ಪಿಕಪ್ಗೆ ಹೊರಟಿದ್ದ ಟೂರಿಸ್ಟ್ ಗಾಡಿ ಆಕ್ಸಿಡೆಂಟ್, ಪಲ್ಟಿಯಾಗಿ ಮೋರಿಗೆ ಬಿದ್ದ ಬಸ್
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಬೇಗುವಳ್ಳಿ ಸಮೀಪ ಇವತ್ತು ಬೆಳಗ್ಗಿನ ಅಪಘಾತವೊಂದು ಸಂಭವಿಸಿದೆ. ಉಡುಪಿ ಕಡೆಗೆ ಪಿಕಪ್ಗಾಗಿ ಹೊರಟಿದ್ದ ಟೂರಿಸ್ಟ್ ಬಸ್ವೊಂದು ಪಲ್ಟಿಯಾಗಿದೆ. ಕೆ.ಎ.51 ಎಡಿ 8730 ನಂಬರ್ನ ಬಸ್ ಶಿವಮೊಗ್ಗದಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಬೇಗುವಳ್ಳಿಯ ಬಳಿಯಲ್ಲಿ ವಾಹನ ಪಲ್ಟಿಯಾಗಿದೆ. ಬೇಗುವಳ್ಳಿಯ ಕೆರೆಯ ಬಳಿಯಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ, ಆ ಕಡೆಗೆ ಹೋಗುತ್ತಿದ್ದ ವಾಹನ ಪುನಃ ಶಿವಮೊಗ್ಗದ ಕಡೆಗೆ ತಿರುಗಿ ಪಲ್ಟಿಯಾಗಿದೆ. ಅಲ್ಲದೆ ರಸ್ತೆ ಬದಿಗೆ ಜರಿದು ಮೋರಿಗೆ … Read more