Tuesday, 29 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

trekking in mudigere ಚಿತ್ರದುರ್ಗದ 10 ಜನ ವಿದ್ಯಾರ್ಥಿಗಳು ಬಂಡಾಜೆ ಕಾಡಲ್ಲಿ ಮಿಸ್ಸಿಂಗ್​ | ನಂತರ ನಡೆದಿದ್ದೇನು

prathapa thirthahalli
Last updated: June 10, 2025 2:15 pm
Prathapa thirthahalli - content producer
Share
SHARE

trekking in mudigere ಚಿತ್ರದುರ್ಗದ 5 ಜನ ಹುಡುಗಿಯರು 5 ಜನ ಹುಡುಗರು ಕಾಡಲ್ಲಿ ಮಿಸ್ಸಿಂಗ್​ | ನಂತರ ನಡೆದಿದ್ದೇನು

ಚಾರಣ, ಟ್ರಕ್ಕಿಂಗ್​, ಜಗತ್ತನ್ನೆ ಒಲ್ಲದ ಮನಸ್ಸಿಗೆ ಏಕಾಂತದ ಜೊತೆಗೆ ಸಾಹಸದ ಅನುಭವ ನೀಡುವ ಹಾಗೂ ಕಾಡು ಮೇಡಿನ ನಿಸರ್ಗದೌತಣ ನೀಡುವ ಆಹ್ಲಾದಕರ ಅನುಭೂತಿ. ಈ ಕಾರಣಕ್ಕೆ ಅವಕಾಶ ಸಿಕ್ಕಾಗೆಲ್ಲಾ, ಸಮಯ ಮಾಡಿಕೊಂಡು ಜನರು ಟ್ರಕ್ಕಿಂಗ್ ಹೊರಟು ಬಿಡುತ್ತಾರೆ. ಎಂತಾರೂ ಆಗಲಿ, ಒಂದು ಕೈ ನೋಡಿಬಿಡುವ , ದಿನ ಸಾಯುವುದು ಇದ್ದಿದ್ದೆ ಎಂದುಕೊಂಡು ಬೆನ್ನಿಗೊಂದು ಬ್ಯಾಗ್ ಹೇರಿಕೊಂಡು ಚಾರಣಕ್ಕೆ ಹೊರಟುಬಿಡುತ್ತಾರೆ. ಆದರೆ ಈ ಹೊತ್ತಲ್ಲಿ ತಾವು ಹೋಗುವ ಪ್ರಯಾಣ ಜೀವನದ ಕೊನೆಯ ಪಯಣ ಆಗಬಹುದು ಎಂದು ಯಾರೂ ಸಹ ನಿರೀಕ್ಷಿಸಿರುವುದಿಲ್ಲ. ಆದಾಗ್ಯು ಕೆಲವೊಮ್ಮೆ ಚಾರಣ ಮರಣದ ಹಾದಿಯನ್ನು ತೋರಿಬಿಡುತ್ತದೆ. ಇದಕ್ಕೆ ಚಿತ್ರದುರ್ಗದ ಘಟನೆಯೊಂದು ಸಾಕ್ಷಿಯಾಗಿದೆ. 

trekking in mudigere  ಅವರು ಚಿತ್ರದುರ್ಗದ ಮೆಡಿಕಲ್​ ಕಾಲೇಜಿನಲ್ಲಿ ಓದುತ್ತಿರುವ ಗೆಳೆಯರು. ಅವರಿಗೊಮ್ಮೆ ಹೀಗೆ ಟ್ರಕ್ಕಿಂಗ್​ ಹೋಗುವ ಮನಸ್ಸಾಯಿತು, ಎಲ್ಲರೂ ತೀರ್ಮಾನ ಮಾಡಿ ಒಟ್ಟು 10 ಜನ ಟ್ರಕಿಂಗ್​ಗೆ ಹೋಗುವುದಾಗಿ ನಿರ್ಧರಿಸಿದ್ದರು. ಹೀಗೆ ನಿರ್ಧರಿಸಿದ್ದವರ ಪೈಕಿ 5 ಜನ ಹುಡುಗಿಯರು 5 ಜನ ಹುಡುಗರು ಇದ್ದರು.  ಟ್ರಕಿಂಗ್​ ಮಾಡಲು ಆಯ್ಕೆ ಮಾಡಿಕೊಂಡಿದ್ದ ಸ್ಥಳ ಮೂಡಿಗೆರೆ ತಾಲೂಕಿನ ಬಲ್ಲಾಳರಾಯನದುರ್ಗಾ. ಸರಿ ಎಂದು ಎಲ್ಲರೂ ಸಹ ಬ್ಯಾಕ್​ ಪ್ಯಾಕ್​ ಬೆನ್ನಿಗೆರಿಸಿಕೊಂಡು ಮೂಡಿಗೆರೆ ತಾಲೂಕಿಗೆ ತೆರಳಿದರು. ಅಲ್ಲಿನ ಪರಿಸರ ವಾತಾವರಣ ಸ್ನೇಹಿತರಿಗೆ ಬಹಳಾ ಖುಷಿಯನ್ನು ನೀಡಿತ್ತು. ನಂತರ  ಬಲ್ಲಾಳರಾಯನ ದುರ್ಗಾ ಕಡೆಯಿಂದ ಟಿಕೆಟ್ ಬುಕ್ ಮಾಡಿ, ಬಂಡಾಜೆ ಭಾಗದಿಂದ ಟ್ರಕ್ಕಿಂಗ್ ಹೊರಟರು. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

