ನಾಳೆ ಶಾಸಕ ಎಸ್​ಎನ್​ ಚನ್ನಬಸರಪ್ಪರವರಿಗೆ ನೇರವಾಗಿ ಫೋನ್​ ಮಾಡಿ ಸಮಸ್ಯೆ ಹೇಳಿಕೊಳ್ಳಬಹುದು! ಹೇಗೆ ಗೊತ್ತಾ?

Those interested can call MLA SN Channabasarappa directly tomorrow and tell him about the problem. Do you know how?

ನಾಳೆ ಶಾಸಕ  ಎಸ್​ಎನ್​ ಚನ್ನಬಸರಪ್ಪರವರಿಗೆ ನೇರವಾಗಿ ಫೋನ್​ ಮಾಡಿ ಸಮಸ್ಯೆ ಹೇಳಿಕೊಳ್ಳಬಹುದು!  ಹೇಗೆ ಗೊತ್ತಾ?

KARNATAKA NEWS/ ONLINE / Malenadu today/ Jun 28, 2023 SHIVAMOGGA NEWS

ಶಿವಮೊಗ್ಗ: ರೇಡಿಯೋ ಶಿವಮೊಗ್ಗ 90.8 ಎಫ್‌ಎಂ ಸಮುದಾಯ ಬಾನುಲಿಯಲ್ಲಿ ನಾಳೆ ಅಂದರೆ, ಜೂ.29ರ  ಬೆಳಗ್ಗೆ 10 ಗಂಟೆಯಿಂದ ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರೊಂದಿಗೆ ನೇರ ಸಂವಾದ, ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಈ ಹಿನ್ನೆಲೆಯಲ್ಲಿ ಬೆಳಗ್ಗೆ 10:30ರಿಂದ ಸಾರ್ವಜನಿಕರು ಕರೆಗಳನ್ನು ಮಾಡಿ ಶಾಸಕರೊಂದಿಗೆ ಮಾತನಾಡಬಹುದು.  ಕಾರ್ಯಕ್ರಮದ ಅವಧಿಯಲ್ಲಿ ರೇಡಿಯೋ ಶಿವಮೊಗ್ಗದ 96860 96279 ಕರೆ ಮಾಡಬಹುದಾಗಿದೆ ಎಂಧು ಪ್ರಕಟಣೆಯಲ್ಲಿ ತಿಳಿಸಲಾಗಿದೆ.   

ಈ  ಕಾರ್ಯಕ್ರಮವನ್ನು ರೇಡಿಯೋ ಶಿವಮೊಗ್ಗ ಮೊಬೈಲ್ ಆ್ಯಪ್ ನಲ್ಲಿಯು ಕೇಳಬಹುದು. ಚನ್ನಬಸಪ್ಪನವರು ಶಾಸಕರಾದ ನಂತರ ಪಾಲ್ಗೊಳ್ಳುತ್ತಿರುವ ಪ್ರಥಮ ಬಾನುಲಿ ಲೈವ್ ಫೋನ್ ಇನ್ ಇದಾಗಿದೆ. ಕೇಳುಗರು ಕರೆ ಮಾಡಿ, ಭಾಗವಹಿಸಿಬೇಕೆಂದು ನಿಲಯ ನಿರ್ದೆಶಕ ಜಿ.ಎಲ್‌. ಜನಾರ್ದನ್‌ ಕೋರಿದ್ದಾರೆ.


ಟಿಪ್ಪು ನಗರ ಮತ್ತು ದ್ರೌಪದಮ್ಮ ಸರ್ಕಲ್​ನಲ್ಲಿ SKIRMISH ಕೇಸ್​ ! ಇದುವರೆಗೂ 10 ಆರೋಪಿಗಳು ಅರೆಸ್ಟ್

