆ ಎಂದು ಉದ್ಘಾರ ತೆಗೆಯುವುದು ಗ್ಯಾರಂಟಿ. ತೀರ್ಥಹಳ್ಳಿಯಲ್ಲಿ ನಡೆದಿದ್ದ ಹನಿಟ್ರ್ಯಾಪ್​ ಕೇವಲ ಕಾಡಿನ ಜಾಗಕ್ಕಾಗಿ ನಡೆದಿತ್ತು ಎಂದು ಈ ಮೊದಲು ಹೇಳಲಾಗಿತ್ತು. ಪ್ರಕರಣದ ತನಿಖೆಯು ಅದೇ ದಿಕ್ಕಿನಲ್ಲಿ ಸಾಗಿತ್ತು. ಆದರೆ ಅಸಲಿ ಸತ್ಯ ಬಯಲಾದಾಗ ಕಂಡಿದ್ದೆ ಬೇರೆ. 

ತೀರ್ಥಹಳ್ಳಿಯಲ್ಲಿದೆ ಹನಿಟ್ರ್ಯಾಪ್​ ಟೀಂ

ಮಲೆನಾಡು ಟುಡೆ ತಂಡಕ್ಕೆ ಸಿಕ್ಕ ಮಾಹಿತಿ ಪ್ರಕಾರ, ಅಂದು ಕಾಡಿನ ಜಾಗಕ್ಕಷ್ಟೆ ಸೀಮಿತವಾಗಿ ಅರಣ್ಯ ಅಧಿಕಾರಿಯನ್ನು ಹನಿಟ್ರ್ಯಾಪ್ ಮಾಡಿರಲಿಲ್ಲ. ಆ ಪ್ರಕರಣದಲ್ಲಿ ಸಿಕ್ಕ ಟೀಂನ ಕಸುಬೇ ಹನಿಟ್ರ್ಯಾಪ್ ಆಗಿತ್ತು. ಹೀಗೊಂದು ಅಂಶ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಅಷ್ಟೆಅಲ್ಲದೆ ಇದೇ ಕೇಸ್​ನಲ್ಲಿ ಅರೆಸ್ಟ್ ಆದ ಆರೋಪಿಯೊಬ್ಬನ ಮೊಬೈಲ್​ನಲ್ಲಿ ಸಿಕ್ಕಿರುವ ವಿಡಿಯೋ ಡೇಟಾಗಳು ಪೊಲೀಸ್ ಇಲಾಖೆಯನ್ನ ಬೆಚ್ಚಿ ಬೀಳುವಂತೆ ಮಾಡಿದೆ. 

ಮನವೊಲಿಸಬೇಕಿದೆ ಪೊಲೀಸ್ ಇಲಾಖೆ

ಒಂದು ಎಫ್ಐಆರ್​ನಿಂದ ತೀರ್ಥಹಳ್ಳಿ ಪೊಲೀಸರಿಗೆ ದೊಡ್ಡಮಟ್ಟದ ಲೀಡ್ ಸಿಕ್ಕಿದೆ.  ಇದರ ಹಿಂದೆ ಶಿವಮೊಗ್ಗ ಪೊಲೀಸ್ ಇಲಾಖೆಯ ವರಿಷ್ಟಾಧಿಕಾರಿಗಳು ಶ್ರಮವೂ ಇದೆ. ಹಾಗೊಂದು ವೇಳೆ ಪೊಲೀಸ್ ಇಲಾಖೆ ಉದ್ಯಮಿಗಳ ಮನವೊಲಿಸಿ ದೂರು ಕೊಡಿಸುವಲ್ಲಿ ಸಫಲರಾದರೆ, ಈ ಪ್ರಕರಣ ರಾಜ್ಯವೇ ಕಂಡು ಕೇಳರಿಯದಂತಹ ಹನಿಟ್ರ್ಯಾಪ್​ ಕೇಸ್ ಇದಾಗುವ ಸಾಧ್ಯತೆ ಇದೆ. ಅಲ್ಲದೆ ಮಲೆನಾಡು ಜಿಲ್ಲೆಗಳಲ್ಲಿ ಈ ಟೀಂನಿಂದ ಶೋಷಣೆಗೆ ಒಳಗಾಗಿರುವ ಉದ್ಯಮಿಗಳು, ಎಸ್ಟೇಟ್ ಮಾಲೀಕರು, ದೊಡ್ಡ ಕೃಷಿಕರು, ಅಧಿಕಾರಿಗಳನ್ನು ಬಚಾವ್ ಮಾಡಬಹುದಾಗಿದೆ. ಮರ್ಯಾದೆಗೆ ಅಂಜಿ ಬಹಳಷ್ಟು ಮಂದಿ ಈ ಸಂಬಂಧ ಕಂಪ್ಲೆಂಟ್ ಕೊಡಲು ಸಿದ್ದರಿಲ್ಲ. ಹಾಗಾಗಿ ಈ ಸಂಬಂಧ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್​ರವರೇ ಖುದ್ದು ಇವರಿಂದ ಶೋಷಿತರಾದ ಸಿರಿವಂತರ ಮನವೊಲಿಸಬೇಕಿದೆ.  ಶೋಷಣೆಗೆ ಒಳಗಾದವರ ಮನವೊಲಿಸಿ, ಅಕ್ರಮ ಕೂಟ ನಡೆಸ್ತಿರುವ ಹನಿ ದಂಧೆಯನ್ನು ನಿಲ್ಲಿಸಬೇಕಿದೆ. 