trekking in mudigere ಅಲ್ಲಿ ದಟ್ಟವಾದ ಕಾಡು ಬಾನೆತ್ತರಕ್ಕೆ ಬೆಳೆದು ನಿಂತ ಮರಗಳು, ಸೂರ್ಯನ ಕಿರಣವನ್ನು  ಅಡ್ಡ ಹಾಕಿ ಭೂಮಿಯ ಮೇಲ್ಮೈಗೆ ನೆರಳಿನ ಕತ್ತಲು ಸೋಕಿಸುತ್ತಿದ್ದ ಕೊಂಬೆಗಳು ಟ್ರಕ್ಕಿಂಗ್ ಹೊರಟವರ ಮನಸ್ಸಿಗೆ ಮುದದ ಜೊತೆ ಆತಂಕವನ್ನು ಮೂಡಿಸಿತ್ತು. ಆದರೂ ದೈರ್ಯ ಮಾಡಿ ಯುವಕರು ಟ್ರೆಕಿಂಗ್​ಗೆ ಕಾಡೊಳಗೆ ನುಗ್ಗಿಯೇ ಬಿಟ್ಟರು. ಕಾಡಿನಲ್ಲೆಲ್ಲಾ ಸುತ್ತಾಡಿದರು ಗುಡ್ಡ ಬೆಟ್ಟಗಳನ್ನು ಹತ್ತಿದರು ಪ್ರಕೃತಿಯೊಂದಿಗೆ ಬೆರೆತು ಸಂತೋಷದಿಂದ ಸಮಯ ಕಳೆದರು. ನಂತರ ಸಂಜೆಯ ಸಮಯ ಹತ್ತಿರ ಬಂದಿತು. ವಾಪಸ್​​ ಬರಲು ಮನಸ್ಸಿಲ್ಲದಿದ್ದರೂ ಕೂಡ ಒಲ್ಲದ ಮನಸ್ಸಿನಿಂದ ಕಾಡಿಗೆ ಬೀಳ್ಗೊಡಲು ಎಲ್ಲರು ಸಿದ್ದರಾದರು. ಆದರೆ ಕಾಡಿನಲ್ಲಿ ಎಲ್ಲಿ ಹುಡುಕಿದರೂ ಕೂಡ ಸ್ನೇಹಿತರಿಗೆ ವಾಪಸ್​ ಬರುವ ದಾರಿಯೇ ಕಾಣಲಿಲ್ಲ. ಕಾಡೆಂದರೆ ಹಾಗೆ ಕುತೂಹಲದ ಜೊತೆಗೆ ಕರಾಳ ನಿಗೂಢವನ್ನು ಮುನ್ನೆಲೆಗೆ ತಂದಿಡುತ್ತದೆ. ಯಾವಾಗ ಚಾರಣಿಗೆರಿಗೆ ದಾರಿ ಗೊತ್ತಾಗಲಿಲ್ಲವೋ ಅವರಲ್ಲಿ ಆತಂಕ ಹೆಚ್ಚಾಗಿತ್ತು. ಗೂಗಲ್ ಮ್ಯಾಪ್​ ಕೂಡ ಅವರ ಸಹಕಾರಕ್ಕೆ ಬರಲಿಲ್ಲ. ದಾರಿ ತಿಳಿಯದೆ ವಿಧ್ಯಾರ್ಥಿಗಳು ಕಾಡಲ್ಲಿ ಅಲೆದಾಡಿ ಅತಂತ್ರವಾಗಿ ನಿತ್ರಾಣಗೊಂಡರು. 

