ಎಲ್ಲಿದೆ ಮೋದಿ ಗ್ಯಾರಂಟಿ!? ಶಿವಮೊಗ್ಗದಲ್ಲಿ ಕಿಮ್ಮನೆ ರತ್ನಾಕರ್​ ನೇತೃತವದಲ್ಲಿ ಕಾಂಗ್ರೆಸ್ ಸತ್ಯಾಗ್ರಹ!

Where is Modi's guarantee? Congress satyagraha led by Kimmane Ratnakar in Shimoga

ಎಲ್ಲಿದೆ ಮೋದಿ ಗ್ಯಾರಂಟಿ!? ಶಿವಮೊಗ್ಗದಲ್ಲಿ ಕಿಮ್ಮನೆ ರತ್ನಾಕರ್​ ನೇತೃತವದಲ್ಲಿ ಕಾಂಗ್ರೆಸ್ ಸತ್ಯಾಗ್ರಹ!

KARNATAKA NEWS/ ONLINE / Malenadu today/ Jul 3, 2023 SHIVAMOGGA NEWS

ಶಿವಮೊಗ್ಗ/ ಕೇಂದ್ರ ಸರ್ಕಾರ ಅಕ್ಕಿ ತಾರತಮ್ಯ ಮಾಡ್ತಿದೆ ಹಾಗೂ  ಸುಳ್ಳು ಭರವಸೆಗಳನ್ನು ನೀಡ್ತಿದೆ ಎಂಧು ಆರೋಪಿಸಿ ಇವತ್ತು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು  ಮಹಾತ್ಮಾ ಗಾಂಧಿ ಪಾರ್ಕಿನ ಗಾಂಧಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹ ಕೈಗೊಂಡರು. 

ಪ್ರತಿಭಟನೆಯ ಆರಂಭದಿಂದಲೇ  ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರದ ಸರ್ಕಾರ ಯಾವ ಭರವಸೆಗಳನ್ನೂ ಈಡೇರಿಸಿಲ್ಲ. ಅವರ ಪ್ರಣಾ ಳಿಕೆಯಲ್ಲಿ ಕೊಟ್ಟ ಭರವಸೆಗಳು ಹುಸಿಯಾಗಿವೆ. ಮೋದಿ ಅವರೇ ಹೇಳಿದಂತೆ ಉದ್ಯೋಗ ಕೊಟ್ಟಿಲ್ಲ. ಮನೆಗಳನ್ನು ಕಟ್ಟಿಸಿಲ್ಲ. ಹಣ ಹಾಕುತ್ತೇವೆ ಎಂದರು. ಅದನ್ನೂ ಕೊಟ್ಟಿಲ್ಲ. ಮಹಿಳೆಯರಿಗೆ ಮದುವೆಗೆ ಚಿನ್ನ ಕೊಡುತ್ತೇವೆ ಎಂದಿದ್ದರು. ಅದನ್ನೂ ಕೊಟ್ಟಿಲ್ಲ. ಯಾವ ಭರವಸೆಗಳನ್ನೂ ಅವರು ಈಡೇರಿಸಿಲ್ಲ. ಈಗ ರಾಜ್ಯ ಸರ್ಕಾರಕ್ಕೆ ಅಕ್ಕಿಯನ್ನೂ ಕೊಡಲಿಲ್ಲ ಎಂದು ಆರೋಪಿಸಿದ್ರು. 

ಕೇಂದ್ರ ಸರ್ಕಾರ  9 ವರ್ಷಗಳ ಹಿಂದೆಯೇ ಹಲವು ಭರವಸೆಗಳನ್ನು ನೀಡಿತ್ತು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿತ್ತು. ಅದರಂತೆ 9 ವರ್ಷದಲ್ಲಿ 18 ಕೋಟಿ ಉದ್ಯೋಗಗಳನ್ನು ನೀಡಬೇಕಿತ್ತು. ಆದರೆ ನೀಡುವುದಿರಲಿ, ಇರುವ ಉದ್ಯೋಗಗಳನ್ನೇ ಕಸಿದುಕೊಂಡಿದೆ ಎಂದು ದೂರಿದರು. 

ಇನ್ನೂ ವೇಳೆ ಆಕ್ರೋಶ ಹೊರಹಾಕಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಅಧಿಕಾರ ಇಲ್ಲದೆ ಬದುಕಲು ಸಾಧ್ಯವೇ  ಇಲ್ಲ ಎಂಬಂತೆ ಬಿಜೆಪಿಯವರು ವರ್ತಿಸುತ್ತಿದ್ಧಾರೆ ಎಂದು ಆರೋಪಿಸಿದ್ರು. ಬಿಜೆಪಿಯವರು, ಹಪಾಹಪಿತನಕ್ಕೆ ಒಳಗಾಗಿದ್ದಾರೆ. ಜಾತಿ, ಧರ್ಮ, ಹಣದ ಮೇಲೆ ಅದೂ ಸಾಧ್ಯವಾಗದಿದ್ದರೆ ಶಾಸಕರನ್ನು ಕೊಂಡುಕೊಳ್ಳುವ ಮೂಲಕ ಪ್ರಜಾಪ್ರಭುತ್ವವನ್ನೇ ಖರೀದಿ ಮಾಡಿದ್ದಾರೆ ಎಂದ ಕಿಮ್ಮನೆ ರತ್ನಾಕರ್​,  ಪ್ರಣಾಳಿಕೆಯಲ್ಲಿ ನೀಡಿದ ಯಾವ ಭರವಸೆಯನ್ನೂ ಈಡೇರಿಸದ ಬಿಜೆಪಿ,  ಈಗ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಮನೆಗಳನ್ನೂ ನೀಡಲಿಲ್ಲ. ಉದ್ಯೋಗವನ್ನೂ ಕೊಡಲಿಲ್ಲ. ಡಾಲರ್ ರೇಟ್ ಇಳಿಸುತ್ತೇವೆ ಎಂದು ಅದನ್ನೂ ಮಾಡಲಿಲ್ಲ ಎಂದರು.