4 ಹೆಣ್ಣಾಳು, 8 ಗಂಡಾಳು

ಅರಣ್ಯ ಅಧಿಕಾರಿಯೊಬ್ಬರನ್ನ ಸುಲಿಗೆ ಮಾಡಿ ಅಂದರ್ ಆಗಿರುವ ತೀರ್ಥಹಳ್ಳಿ ಹನಿಟ್ರ್ಯಾಪ್​ ಟೀಂನಲ್ಲಿ ಇನ್ನೂ ಕೆಲವರು ಸಿಕ್ಕಿಲ್ಲ. ಆ ಪೈಕಿ ಪೊಲೀಸರ ಬಲೆಗೆ ಬಿದ್ದ ಆರೋಪಿ ಮೊಬೈಲ್​ನಲ್ಲಿ ಹಲವು ವಿಐಪಿಗಳ ವಿಡಿಯೋಗಳು ಸಿಕ್ಕಿವೆ. ಇನ್ನೂ ಈ ಹನಿಟ್ರ್ಯಾಪ್​ ನಲ್ಲಿ ಇದುವರೆಗೆ ಸಿಕ್ಕ ಲೆಕ್ಕದ ಪ್ರಕಾರ,  ನಾಲ್ಕು ಹೆಣ್ಣಾಳು, 8 ಗಂಡಾಳು ಇದ್ಧಾರಂತೆ.  ತೀರ್ಥಹಳ್ಳಿಯನ್ನ ಕೇಂದ್ರಿಕರಿಸಿಕೊಂಡು ಉದ್ಯಮಿಗಳನ್ನು ಬುಟ್ಟಿಗೆ ಹಾಕಿಕೊಂಡು ಸುಲಿಗೆ ಮಾಡುವ ಈ ತಂಡ ಕೋಟಿ ಮೀರಿದ ಹಣದ ಫಸಲು ತೆಗೆದಿದೆ ಎನ್ನಲಾಗಿದೆ. 

ಮಲೆನಾಡಿನಾದ್ಯಂತ ದೋಖಾ

ಚಿಕ್ಕಮಗಳೂರು, ಕೊಪ್ಪ, ತೀರ್ಥಹಳ್ಳಿ, ಸಾಗರ, ಬಾಳೆಹೊನ್ನೂರು ಹೀಗೆ ಮಲೆನಾಡಿನ ಮೂಲೆ ಮೂಲೆಯಲ್ಲಿ ಹಣವಂತರನ್ನ ತಾಗಿರುವ ಈ ತಂಡ, ಹೆಣ್ಣುಮಕ್ಕಳನ್ನು ತೋರಿಸಿ, ಸರಿಸುಮಾರು 25 ಮಂದಿಯಿಂದ ದುಡ್ಡು ಚಿನ್ನ ದೋಚಿದೆ ಎಂಬ ಮಾಹಿತಿ ಇದೆ. ಒಂದು ಪ್ರಕರಣದಲ್ಲಿ ಬರೋಬ್ಬರಿ ನೂರು ಗ್ರಾಂ ಗೋಲ್ಡ್​ ಪೀಕಿದ್ದಾರೆ ಎನ್ನಲಾಗಿದೆ.  

ಎಚ್ಚೆತ್ತುಕೊಳ್ಳಬೇಕಿದೆ 

ತೀರ್ಥಹಳ್ಳಿಯ ಈ ಹನಿ ಟೀಂನ ಬಲೆಗೆ ಇನ್ನೂ ಯಾರ್ಯಾರು ಸಿಕ್ಕಿಬಿದ್ದಿದ್ಧಾರೆ ಎಂಬುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಬೇಕಿದೆ. ಆದರೆ ಮರ್ಯಾದೆಗೆ ಅಂಜಿ ದೂರು ಕೊಡದೇ ಇರುವುದು ಸರಿಯಲ್ಲ. ಸುಲಿಗೆಗೊಳಗಾದವರು ನೇರವಾಗಿ ಎಸ್​ಪಿ ಅಥವಾ ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ಹೇಳಿಕೊಳ್ಳಬಹುದು. ಇಲ್ಲವಾದಲ್ಲಿ ಅಶ್ಲೀಲತೆಯನ್ನೆ ಬಂಡವಾಳ ಮಾಡಿಕೊಳ್ಳುವ ಇಂತಹ ಟೀಂನ ಕಳ್ಳಾಟಕ್ಕೆ ಬ್ರೇಕ್ ಬೀಳುವುದಿಲ್ಲ. ಇವತ್ತು ಒಬ್ಬರಾದರೆ, ನಾಳೆ ಇನ್ನೊಬ್ಬರು ಸಿಕ್ಕಿ ಬಿದ್ದು ಒದ್ದಾಡುತ್ತಾರೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ವಂಚಿತರು ಮಾಹಿತಿ ನೀಡಿದರೆ ಸುಲಿಗೆಕೋರರಿಂದ ಸೇಫ್ ಆಗಬಹುದಾಗಿದೆ. 

Malenadu Today

 ​ 

 

 

Share This Article