thirthahalli alert : ಕಳೆದ ಮೂರು ದಿನಗಳಲ್ಲಿ ನಾಲ್ಕು ಅಪಘಾತಗಳು..ಈವರೆಗೂ ಈ ತಿರುವಿನಲ್ಲಿ 40 ಕ್ಕೂ ಹೆಚ್ಚು ಸಾವುಗಳು..ಹಲವು ಮಂದಿ ಗಾಯಾಳುಗಳು. ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಹಣವನ್ನು ಕಳೆದುಕೊಂಡ ಸಂತ್ರಸ್ಥರು..ಈ ಎದೆನಡುಗಿಸುವ ಸನ್ನಿವೇಶಕ್ಕೆ ಸಾಕ್ಷಿಯಾಗಿರುವುದು ಅದೊಂದು ಭಯಾನಕ ತಿರುವು ಮಾತ್ರ. ಹೌದು ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169ಎ ನಲ್ಲಿ ರಸ್ತೆ ಮುಡವಾಗಿ ತಿರುವುಗಳಿಗೆ ಕಡಿವಾಣ ಹಾಕಬೇಕಿತ್ತು. ಇದ್ದ ತಿರುವುಗಳನ್ನೇ ಮತ್ತಷ್ಟು ಅಗಲ ಮಾಡಿದ್ದರಿಂದ ಅಪಘಾತಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಹೌದು ರಂಜದ ಕಟ್ಟೆ- ಬಿಳುಕೊಪ್ಪ ರಾಷ್ಚ್ರೀಯ ಹೆದ್ದಾರಿಯ ತಿರುವಿನಲ್ಲಿ ಅಪಘಾತ ಹೆಚ್ಚುತ್ತಲೇ ಇದೆ. ಹಾಗೆ ತಕ್ಷಣಕ್ಕೆ ನೋಡಿದರೆ ಇದು ಅಪಘಾತವಾಗುವ ಸ್ಥಳವಾ ಎಂದು ಅಚ್ಚರಿ ಕೂಡ ಆಗುತ್ತದೆ. ತಿರುವಿನಲ್ಲಿಯೇ ಸರ್ಕಾರಿ ಶಾಲೆ ಕೂಡ ಇದೆ.
thirthahalli alert ಅಪಾಯವಿದೆ ಎಚ್ಚರಿಕೆ
ರಸ್ತೆ ದಾಟುವ ಶಾಲಾ ಮಕ್ಕಳು ಇಲ್ಲಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ. ವೇಗವಾಗಿ ಬರುವ ವಾಹನಗಳಿಗೆ ತಕ್ಷಣಕ್ಕೆ ತಿರುವು ಎದುರಾದಾಗ ನಿಯಂತ್ರಣ ಸಾಧಿಸುವುದು ಕಷ್ಟವಾಗುತ್ತದೆ. ಅಂತಹ ವಾಹನ ಸವಾರರು ಎದುರಿನ ವಾಹನಕ್ಕೆ ಡಿಕ್ಕಿ ಹೊಡೆಯುತ್ತಾರೆ. ಪರಿಣಾಮ ಸಾವು ನೋವುಗಳಾಗುತ್ತವೆ. ಕೆಲವರು ಜೀವ ಉಳಿಸಿಕೊಳ್ಳಲು ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡುವ ಸನ್ನಿವೇಶ ಎದುರಾಗುತ್ತದೆ. ರಂಜದಕಟ್ಟೆ ಬಿಳುಕೊಪ್ಪ ತಿರುವಿನಲ್ಲಿ ಈವರೆಗೂ ನಲ್ವತ್ತಕ್ಕೂ ಹೆಚ್ಚು ಮಂದಿ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ.

thirthahalli alert : ರಾಷ್ಚ್ರೀಯ ಹೆದ್ದಾರಿ ಮಾಡುವುದಾಗ ತಿರುವುಗಳಿಗೆ ಕಡಿವಾಣ ಹಾಕಬೇಕು. ನೇರ ಮಾರ್ಗಕ್ಕೆ ಮೊದಲ ಆದ್ಯತೆ ಇರುತ್ತದೆ. ಆದರೆ ರಸ್ತೆ ನೇರ ಮಾಡುವಾಗ ಸ್ಥಳೀಯರ ವಿರೋಧ ಏಕೆ ಕಟ್ಟಿಕೊಳ್ಳಬೇಕು ಎಂಬ ಮನೋಭಾವದಲ್ಲಿ ಇದ್ದ ತಿರುವುಗಳನ್ನೇ ಇಲ್ಲಿ ಅಗಲ ಮಾಡಲಾಗಿದೆ.. ಅದರ ಬದಲು ತಿರುವು ರಸ್ತೆಗೆ ಬದಲಾಗಿ ನೇರ ರಸ್ತೆ ಮಾಡಿದ್ದರೆ, ಇದು ಅಪಘಾತ ವಲಯದ ಪಟ್ಟಿಯಲ್ಲಿಯೇ ಇರುತ್ತಿರಲಿಲ್ಲ. ಮಳೆಗಾಲದ ಆರಂಭದಲ್ಲಿಯೇ ಕೇವಲ ಎರಡು ದಿನದಲ್ಲಿ ಮೂರು ಅಪಘಾತಗಳು ಸಂಭವಿಸಿದೆ. ಗುಬ್ಬಿಗ ಗ್ರಾಮದ ನಿರಂಜನ್ ನೆನ್ನೆ ರಾತ್ರಿಯ ಅಪಘಾತದಲ್ಲಿ ಸಾವನ್ನಪ್ಪಿದರೆ. ಮೊನ್ನೆ ಓರ್ವ ಯುವಕ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಓರ್ನ ಕಾಲು ಕಳೆದುಕೊಂಡಿದ್ದಾನೆ. ಈ ರಸ್ತೆಯಲ್ಲಿ ಅಪಘಾತ ತಪ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವೈಜ್ಞಾನಿಕ ಪರಿಹಾರ ನೀಡಬೇಕಿದೆ. ಇಲ್ಲವಾದಲ್ಲಿ ಈ ತಿರುವು ಮೃತ್ಯುಕೂಪವಾದರೂ ಅಚ್ಚರಿಯಿಲ್ಲ. ಶಾಲೆ ಇರುವ ತಿರುವಿನಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಸ್ತೆಗೆ ಕಾಯಕಲ್ಪವಾಗಬೇಕಿದೆ.