ಮದುವೆಯಾಗೋಣ ಬಾ ಎಂದು ದೇಗುಲದಲ್ಲಿ ಅರಶಿನ ಕೊಂಬಿನ ದಾರ ಕಟ್ಟಿದ ಯುವಕ! ದಾಖಲಾಯ್ತು ಕೇಸು!?

Shivamogga Mar 19, 2024 ಯವತಿಯನ್ನ ಪ್ರೀತಿಸಿ, ಆಕೆಯನ್ನು ದೇವಸ್ಥಾನವೊಂದಕ್ಕೆ ಕರೆದೊಯ್ದು ಅರಶಿನ ಕೊಂಬು ಕಟ್ಟಿ ಮದುವೆ ಮಾಡಿಕೊಂಡ ಯುವಕನ ವಿರುದ್ಧ ಬಾಲ್ಯವಿವಾಹ ತಡೆ ಕಾಯ್ದೆಯಡಿ ಕೇಸ್‌ ದಾಖಲಾಗಿದೆ. ಶಿವಮೊಗ್ಗ ಜಿಲ್ಲೆಯ ಪೊಲೀಸ್‌ ಸ್ಟೇಷನ್‌ ಒಂದರಲ್ಲಿ ಈ ಸಂಬಂಧ ಎಫ್‌ಐಆರ್‌ ದಾಖಲಾಗಿದ್ದು, ಅಪ್ರಾಪ್ತೆಯ ವಿವರಗಳನ್ನ ಗೌಪ್ಯವಾಗಿ ಇಡಲಾಗಿದೆ. 

ಪ್ರಕರಣದಲ್ಲಿ ಯುವಕ ಸ್ಥಳೀಯ ಗ್ರಾಮದ ಬಾಲಕಿಯೊಬ್ಬಳನನ್ನ ಪ್ರೀತಿಸಿದ್ದನಂತೆ. ಆಕೆಯನ್ನು ಎಲ್ಲಿಯಾದರೂ ಹೋಗಿ ಮದುವೆಯಾಗೋಣ ಎಂದು ದೇವಸ್ಥಾನವೊಂದಕ್ಕೆ ಕರೆದೊಯ್ದು ಅರಿಶಿನ ಕೊಂಬು ಇರುವ ಅರಶಿನ ದಾರವನ್ನ ಕಟ್ಟಿದ್ದಾನೆ ಈ ವೇಳೆ ಬಾಲಕಿ ಸಹ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾಳೆ ಎನ್ನಲಾಗಿದೆ. . ಆ ಬಳಿಕ ವಿಚಾರ ಊರಿನವರಿಗೆ ಗೊತ್ತಾಗಿದೆ. ಪಂಚಾಯ್ತಿ ಮಾಡಿದ್ದಾರೆ. ಆಕೆಗೆ ಪ್ರಾಪ್ರ ವಯಸ್ಸಾದ ಮೇಲೆ ಮದುವೆ ಮಾಡಿಸಿಕೊಡುವುದಾಗಿ ಹೇಳಿ  ಇಬ್ಬರನ್ನು ದೂರದೂರ ಇರಿಸಿದ್ದಾರೆ. 

ಈ ನಡುವೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿವೆ ಈ ವಿಚಾರ ದೂರಿನ ಸ್ವರೂಪದಲ್ಲಿ ಕೇಳಿಬಂದಿದೆ. ತಕ್ಷಣ ಅಲರ್ಟ್‌ ಆದ ಅಧಿಕಾರಿ ಅಪ್ರಾಪ್ತೆಯ ಊರಿಗೆ ತೆರಳಿ ಆಕೆಯನ್ನು ರಕ್ಷಣೆ ಮಾಡಿ, ಪ್ರಕರಣದ ಸಂಬಂಧ ಕೇಸ್‌ ದಾಖಲಾಗುವಂತೆ ಶ್ರಮವಹಿಸಿದ್ದಾರೆ 

Leave a Comment