ಬಾನುಮತಿ ಆನೆ ಬಾಲ ಕಟ್ ಮಾಡಿದ್ದು ಯಾರು? ಸತ್ಯ ಹೊರಬಿತ್ತು! ಏನಿದು ರಿಪೋರ್ಟ್!
The truth about who cut the tail of Banumati elephant of Sakrabile Elephant Camp is now out. ಸಕ್ರೆಬೈಲ್ ಆನೆ ಕ್ಯಾಂಪ್ನ ಬಾನುಮತಿ ಆನೆ ಬಾಲ ಕಟ್ ಮಾಡಿದ್ದು ಯಾರು ಎಂಬುದರ ಸತ್ಯ ಇದೀಗ ಹೊರಕ್ಕೆ ಬಂದಿದೆ
![ಬಾನುಮತಿ ಆನೆ ಬಾಲ ಕಟ್ ಮಾಡಿದ್ದು ಯಾರು? ಸತ್ಯ ಹೊರಬಿತ್ತು! ಏನಿದು ರಿಪೋರ್ಟ್!](https://malenadutoday.com/uploads/images/202310/image_870x_652e79ca86e95.webp)
KARNATAKA NEWS/ ONLINE / Malenadu today/ Nov 9, 2023 SHIVAMOGGA NEWS
Shivamogga | ಶಿವಮೊಗ್ಗ ಸಕ್ರೆಬೈಲ್ ಆನೆ ಬಿಡಾರದಲ್ಲಿದ್ದ ಬಾನುಮತಿ ಆನೆಯ ಬಾಲ ಕತ್ತರಿಸಿದ ಸುದ್ದಿ ಮಲೆನಾಡು ಟುಡೆ.ಕಾಂ (malenadutoday.com) ನ ಎಕ್ಸ್ಕ್ಲ್ಯೂಸಿವ್ ವರದಿಯಾಗಿತ್ತು.ತುಂಬು ಗರ್ಭಿಣಿಯ ಬಾಲಕ್ಕೆ ಕತ್ತಿ ತಾಗಿಸಿದ್ದನ್ನ ತನಿಖಾ ರೂಪದಲ್ಲಿ ಮಲೆನಾಡು ಟುಡೆ ಬಿತ್ತರಿಸಿತ್ತು…
ಈ ವರದಿಯನ್ನ ಟುಡೆ ಓದುಗರು ಮನಸ್ಸಿಗೆ ತೆಗೆದುಕೊಂಡಿದ್ದರು. ಆನೆಯ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದರು. ಆಕ್ರೋಶ ಹೊರಹಾಕಿದ್ದರು. ಇದೆಲ್ಲದರ ಪರಿಣಾಮವಾಗಿ ಅರಣ್ಯ ಇಲಾಖೆ ಆನೆ ಬಾಲಕ್ಕೆ ಕತ್ತಿ ಹಾಕಿದವರು ಯಾರು ಎಂದು ತನಿಖಾ ವರದಿ ತಯಾರಿಸಲು ಸೂಚಿಸಿತ್ತು.
READ : ಚಿಕ್ಕಮ್ಮನ ಕುತ್ತಿಗೆ ಬಿಗಿದು ಮಾಂಗಲ್ಯ ಕದ್ದಿದ್ದ ಆರೋಪಿ! 24 ಗಂಟೆಯಲ್ಲಿ ಅರೆಸ್ಟ್ !
ಸದ್ಯ ಈ ವರದಿಯು ಇಲಾಖೆಯ ಕೈ ಸೇರಿದ್ದು, ಗರ್ಭಿಣಿ ಭಾನುಮತಿ ಆನೆಯ ಬಾಲಕ್ಕೆ ಕತ್ತಿ ಹಾಕಿದ್ದು ಬಿಡಾರದ ಸಿಬ್ಬಂದಿಯೇ ಆಗಿದ್ದಾರೆ ಎಂಬುದು ಇಲಾಖಾ ಅಧಿಕಾರಿಗಳಿಗೆ ಗೊತ್ತಾಗಿದೆ. ಅಚಾತುರ್ಯದಿಂದ ಈ ಘಟನೆ ನಡೆದಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಮರದ ಕೊಂಬೆ, ಗಿಡಗಳನ್ನು ಕಡಿಯಲು ಕತ್ತಿ, ಇತರೆ ವಸ್ತುಗಳನ್ನು ಆನೆಗಳನ್ನು ಕಾಡಿಗೆ ಬಿಡುವ ಸಂದರ್ಭದಲ್ಲಿ ತೆಗೆದುಕೊಂಡು ಹೋಗಲಾಗುತ್ತದೆ. ಈ ಸಂದರ್ಭದಲ್ಲಿ ಅಚಾರ್ತುಯದಿಂದ ಆನೆ ಬಾಲಕ್ಕೆ ಕತ್ತಿ ಏಟು ಬಿದ್ದಿದೆ ಎಂದು ಉಲ್ಲೇಖವಾಗಿದೆ.
ಸದ್ಯಕ್ಕಿಷ್ಟು ಮಾಹಿತಿ ಲಭ್ಯವಾಗಿದೆ. ಆದಾಗ್ಯು ಕೆಲವು ಪ್ರಶ್ನೆಗಳು ಹಾಗೆ ಉಳಿದುಕೊಂಡಿದೆ. ಭವಿಷ್ಯದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಎಲ್ಲದಕ್ಕೂ ಉತ್ತರ ನೀಡುವ ನಿರೀಕ್ಷೆಯಿದೆ.