KARNATAKA NEWS/ ONLINE / Malenadu today/ Oct 11, 2023 SHIVAMOGGA NEWS
ಕುಡಿದ ನಶೆಯಲ್ಲಿ ಕೊಲೆ ಮಾಡಿದ್ದ ಆರೋಪಿಗಳಿಬ್ಬರಿಗೆ ಶಿವಮೊಗ್ಗ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ದಿನಾಂಕಃ 01-01-2021 ರಂದು ರಾತ್ರಿ ಶಿಕಾರಿಪುರ ಟೌನ್ ನಿವಾಸಿಯಾದ ಇಬ್ಬರು ಯುವಕರು, ಮಧ್ಯಪಾನ ಮಾಡಿಕೊಂಡು ಆಶ್ರಯ ಬಡಾವಣೆಯ ಅಂಗಡಿಯೊಂದರ ಹತ್ತಿರ ಕೂಗಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಯುವಕನೊಬ್ಬ ಬಂದಿದ್ದಾನೆ.
ಆತನನ್ನು ನೋಡುತ್ತಲೇ ಆತನೊಂದಿಗೆ ಕಿರಿಕ್ ತೆಗೆದು ಜಗಳವಾಡಿದ್ದ ಇಬ್ಬರು ಯುವಕರು ಆತನ ಎದೆಗೆ ಚುಚ್ಚಿ ಕೊಲೆ ಮಾಡಿದ್ದರು. ಈ ಸಂಬಂಧ ಶಿಕಾರಿಪುರ ಟೌನ್ ಪೊಲೀಸ್ ಸ್ಟೇಷನ್ನಲ್ಲಿ 302, 504 ಸಹಿತ 34 ಐಪಿಸಿ, ಮತ್ತು ಕಲಂ 3(1) (r), 3(1)(s), 3(2)(va) SC & ST ಅಡಿಯಲ್ಲಿ ಕೇಸ್ ದಾಖಲಾಗಿತ್ತು.
ಪ್ರಕರಣದ ತನಿಖಾಧಿಕಾರಿ ಶಿವಾನಂದ ಮದರಖಂಡಿ, ಡಿವೈಎಸ್.ಪಿ, ಶಿಕಾರಿಪುರ ಉಪ ವಿಭಾಗ ರವರು ಪ್ರಕರಣ ಸಂಬಂಧ ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ರು. ಈ ಕೇಸ್ ಸಂಬಂಧ ಪುಷ್ಪ, ಸರ್ಕಾರಿ ಅಭಿಯೋಜಕರವರು ಪ್ರಕರಣದ ವಾದ ಮಂಡಿಸಿದ್ದರು.
ಇದೀಗ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ಮುಗಿದು ಮಾನ್ಯ ನ್ಯಾಯಧೀಶರಾದ ಬಿ.ಆರ್ ಪಲ್ಲವಿ ತೀರ್ಪು ನೀಡಿದ್ದಾರೆ. ಕೊಲೆ ಮಾಡಿದ ಆರೋಪಿಗಳ ವಿರುದ್ಧದ ಆರೋಪ ಸಾಬೀತಾಗಿದ್ದು, ಇಬ್ಬರಿಗೂ ಜೀವಾವಧಿ ಶಿಕ್ಷೆ ಮತ್ತು ತಲಾ 1,00,000/- ರೂ ದಂಡ ವಿಧಿಸಿ ಆದೇಶ ನೀಡಿದ್ದಾರೆ.
ಇನ್ನಷ್ಟು ಸುದ್ದಿಗಳು