ಶಿವಮೊಗ್ಗ ನಗರದ ಟಿಪ್ಪುನಗರ ಹಾಗೂ ದ್ರೌಪದಮ್ಮ ವೃತ್ತದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಿಗೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು ಇದುವರೆಗೂ  ಒಟ್ಟು 10 ಜನರನ್ನು ಬಂಧಿಸಿದ್ದಾರೆ. ಕಳೆದ  ಭಾನುವಾರ ಸಂಜೆ ಟಿಪುನಗರದಲ್ಲಿ ಆಟೋ ಬೈಕ್​ಗೆ ಟಚ್​ ಆದ ಕಾರಣಕ್ಕೆ ಎರಡು ಗುಂಪು ನಡುವೆ ಗಲಾಟೆ ನಡೆದಿತ್ತು. ಈ ವೇಳೇ, ಸಂದೇಶ್ ಎಂಬಾತನ ಮೇಲೆ ಅನ್ಯಕೋಮಿನ ಗುಂಪು ಹಲ್ಲೆ ನಡೆಸಿತ್ತು. ಅಲ್ಲದೆ ಇದೇ ವಿಚಾರವಾಗಿ ದೂರು, ಪ್ರತಿದೂರು ದಾಖಲಾಗಿ ಪ್ರಕರಣ ಸಂಬಂಧ ಒಟ್ಟಾರೆ 8 ಮಂದಿಯನ್ನು ಬಂಧಿಸಲಾಗಿದೆ. ಇನ್ನೂ  ದ್ರೌಪದಮ್ಮ ಸರ್ಕಲ್​ನಲ್ಲಿ ನಡೆದ ಹಲ್ಲೆ ಕೇಸ್​ನಲ್ಲಿ,  ವಿಜಯಕುಮಾರ್ ಎಂಬಾತನ ಬೆನ್ನಿಗೆ ಸ್ಕ್ರೂಡ್ರೈವರ್​ನಿಂದ ಚುಚ್ಚಲಾಗಿತ್ತು. ಈ ಪ್ರಕರಣದಲ್ಲಿ ಇಬ್ಬರನ್ನ ಬಂಧಿಸಲಾಗಿದೆ ಎಂದು ಎಸ್​ಪಿಯವರು ಈಗಾಗಲೇ ತಿಳಿಸಲಾಗಿದೆ. ಸದ್ಯ ಎರಡು ಪ್ರಕರಣಗಳಲ್ಲಿಯು ಆರೋಪಿಯನ್ನ ಬಂಧಿಸಿರುವ ಪೊಲೀಸರು, ಮುಂದಿನ ತನಿಖೆ ಕೈಗೊಂಡಿದ್ಧಾರೆ. 


ಗೋವಾ ಪೊಲೀಸರಿಂದ ಶಿವಮೊಗ್ಗದ ಮೂವರ ಬಂಧನ! ಕಾರಣವೇನು? ಉಡುಪಿ ಪೊಲೀಸರಿಗೂ ಬೇಕಾಗಿದ್ದ ಆರೋಪಿ!

ಶಿವಮೊಗ್ಗ ಜಿಲ್ಲೆಯ ಮೂವರನ್ನ ಗೋವಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೂವರು ಗೋವಾದಲ್ಲಿ ವಾಸಿಸುತ್ತಿದ್ದ ಮೂವರಿಂದ 23 ದುಬಾರಿ ಮೊಬೈಲ್​ಗಳನ್ನು ವಶಕ್ಕೆ ಪಡೆದಿದ್ಧಾರೆ. ಪಣಜಿ ಪೊಲೀಸರು ಮೊಬೈಲ್​ ಕಳ್ಳರ ಜಾಲವನ್ನು ಭೇದಿಸಿದ್ದಾರೆ. ಸ್ಯಾಮ್​ಸಾಂಗ್ ಗೆಲಾಕ್ಸಿ ಮೊಬೈಲ್ ಕಳ್ಳತನ ಸಂಬಂಧ ದಾಖಲಾದ ದೂರಿನನ್ವಯ ತನಿಖೆ ನಡೆಸಿದ ಪೊಲೀಸರು ಶಿವಮೊಗ್ಗ ಮೂಲದ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. 25 ವರ್ಷದ ಡಿಕೆ ಲಕ್ಷ್ಮಣ ಹಾಗೂ 30 ವರ್ಷದ ಸಂದೀಪ್​ ಹಾಗೂ 35 ವರ್ಷದ ಸಂತೋಷ್ ಬಂಧಿತ ಆರೋಪಿಗಳು

