Rameswaram cafe blast case | ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣ! ತೀರ್ಥಹಳ್ಳಿ ಮಾಜ್ ಮುನೀರ್ NIA ಕಸ್ಟಡಿಗೆ!

tirthahalli Maz Muneer arrested by NIA in Bangalore Rameswaram cafe blast case

Rameswaram cafe blast case | ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣ! ತೀರ್ಥಹಳ್ಳಿ ಮಾಜ್ ಮುನೀರ್ NIA ಕಸ್ಟಡಿಗೆ!
Maz Muneer,Bangalore Rameswaram cafe blast case

shivamogga Mar 15, 2024 : ರಾಮೇಶ್ವರಂ ಕೆಫೆ ಬ್ಲಾಸ್ಟ್  ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ ಎನ್​ಐಎ  ಮತ್ತೊಬ್ಬ ಸಸ್ಪೆಕ್ಟ್​​ನ್ನು ವಿಚಾರಣೆಗೆ ಪಡೆದಿದೆ. ಈ ಸಲ ತೀರ್ಥಹಳ್ಳಿಯ ಮಾಜ್ ಮುನೀರ್​ನನ್ನ ವಶಕ್ಕೆ ಪಡೆದು ಎನ್​ಐಎ ವಿಚಾರಣೆ ನಡೆಸ್ತಿದೆ. 

Bengaluru Rameshwaram Cafe blast case ನಲ್ಲಿ ಈಗಾಗಲೇ ಬಳ್ಳಾರಿಯಲ್ಲಿ ಶಂಕಿತನೊಬ್ಬನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿರುವ ರಾಷ್ಟ್ರೀಯ ತನಿಖಾ ದಳ ಇದೀಗ ತೀರ್ಥಹಳ್ಳಿ ಮೂಲದ ಮಾಜ್ ಮುನೀರ್​ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದೆ. 

2022  ಸೆಪ್ಟೆಂಬರ್​ನಿಂದ ಮಾಜ್​ ಮುನೀರ್​ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಶಿವಮೊಗ್ಗ ಟ್ರಯಲ್​ ಬ್ಲಾಸ್ಟ್​ ಕೇಸ್​ ಹಾಗೂ ಮಂಗಳೂರು ಗೋಡೆ ಬರಹ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಾಜ್ ಮುನೀರ್​ನ ಎನ್​ಐಎ ಮತ್ತೆ ಅನುಮಾನದ ಮೇರೆಗೆ ತನ್ನ ವಶಕ್ಕೆ ಬಾಡಿ ವಾರಂಟ್ ಮೇಲೆ ಪಡೆದಿದೆ. 

ಏಳುದಿನಗಳ ಕಾಲ ವಿಚಾರಣೆಗಾಗಿ ಬಾಡಿ ವಾರಂಟ್ ಮೇಲೆ ಪಡೆದಿರುವ ಎನ್​ಐಎ ಅಧಿಕಾರಿಗಳು ಈ ಸಂಬಂಧ ತನಿಖೆ ತೀವ್ರಗೊಳಿಸಿದ್ದಾರೆ. ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಎನ್​ಐಎಗೆ ದೊಡ್ಡ ಲೀಡ್ ಸಿಕ್ಕಿದೆ ಎನ್ನಲಾಗಿದೆ. ಕೆರಳ ಮೂಲದ ಐಸಿಸಿ ಮಾಡ್ಯುಲ್​ನ ಸಪೋರ್ಟ್ ಪಡೆದು ಶಿವಮೊಗ್ಗ ಐಸಿಸ್​ ಮಾಡ್ಯುಲ್​ನ ಆರೋಪಿಗಳು ದಕ್ಷಿಣ ಭಾರತದಲ್ಲಿ ಶಂಕಿತ  ಚಟುವಟಿಕೆಗಳನ್ನು ನಡೆಸ್ತಿದ್ದರು. ಶಿವಮೊಗ್ಗ ಟ್ರಯಲ್ ಬ್ಲಾಸ್ಟ್, ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣ ಹಾಗೂ ಬೆಂಗಳೂರು ರಾಮೇಶ್ವರಂ ಕೆಫೆ ಬ್ಲಾಸ್ಟ್​​ ಕೇಸ್​ಗೂ ಇಂಟರ್ ಲಿಂಕ್​ ಇದೆ ಎಂಬ ಅನುಮಾನ ಎನ್​ಐಎದ್ದಾಗಿದೆ. 

ಈಗಾಗಲೇ ಡಿಎನ್​ಎ ಹಾಗೂ ಸ್ಫೋಟಕದ ಮಾದರಿಗಳನ್ನ ಪರೀಕ್ಷೆಗೆ ಒಳಪಡಿಸಿರುವ ಎನ್​ಐಎ ಬಳ್ಳಾರಿಯಲ್ಲಿ ಪ್ರಕರಣದ ಆರೋಪಿಯು ಭೇಟಿಯಾಗಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದಿದೆ. ಅದೆ ನಿಟ್ಟಿನಲ್ಲಿ ರಾಮೇಶ್ವರಂ ಕೆಫೆ ಪ್ರಕರಣದಲ್ಲಿ ಎನ್​ಐಎ ಎರಡನೇ ವ್ಯಕ್ತಿಯಾಗಿ ಮಾಜ್ ಮುನೀರ್​​ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದೆ ಎಂದು ಬೆಂಗಳೂರು ನ್ಯೂಸ್​ ಮೂಲಗಳು ತಿಳಿಸಿವೆ.