ಶಿಕ್ಷಕರೇ ಹೀಗೂ ಮಾಡ್ತಾರೆ, ನಿಮ್ಮ ಹುಷಾರಲ್ಲಿ ನೀವಿರಿ

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಅತ್ತಿಗುಂದದ ಶಿಕ್ಷಕಿಯೊಬ್ಬರು ಭದ್ರಾವತಿ ಗ್ರಾಮಾಂತ ಪೊಲೀಸ್ ಸ್ಟೇಷನ್​ಗೆ ದೂರೊಂದನ್ನು ಕೊಟ್ಟಿದ್ಧಾರೆ. ಈ ದೂರು ಕುತೂಹಲ ಮೂಡಿಸುತ್ತಿದ್ದು, ದಾಖಲಾಗಿರುವ ಕೇಸ್​ನ ಪ್ರಕಾರ, ಚೀಟಿ ವ್ಯವಹಾರಕ್ಕೆ ಶಿಕ್ಷಕಿಯೊಬ್ಬರನ್ನು ಸೇರಿಸಿಕೊಂಡು ಅವರ ವಿರುದ್ಧ ಮೋಸ ವಂಚನೆಯ ಆರೋಪ ಮಾಡಿ ಇಲಾಖೆಗೆ ದೂರು ನೀಡಲು ಯತ್ನಿಸಿದ ಆರೋಪ ಕೇಳಿಬಂದಿದೆ. 

ಇದನ್ನು ಸಹ ಓದಿ : ಜೀವ ಪರ ಸರ್ಜಿ ಬಿಜೆಪಿ ಪರ ಆಗಲು ಕಾರಣವಾಗಿದ್ದು ವಿನಯ್ ಗುರೂಜಿಯಾ?

ಅತ್ತಿಗುಂದ ಶಿಕ್ಷಕಿಯನ್ನು(teacher) ಅವರು ಕೆಲಸ ಮಾಡುವ ಶಾಲೆಯ ಅತಿಥಿ ಶಿಕ್ಷಕ ತನ್ನ ಚೀಟಿಗೆ ಸೇರಿಸಿಕೊಂಡಿದ್ದನಂತೆ. ಆ ಬಳಿಕ ಶಿಕ್ಷಕಿ ಚೀಟಿ ಕಟ್ಟುವಲ್ಲಿ ಐದು ತಿಂಗಳು ವ್ಯತ್ಯಾಸವಾಗಿದ್ದು, ಬಳಿಕ ಅದನ್ನು ಪೂರ್ಣವಾಗಿ ಕಟ್ಟಿದ್ಧಾರಂತೆ. 

FIFA world cup 2022 ವಿಶ್ವಕಪ್​ ನ ವೈದ್ಯಕೀಯ ಟೀಂನಲ್ಲಿ ಶಿವಮೊಗ್ಗದ ಮಹಿಳೆಯ ಸೇವೆ

ಇದರ ನಡುವೆ ಚೀಟಿ ಸೇಪ್ಟಿಗೆ ಖಾಲಿ ಪೇಪರ್​ ಮೇಲೆ ಸಹಿ ಪಡೆದಿದ್ದ ಅತಿಥಿ ಶಿಕ್ಷಕ ಚೆಕ್​ವೊಂದನ್ನ ಪಡೆದುಕೊಂಡಿದ್ದ. ಟೀಚರ್​ ಚೀಟಿ ಕಟ್ಟಲು ವಿಳಂಬ ಮಾಡಿದ ಸಮಯದಲ್ಲಿ ಈ ಚೆಕ್​ನ್ನು ಮುಖ್ಯಶಿಕ್ಷಕರೊಬ್ಬರ ಮೂಲಕ ಕ್ಯಾಶ್​ಗೆ ಹಾಕಿಸಿ ಚೆಕ್​ಬೌನ್ಸ್​ ಮಾಡಿಸಿದ್ದಾರೆ. ಅಲ್ಲದೆ, ದಾಖಲೆಗಳನ್ನು ಇಲಾಖೆಗೆ ಕಳುಹಿಸಿದ್ದಾರೆ. ಸದ್ಯ ಈ ಷಡ್ಯಂತ್ರದ ವಿರುದ್ಧ ಶಿಕ್ಷಕಿ ದೂರು ನೀಡಿದ್ದು ಪೊಲೀಸರು ತನಿಖೆ ನಡೆಸ್ತಿದ್ದಾರೆ. 

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು