#SAVEVISL : ಬದುಕು ಕೊಟ್ಟ ಕಾರ್ಖಾನೆಗಾಗಿ ಭದ್ರಾವತಿ ಬಂದ್! ಜನರಿಗೂ ತಟ್ಟಿದ ಬಿಸಿ, ಸರ್ಕಲ್ಗಳಲ್ಲಿ ಹೊತ್ತಿದ ಬೆಂಕಿ! ಏನೇಲ್ಲಾ ನಡೀತು? ಫುಲ್ ಸ್ಟೋರಿ!
#SAVEVISL: Bhadravathi Bundh was successfully held demanding to save the VISL factory. Full Story
![#SAVEVISL : ಬದುಕು ಕೊಟ್ಟ ಕಾರ್ಖಾನೆಗಾಗಿ ಭದ್ರಾವತಿ ಬಂದ್! ಜನರಿಗೂ ತಟ್ಟಿದ ಬಿಸಿ, ಸರ್ಕಲ್ಗಳಲ್ಲಿ ಹೊತ್ತಿದ ಬೆಂಕಿ! ಏನೇಲ್ಲಾ ನಡೀತು? ಫುಲ್ ಸ್ಟೋರಿ!](https://malenadutoday.com/uploads/images/202302/image_750x_63f8aa87f1566.jpg)
MALENADUTODAY.COM | SHIVAMOGGA | #KANNADANEWSWEB
ಸೇವ್ ವಿಐಎಸ್ಲ್ , ವಿಐಎಸ್ಎಲ್ ಕಾರ್ಖಾನೆಯನ್ನು ಉಳಿಸಿ ಎಂಬ ಅಭಿಯಾನದ ಅಡಿಯಲ್ಲಿ ಇವತ್ತು ಭದ್ರಾವತಿ ಬಂದ್ಗೆ ಕರೆಕೊಡಲಾಗಿತ್ತು. ಬೆಳಗ್ಗೆಯಿಂದಲೇ ಆರಂಬಗೊಂಡ ಬಂದ್ ಯಶಸ್ವಿಯಾಗಿದೆ, ಬಂದ್ ಹಿನ್ನೆಲೆಯಲ್ಲಿ ಇವತ್ತು ಬೆಳಗ್ಗೆ ವಿವಿಧ ಸಂಘಟನೆಗಳು ಭದ್ರಾವತಿಯಲ್ಲಿ ಪ್ರತಿಭಟನೆ ನಡೆಸಿದವು, ಗುತ್ತಿಗೆ ಕಾರ್ಮಿಕರು ಅಂಡರ್ಬ್ರಿಡ್ಜ್ ಬಳಿ ಟೈರ್ಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಇನ್ನೂ ಬಂದ್ಗೆ ವಿವಿಧ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳು, ನಾಗರೀಕರು ವ್ಯಾಪಕ ಬೆಂಬಲ ನೀಡಿದವು
READ | ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿನ ಬಜೆಟ್ ಸಭೆಯಲ್ಲಿ ಕನ್ನಡಿಯೊಳಗಿನ ಗಂಟಿನ ಕಲಹ! ಏನಿದು? ವಿಡಿಯೋ ಸ್ಟೋರಿ ಇಲ್ಲಿದೆ
ಸ್ವಯಂ ಪ್ರೇರಿತ ಬಂದ್,
ಇನ್ನೂ ಬಂದ್ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಹೋಟೆಲ್ಗಳು, ಪೆಟ್ರೋಲ್ ಬಂಕ್ಗಳು, ಚಿತ್ರಮಂದಿರಗಳು ಬಂದ್ ಆಗಿದ್ದವು. ಸರ್ಕಾರಿ ಹಾಗು ಖಾಸಗಿ ಬಸ್ಗಳು, ಆಟೋ ಸಂಚಾರ ಸ್ಥಗಿತಗೊಂಡಿತ್ತು. ಶಾಲಾ-ಕಾಲೇಜುಗಳು ರಜೆ ಪಡೆದುಕೊಂಡಿದ್ದವು. ಸರ್ಕಾರಿ ಕಚೇರಿಯಲ್ಲಿಯು ಸಹ ಬಂದ್ಗೆ ಬೆಂಬಲ ಲಭ್ಯವಾಗಿತ್ತು. ಕೋರ್ಟ್ ಕಲಾಪಗಳಿಂದ ವಕೀಲರು ದೂರ ಉಳಿದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇನ್ನು ವಿವಿಧ ಸಂಘಟನೆಗಳ ಸದಸ್ಯರು ನಗರದಲ್ಲಿ ಬೈಕ್ ರ್ಯಾಲಿ ನಡೆಸಿ, ಅಲ್ಲಲ್ಲಿ ಪ್ರತಿಭಟನೆಯನ್ನು ನಡೆಸಿದವು, ಚುನಾಯಿತ ಪ್ರತಿನಿಧಿಗಳು, ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾಯಂ ಹಾಗು ನಿವೃತ್ತ ಕಾರ್ಮಿಕ ಸಂಘಟನೆಗಳ ಪ್ರಮುಖರು, ತಾಲೂಕು ವರ್ತಕರ ಸಂಘ, ರೈತ ಸಂಘ, ಕನ್ನಡ ಸಾಹಿತ್ಯ ಪರಿಷತ್, ಕೇರಳ ಸಮಾಜ, ಕ್ರೈಸ್ತ ಸಮಾಜ, ಮಾಜಿ ಸೈನಿಕರ ಸಂಘ, ಮಾದಿಗ ಸಮಾಜ, ಜಯಕರ್ನಾಟಕ ಸಂಘಟನೆ, ಒಕ್ಕಲಿಗರ ಸಂಘ, ಭದ್ರಾವತಿ ಪ್ರಜಾ ವಿಮೋಚನೆ ಸಂಘ, ಮಾನವ ಹಕ್ಕುಗಳ ಹೋರಾಟ ಸಮಿತಿ, ಕರುನಾಡು ಪ್ರಜಾ ಸಂರಕ್ಷಣಾ ವೇದಿಕೆ, ಅಂಜುಮಾನ್ ಇಸ್ಲಾವುಲ್ ಮುಸ್ಲಿಮೀನ್, ಸರ್ಕಾರಿ ಪಡಿತರ ವಿತರಕರ ಸಂಘ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವಾಲ್ಮೀಕಿ ಸಮಾಜ, ಅಂಬೇಡ್ಕರ್ ಯುವ ಪಡೆ, ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಕಾಂಗ್ರೆಸ್, ಜೆಡಿಎಸ್, ಎಎಪಿ, ಕೆಆರ್ಎಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು, ಬೆಂಬಲ ಸೂಚಿಸಿದ್ದವು
ಪ್ರತಿಭಟನಾ ಮೆರವಣಿಗೆ
ಇನ್ನೂ ಬಂದ್ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಮುಖಂಡರು ಹಾಗೂ ಕಾರ್ಮಿರು ಸೇರಿದಂತೆ ಸಾವಿರಾರು ಜನರು ವಿಐಎಸ್ಎಲ್ ಕಾರ್ಖಾನೆಯಿಂದ ತಾಲೂಕು ಕಚೇರಿವರೆಗು ಪ್ರತಿಭಟನೆ ಮೆರವಣಿಗೆಯನ್ನು ನಡೆಸಿದರು, ಬಳಿಕ ತಹಶೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ರು. ಬಂದ್ ನಿಂದಾಗಿ, ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು, ಅಲ್ಲದೇ ವಾಹನ ಸಂಚಾರಕ್ಕೆ ಬಂದ್ನ ಬಿಸಿ ಮುಟ್ಟಿತ್ತು. ಸರ್ಕಲ್ಗಳನ್ನು ಬಂದ್ ಮಾಡಿದ್ದರಿಂದ ಪರ್ಯಾಯ ಮಾರ್ಗವಿಲ್ಲದೇ ಟ್ರಾಫಿಕ್ ಕಿರಿಕಿರಿ ಉಂಟಾಗಿತ್ತು . ಭದ್ರಾವತಿ ಹೊಸ ಸೇತುವೆ ಮೇಲೆ ಟ್ರಾಫಿಕ್ ಜಾಮ್ (Traffic Jam) ಉಂಟಾಗಿತ್ತು. ಕಚೇರಿಗಳಿಗೆ ತೆರಳುವವರು, ಶಾಲೆ, ಕಾಲೇಜುಗೆ ಹೋಗುವವರಿಗೆ ಬಂದ್ ಬಿಸಿ ತಟ್ಟಿತ್ತು..