car decor
NES Head Office, Balaraja Urs Road, Shivamogga

trekking in mudigere ಅತ್ತ ಕಾಡಲ್ಲಿ ಚಾರಣಿಗ ವಿದ್ಯಾರ್ಥಿಗಳು ಭಯದಲ್ಲಿ ನೆರವಿನ ನಿರೀಕ್ಷೆ ಹೊತ್ತು ದೇವರ ನೆನೆಯುತ್ತಿರುವ ಹೊತ್ತಿಗೆ, ಅವರ ಬಾಯಿ ಹರಕೆ ಎನ್ನುವಂತೆ, ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ಹೇಗೋ ವಿದ್ಯಾರ್ಥಿಗಳು ಇರುವ ಮಾಹಿತಿ ಸಿಕ್ಕಿತು. ಸುಮಾರು  6 ಗಂಟೆಗಳ ಕಾಲ  ಮಧ್ಯರಾತ್ರಿ 02 ಗಂಟೆಯ ವರೆಗೇ ಕಾಡಿನಲ್ಲಿ ಶೋಧ ನಡೆಸಿದರು. ಹಾಗೂಹೀಗೂ ಪ್ರಯಾಸ ಪಟ್ಟು ವಿದ್ಯಾರ್ಥಿಗಳನ್ನು  ಹುಡುಕಿ ಪತ್ತೆ ಹಚ್ಚಿದರು. ಹಸಿವು ಬಾಯಾರಿಕೆಯಿಂದ ಜೀವದ ಆಸೆಯನ್ನೇ ಬಿಟ್ಟಿದ್ದ ವಿದ್ಯಾರ್ಥಿಗಳಿಗೆ ಇದರಿಂದಾಗಿ ಮರು ಜನ್ಮಸಿಕ್ಕಂತಾಯಿತು. ಕಾಡಲ್ಲಿ ಸಿಕ್ಕ ವಿದ್ಯಾರ್ಥಿಗಳನ್ನು ಪೊಲೀಸರು ಸುರಕ್ಷಿತವಾಗಿ ತಂದು ವಾಪಸ್ ಕಳುಹಿಸಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ವಿದ್ಯಾರ್ಥಿಗಳ ಅಭಿನಂದನೆ ತಿಳಿಸಿದರು.

malenadutoday add
TAGGED:trekking in mudigere
Share This Article
Facebook Whatsapp Whatsapp Telegram Threads Copy Link
prathapa thirthahalli
ByPrathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Previous Article police trekking police trekking 10 ಕ್ಕೂ ಹೆಚ್ಚು ಜನ ಪೊಲೀಸರಿಂದ ಆಪರೇಶನ್​ ಟ್ರೆಕ್ಕಿಂಗ್​
Next Article Mescom No Online Services for 2 days  Important Alert Power cut on July 17Important Alert Power cut on July 17 Power outage shivamogga power outage tomorrow ಶಿವಮೊಗ್ಗದ ಈ ಪ್ರದೇಶಗಳಲ್ಲಿ ನಾಳೆ ವಿದ್ಯುತ್​ ವ್ಯತ್ಯಯ
Leave a Comment

Leave a Reply Cancel reply

Your email address will not be published. Required fields are marked *

You Might Also Like

ಮಲೆನಾಡ ರೈತರ ಹೋರಾಟಕ್ಕೆ ಎಚ್ಚೆತ್ತ ಸರ್ಕಾರ | ಮಾತುಕತೆಗೆ ಆಹ್ವಾನ

By 13

DINA BHAVISHYA OCTOBER 12 | ನಿಮ್ಮ ಯೋಚನೆಗೆ ಇಲ್ಲಿದೆ ಪರಿಹಾರ | ದಿನಭವಿಷ್ಯ!

By 13

ಬಳ್ಳಾರಿ ಜೈಲಿಗೆ ದರ್ಶನ್‌ ಶಿಫ್ಟ್‌ | ತಲೆ ಎತ್ತಿ ನೋಡದ ಡಿಬಾಸ್‌ | ಹೊಸ ಕೈದಿ ನಂಬರ್‌ ಎಷ್ಟು ಗೊತ್ತಾ | ಏನೇನೆಲ್ಲಾ ಆಯ್ತು | Photo & Video Story

By 13

Daily astrology Kannada | ಈ ರಾಶಿಯವರಿಗೆ ಇಂದು ಧನಲಾಭ| ಹೇಗಿದೆ ಇವತ್ತಿನ ರಾಶಿ ಭವಿಷ್ಯ |

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up