9 ಅಧಿಕಾರಿಗಳನ್ನ ಆಫೀಸ್ಗೆ ಕರೆಸಿಕೊಂಡು ಪ್ರಶಂಸನಾ ಪತ್ರ ನೀಡಿದ ಎಸ್ಪಿ ಮಿಥುನ್ ಕುಮಾರ್! ಕಾರಣವೇನು ಓದಿ
SP Mithun Kumar gives appreciation letter to 9 officers Read the reason
![9 ಅಧಿಕಾರಿಗಳನ್ನ ಆಫೀಸ್ಗೆ ಕರೆಸಿಕೊಂಡು ಪ್ರಶಂಸನಾ ಪತ್ರ ನೀಡಿದ ಎಸ್ಪಿ ಮಿಥುನ್ ಕುಮಾರ್! ಕಾರಣವೇನು ಓದಿ](https://malenadutoday.com/uploads/images/202304/image_750x_64490d2934843.jpg)
KARNATAKA NEWS/ ONLINE / Malenadu today/ Apr 26, 2023 GOOGLE NEWS
ಶಿವಮೊಗ್ಗ ಶಿವಮೊಗ್ಗ ಎಸ್ ಪಿ ಮಿಥುನ್ಕುಮಾರ್ ಇವತ್ತು ಜಿಲ್ಲೆಯ ಆಯಕಟ್ಟಿನ ಸ್ಥಾನದಲ್ಲಿರುವ ಪೊಲೀಸ್ ಅಧಿಕಾರಿಗಳನ್ನು ಕಚೇರಿಗೆ ಕರೆಸಿಕೊಂಡು ಅವರುಗಳನ್ನ ಪ್ರಶಂಶಿಸಿದ್ದಾರೆ.
ಓದಿ / ಡಿಪ್ಲೋಮೋ ಕೋರ್ಸ್ಗೆ ಅರ್ಜಿ ಆಹ್ವಾನ/ ತರಬೇತಿ ಬಳಿಕ 100 % ಉದ್ಯೋಗಾವಕಾಶ/ ವಿವರ ಇಲ್ಲಿದೆ
ಕಾರಣ?
ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ, ಶಿವಮೊಗ್ಗ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ.
ಈ ಚೆಕ್ಪೋಸ್ಟ್ಗಳಲ್ಲಿ ಶಿವಮೊಗ್ಗದ ಅಧಿಕಾರಿಗಳು ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ದಾಖಲೆ ಸಮರ್ಪಕವಾಗಿ ಇರಿಸಿದ ಹಣ ವ್ಯಾನ್ಗಳನ್ನು ಸಹ ಬಿಡದೇ ಸೀಜ್ ಮಾಡುತ್ತಿದ್ದಾರೆ.
ಹೀಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಉತ್ತಮವಾಗಿ ಕೆಲಸ ಮಾಡುತ್ತಿರುವ ಹಿನ್ನೆಯಲ್ಲಿ ಅಧಿಕಾರಿಳಗನ್ನು ಕಚೇರಿಗೆ ಕರೆಸಿಕೊಂಡು ಎಸ್ಪಿ ಮಿಥುನ್ ಕುಮಾರ್ ಆಫಿಸರ್ಗಳ ಕಾರ್ಯವನ್ನು ಶ್ಲಾಘಿಸಿದ್ಧಾರೆ.
ಓದಿ / ಶಿವಮೊಗ್ಗದಲ್ಲಿ ಬಸ್ ಹತ್ತಿದ ಎಸ್ಪಿ ಮಿಥುನ್ ಕುಮಾರ್, ಡಿಸಿ ಡಾ.ಆರ್ ಸೆಲ್ವಮಣಿ! ವಿವರ ಇಲ್ಲಿದೆ
ಯಾರ್ಯಾರಿಗೆ ಸಿಕ್ತು ಪ್ರಶಂಸನಾ ಪತ್ರ!
-
ಸುರೇಶ್ ಎಂ, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ – ಬಿ ಉಪ ವಿಭಾಗ,
-
ಜಿತೇಂದ್ರ ಕುಮಾರ್ ದಯಾಮ, ಐಪಿಎಸ್, ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರು, ಭದ್ರಾವತಿ ಉಪ ವಿಭಾಗ,
-
ಬಾಲರಾಜ್, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ – ಎ ಉಪ ವಿಭಾಗ,
-
ಗಜಾನನ ವಾಮನ ಸುತರ, ಪೊಲೀಸ್ ಉಪಾಧೀಕ್ಷಕರು, ತೀರ್ಥಹಳ್ಳಿ, ಉಪ ವಿಭಾಗ,
-
ಶಿವಾನಂದ್ ಮದರಕಂಡಿ, ಪೊಲೀಸ್ ಉಪಾಧೀಕ್ಷಕರು, ಶಿಕಾರಿಪುರ, ಉಪ ವಿಭಾಗ,
-
ಪ್ರಭು, ಡಿ.ಟಿ, ಪೊಲೀಸ್ ಉಪಾಧೀಕ್ಷಕರು, ಜಿಲ್ಲಾ ಅಪರಾಧ ದಾಖಲಾತಿ ವಿಭಾಗ, ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿ,
-
ರೋಹನ್ ಜಗದೀಶ್, ಐಪಿಎಸ್, ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರು, ಸಾಗರ ಉಪ ವಿಭಾಗ,
-
ನಿಶೀಮಪ್ಪ, ಪೊಲೀಸ್ ಉಪಾಧೀಕ್ಷಕರು, ಡಿಎಆರ್, ಶಿವಮೊಗ್ಗ
-
ಶಿವಾನಂದ ಗುಣದಾಳ್ ಆರ್.ಪಿ.ಐ, ಡಿಎಆರ್, ಶಿವಮೊಗ್ಗ ರವರಿಗೆ
ಈ ಸಂದರ್ಭದಲ್ಲಿ ಅನಿಕುಮಾರ್ ಭುಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಉಪಸ್ಥಿತರಿದ್ದರು.
ಓದಿ / ಶಿವಮೊಗ್ಗದ ರಸ್ತೆಗಳಲ್ಲಿ ಯುವಕನ ಬೈಕ್ ಸ್ಟಂಟ್/ ಸೈಲೆಂಟ್ ಆಗಿ ಪುಂಡರಿಗೆ ವಾರ್ನಿಂಗ್ ಕೊಟ್ಟ ಪೊಲೀಸ್
Malenadutoday.com Social media