ತೀರ್ಥಹಳ್ಳಿ ತಾಲ್ಲೂಕಿನಲ್ಲಿ ವಾಹನಗಳಿಗೆ ಭಯಂಕರ ಕಳ್ಳರ ಕಾಟ

Malenadu Today
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ವಾಹನಗಳಿಗೆ ಕಳ್ಳರ ಕಾಟ ಜೋರಾಗಿದೆ. ಒಂಟಿ ಮನೆಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೆ, ಇತ್ತ ವಾಹನಗಳ ಡೀಸೆಲ್​​ ಕದಿಯುವ ಹಾಗೂ ಕಾರನ್ನೇ ಕದಿಯುವಂತಹ ಪ್ರಯತ್ನಗಳು ನಡೆಯುತ್ತಿದೆ. ಎಳ್ಳಮಾವಾಸ್ಯೆ ಜಾತ್ರೆ ಹಿನ್ನೆಲೆ ಹಾಗೂ ಅಡಿಕೆ ಕೊಯ್ಲು ಹಿನ್ನೆಲೆಯಲ್ಲಿ ಹೊರಭಾಗಗಳಿಂದ ತೀರ್ಥಹಳ್ಳಿ ಬಹಳಷ್ಟು ಮಂದಿ ಬರುತ್ತಿದ್ದಾರೆ. ಇದರ ನಡುವೆಯೇ ಕಳ್ಳತನಗಳು ಸಹ ಹೆಚ್ಚಾಗುತ್ತಿದೆ.
ಪ್ರಕರಣ ಒಂದು : ಕಾರು ಕಳ್ಳತನಕ್ಕೆ ಯತ್ನ : ಇತ್ತೀಚೆಗೆ ಕುಶಾವತಿಯ ಆಂಜನೇಯ ದೇವಸ್ಥಾನದ ಸಮೀಪ ಮನೆಯ ಎದುರು ನಿಲ್ಲಿಸಿದ್ದ  ಹೊಂಡಾಯ್ ಕಾರನ್ನು ಕದಿಯಲು ವಿಫಲ ಯತ್ನ ನಡೆಸಲಾಗಿದೆ.  ಬಾನೆಟ್ ಬಿಚ್ಚಿ ಕೀ ಡೈರೆಕ್ಟ್ ಮಾಡಿ ಕಾರು ಕದಿಯಲು ನೋಡಿದ್ದಾರೆ. ಆದರೆ ಹರಸಾಹಸ ಪಟ್ಟರೂ ಕಳ್ಳತನ ಸಾಧ್ಯವಾಗದೇ ವಾಪಸ್​ ಹೋಗಿದ್ಧಾರೆ. ಈ ನಡುವೆ ಕಾರಿಗೆ ಸುಮಾರು 35-45 ಸಾವಿರ ಲಾಸ್ ಮಾಡಿಟ್ಟಿದ್ದಾರೆ. ಈ ಘಟನೆ ಬೆನ್ನಲ್ಲೆ ಸಮೀಪದ ಗ್ಯಾರೇಜ್​ ಒಂದರಲ್ಲಿ ಮಾರುತಿ 800 ಕಾರೊಂದು ಕಳ್ಳತನ ಮಾಡಲಾಗಿದೆ ಎನ್ನಲಾಗಿದೆ. 
ಪ್ರಕರಣ ಎರಡು : ಡೀಸೆಲ್​​ ಕಳ್ಳತನ : ಕಾರು ಕಳ್ಳತನದ ನಡುವೆ ಡೀಸೆಲ್​ ಕಳ್ಳತನ ಕೂಡ ಹೆಚ್ಚಳವಾಗಿದೆ. ಇತ್ತೀಚೆಗೆ ಯಡೇಹಳ್ಳಿಕೆರೆ ಸಮೀಪದಲ್ಲಿ ಲಾರಿಯೊಂದರಿಂದ ಸುಮಾರು 150 ಲೀ ಡೀಸೆಲ್ ಕದ್ದೋಯ್ದಿದ್ದಾರೆ ಎನ್ನಲಾಗಿದೆ. ಇನ್ನೂ ಇದೇ ರೀತಿಯ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದು ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿದೆ. 
ಪ್ರಕರಣ ಮೂರು : ಸಿಕ್ಕಿಬಿದ್ದ ಡೀಸೆಲ್​ ಕಳ್ಳರು : ಈ ಮಧ್ಯೆ ತೀರ್ಥಹಳ್ಳಿ ಭಾಗಗಳಲ್ಲಿ ನಿಲ್ಲಿಸ್ತಿದ್ದ ವಾಹನಗಳ ಡೀಸೆಲ್​ ಕದಿಯುತ್ತಿದ್ದವರನ್ನು ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ರಸ್ತೆಯಲ್ಲಿ ನಿಲ್ಲಿಸ್ತಿದ್ದ ವಾಹನಗಳ ಡೀಸೆಲ್​ ಕದ್ದು ಕಳ್ಳರು ಪರಾರಿಯಾಗುತ್ತಿದ್ದರು. ಇವರನ್ನ ಮಾಸ್ತಿಕಟ್ಟೆಯ ಬಳಿ ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link
Share This Article