9 ಅಧಿಕಾರಿಗಳನ್ನ ಆಫೀಸ್​ಗೆ ಕರೆಸಿಕೊಂಡು ಪ್ರಶಂಸನಾ ಪತ್ರ ನೀಡಿದ ಎಸ್​ಪಿ ಮಿಥುನ್​ ಕುಮಾರ್​! ಕಾರಣವೇನು ಓದಿ

SP Mithun Kumar gives appreciation letter to 9 officers Read the reason

9 ಅಧಿಕಾರಿಗಳನ್ನ ಆಫೀಸ್​ಗೆ ಕರೆಸಿಕೊಂಡು ಪ್ರಶಂಸನಾ ಪತ್ರ ನೀಡಿದ ಎಸ್​ಪಿ ಮಿಥುನ್​ ಕುಮಾರ್​! ಕಾರಣವೇನು ಓದಿ

KARNATAKA NEWS/ ONLINE / Malenadu today/ Apr 26, 2023 GOOGLE NEWS


ಶಿವಮೊಗ್ಗ  ಶಿವಮೊಗ್ಗ ಎಸ್​ ಪಿ ಮಿಥುನ್​ಕುಮಾರ್​ ಇವತ್ತು ಜಿಲ್ಲೆಯ ಆಯಕಟ್ಟಿನ ಸ್ಥಾನದಲ್ಲಿರುವ ಪೊಲೀಸ್ ಅಧಿಕಾರಿಗಳನ್ನು ಕಚೇರಿಗೆ ಕರೆಸಿಕೊಂಡು ಅವರುಗಳನ್ನ ಪ್ರಶಂಶಿಸಿದ್ದಾರೆ. 

ಓದಿ / ಡಿಪ್ಲೋಮೋ ಕೋರ್ಸ್​ಗೆ ಅರ್ಜಿ ಆಹ್ವಾನ/ ತರಬೇತಿ ಬಳಿಕ 100 %  ಉದ್ಯೋಗಾವಕಾಶ/ ವಿವರ ಇಲ್ಲಿದೆ 

 

ಕಾರಣ?

ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ, ಶಿವಮೊಗ್ಗ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ. 

ಈ ಚೆಕ್​ಪೋಸ್ಟ್​ಗಳಲ್ಲಿ ಶಿವಮೊಗ್ಗದ ಅಧಿಕಾರಿಗಳು ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ದಾಖಲೆ ಸಮರ್ಪಕವಾಗಿ ಇರಿಸಿದ ಹಣ ವ್ಯಾನ್​ಗಳನ್ನು ಸಹ ಬಿಡದೇ ಸೀಜ್ ಮಾಡುತ್ತಿದ್ದಾರೆ. 

ಹೀಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಉತ್ತಮವಾಗಿ ಕೆಲಸ ಮಾಡುತ್ತಿರುವ ಹಿನ್ನೆಯಲ್ಲಿ ಅಧಿಕಾರಿಳಗನ್ನು ಕಚೇರಿಗೆ ಕರೆಸಿಕೊಂಡು ಎಸ್​ಪಿ ಮಿಥುನ್​ ಕುಮಾರ್ ಆಫಿಸರ್​ಗಳ ಕಾರ್ಯವನ್ನು ಶ್ಲಾಘಿಸಿದ್ಧಾರೆ. 

ಓದಿ / ಶಿವಮೊಗ್ಗದಲ್ಲಿ ಬಸ್​ ಹತ್ತಿದ  ಎಸ್​ಪಿ ಮಿಥುನ್​ ಕುಮಾರ್, ಡಿಸಿ ಡಾ.ಆರ್​ ಸೆಲ್ವಮಣಿ! ವಿವರ ಇಲ್ಲಿದೆ

ಯಾರ್ಯಾರಿಗೆ ಸಿಕ್ತು ಪ್ರಶಂಸನಾ ಪತ್ರ! 

  • ಸುರೇಶ್ ಎಂ, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ – ಬಿ ಉಪ ವಿಭಾಗ, 

  • ಜಿತೇಂದ್ರ ಕುಮಾರ್ ದಯಾಮ, ಐಪಿಎಸ್, ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರು, ಭದ್ರಾವತಿ ಉಪ ವಿಭಾಗ,

  •  ಬಾಲರಾಜ್, ಪೊಲೀಸ್ ಉಪಾಧೀಕ್ಷಕರು,  ಶಿವಮೊಗ್ಗ – ಎ ಉಪ ವಿಭಾಗ,

  • ಗಜಾನನ ವಾಮನ ಸುತರ, ಪೊಲೀಸ್ ಉಪಾಧೀಕ್ಷಕರು, ತೀರ್ಥಹಳ್ಳಿ, ಉಪ ವಿಭಾಗ,

  • ಶಿವಾನಂದ್ ಮದರಕಂಡಿ, ಪೊಲೀಸ್ ಉಪಾಧೀಕ್ಷಕರು,  ಶಿಕಾರಿಪುರ, ಉಪ ವಿಭಾಗ, 

  • ಪ್ರಭು, ಡಿ.ಟಿ, ಪೊಲೀಸ್ ಉಪಾಧೀಕ್ಷಕರು, ಜಿಲ್ಲಾ ಅಪರಾಧ ದಾಖಲಾತಿ ವಿಭಾಗ, ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿ, 

  • ರೋಹನ್ ಜಗದೀಶ್, ಐಪಿಎಸ್, ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರು, ಸಾಗರ ಉಪ ವಿಭಾಗ, 

  • ನಿಶೀಮಪ್ಪ, ಪೊಲೀಸ್ ಉಪಾಧೀಕ್ಷಕರು, ಡಿಎಆರ್, ಶಿವಮೊಗ್ಗ 

  • ಶಿವಾನಂದ ಗುಣದಾಳ್ ಆರ್.ಪಿ.ಐ, ಡಿಎಆರ್, ಶಿವಮೊಗ್ಗ ರವರಿಗೆ



ಈ ಸಂದರ್ಭದಲ್ಲಿ ಅನಿಕುಮಾರ್ ಭುಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಉಪಸ್ಥಿತರಿದ್ದರು.

ಓದಿ / ಶಿವಮೊಗ್ಗದ ರಸ್ತೆಗಳಲ್ಲಿ ಯುವಕನ ಬೈಕ್​ ಸ್ಟಂಟ್/  ಸೈಲೆಂಟ್ ಆಗಿ  ಪುಂಡರಿಗೆ ವಾರ್ನಿಂಗ್​ ಕೊಟ್ಟ ಪೊಲೀಸ್ 



Malenadutoday.com Social media