ಗೋವಾದ ವಿವಿಧ ನಗರಗಳಲ್ಲಿ ಇವರು ಮೊಬೈಲ್ ಕಳ್ಳತನ ಮಾಡುತ್ತಿದ್ದರು, ಶಿಫ್ಟ್​ಗಳಲ್ಲಿ ಕೆಲಸ ಮಾಡುತ್ತಿದ್ದವರನ್ನ ಟಾರ್ಗೆಟ್ ಮಾಡುತ್ತಿದ್ದ ಇವರು,  ಶಿಫ್ಟ್​ನಲ್ಲಿ ಕೆಲಸ ಮುಗಿಸಿ ರೂಮಿಗೆ ಬರುವವರನ್ನು ಹಿಂಬಾಲಿಸುತ್ತಿದ್ದರು. ಷೇರಿಂಗ್ ರೂಮ್​ಗಳಲ್ಲಿ,  ಶಿಫ್ಟ್ ಮುಗಿಸಿ ರೂಮಿಗೆ ಬರುವವರಿಗಾಗಿ ಬಾಗಿಲು ತೆಗೆಯಬೇಕಾಗುತ್ತದೆ ಎಂದು ಡೋರ್​ನ್ನ ಲಾಕ್ ಮಾಡದೇ ಇರುವ ಅಭ್ಯಾಸವಿರುತ್ತದೆ. ಇದನ್ನ  ಬಂಡವಾಳ ಮಾಡಿಕೊಳ್ತಿದ್ದ ಈ ಆರೋಪಿಗಳು, ಅಂತಹ ರೂಮ್​ಗಳಿಗೆ ಹೋಗಿ ಮೊಬೈಲ್ ಕದ್ದು ಪರಾರಿಯಾಗುತ್ತಿದ್ದರು. ಹಾಗೊಂದು ವೇಳೆ ಯಾರಾದರೂ ವಿಚಾರಿಸಿದರೆ, ತಾವು ಮೂಗರು..ಮಾತು ಬರೋದಿಲ್ಲ ಏನಾದರೂ ಸಹಾಯ ಮಾಡಿ ಎಂದು ನಕಲಿ ವೈದ್ಯರ ಸರ್ಟಿಫಿಕೇಟ್​ಗಳನ್ನ ತೋರಿಸಿ ಬಚಾವ್ ಆಗುತ್ತಿದ್ದರು. ಸದ್ಯ ಈ ಆರೋಪಿಗಳನ್ನ ಬಂಧಿಸಿರುವ ಪೊಲೀಸರು ಆರೋಪಿಗಳಿಂದ 23 ದುಬಾರಿ ಮೊಬೈಲ್​ಗಳನ್ನ ಜಪ್ತಿ ಮಾಡಿದ್ದಾರೆ. ಇದರ ಮೌಲ್ಯ ಅಂದಾಜು ಏಳು ಲಕ್ಷ ರೂಪಾಯಿ. ಡಿಕೆ ಲಕ್ಷ್ಮಣ್​ ಗ್ಯಾಂಗ್ ಲೀಡರ್ ಆಗಿದ್ದು, ಈತ ಈಗಾಗಲೇ ಒಂದು ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿದೆ. ಇನ್ನೊಬ್ಬ ಆರೋಪಿ ಸಂದೀಪ್​ ಉಡುಪಿಯ ಮಣಿಪಾಲ್ ಪೊಲೀಸರಿಗೆ ಬೇಕಾಗಿರುವ ಆರೋಪಿಯಾಗಿದ್ದಾನೆ. ಮತ್ತೊಬ್ಬನ ಬಗ್ಗೆ ತನಿಖೆ ಮುಂದುವರಿದಿದೆ. 


BREAKING NEWS / ಇಂಜಿನಿಯರ್ ಪತ್ನಿಯ ಕೊಲೆ ಕೇಸ್! ಶಿವಮೊಗ್ಗ ಪೊಲೀಸರಿಂದ ಆರು ಮಂದಿ ಅರೆಸ್ಟ್!



ಶಿವಮೊಗ್ಗ ನಗರದಲ್ಲಿ ನಡೆದಿದ್ದ ಕಮಲಮ್ಮ ಕೊಲೆ ಪ್ರಕರಣದಲ್ಲಿ ಆರು ಆರೋಪಿಗಳನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. 17-06-23 ರ ಸಂಜೆ ಶಿವಮೊಗ್ಗ ನಗರದ ವಿಜಯ ನಗರದ 2ನೇ ತಿರುವಿನಲ್ಲಿ ಮನೆಯಲ್ಲಿದ್ದ ಒಂಟಿ ಮಹಿಳೆ ಕಮಲಮ್ಮ(57) ರ ಕೊಲೆ ಪ್ರಕರಣವನ್ನು ಶಿವಮೊಗ್ಗ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಇವತ್ತು ಆರು ಆರೋಪಿಗಳನ್ನ ಬಂಧಿಸಿದ್ದಾರೆ. ಕಾರ್  ಡ್ರೈವರ್ ಹನುಮಂತ ನಾಯ್ಕ್​ ಸೇರಿದಂತೆ, ಆರು ಮಂದಿಯನ್ನ ಅರೆಸ್ಟ್ ಮಾಡಲಾಗಿದ್ದು, ಅವರನ್ನ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದೆ. 

ಇಂಜಿನಿಯರ್ ಪತ್ನಿಯ ಕೊಲೆ! ಮಿಸ್ಸಿಂಗ್​​ ಆದ 32 ಲಕ್ಷ ರೂಪಾಯಿ ಎಲ್ಲಿ? ಆತ ಗೋವಾಕ್ಕೆ ಹೋಗದೇ ಮನೇಗೇಕೆ ಬಂದಿದ್ದ! ನಿಗೂಢ ಹತ್ಯೆಯ ಇನ್​ಸೈಡ್ ಸ್ಟೋರಿ JP ಬರೆಯುತ್ತಾರೆ

ಆರೋಪಿಗಳ ಪೈಕಿ ಮೂವರು ಅನುಪಿನಕಟ್ಟೆಯವರು, ಇಬ್ಬರು ಗುಂಡಪ್ಪಶೆಡ್ ನವರು ಹಾಗೂ ಓರ್ವ ಹುಣಸೋಡು ಮೂಲದವನು ಎಂಬುದಾಗಿ ತಿಳಿದುಬಂದಿದೆ. 

ಕಮಲಮ್ಮ ಕೊಲೆ ಪ್ರಕರಣದ ಪ್ರಮುಖ ಅನುಮಾನಸ್ಪದ ಆರೋಪಿ ತಾಯಿ ಆತ್ಮಹತ್ಯೆಗೆ ಯತ್ನ!