ಮುಗಿದ 14 ವರ್ಷದ ವನವಾಸ! ಕೊನೆಗೂ ಸುದೀಪನಿಗೆ ಸಿಕ್ಕಿತು ‘ದರ್ಶನ’ ಭಾಗ್ಯ ! ತಮ್ಮ ಸೆಲೆಬ್ರಿಟಿ ಜೊತೆ ಡಿ ಬಾಸ್!
Sandalwood star Darshan Thoogudeepa meets a fan named Sudeepa, who had waited for 14 years for his visit
![ಮುಗಿದ 14 ವರ್ಷದ ವನವಾಸ! ಕೊನೆಗೂ ಸುದೀಪನಿಗೆ ಸಿಕ್ಕಿತು ‘ದರ್ಶನ’ ಭಾಗ್ಯ ! ತಮ್ಮ ಸೆಲೆಬ್ರಿಟಿ ಜೊತೆ ಡಿ ಬಾಸ್!](https://malenadutoday.com/uploads/images/202306/image_750x_649585e89d96d.jpg)
KARNATAKA NEWS/ ONLINE / Malenadu today/ Jun 23, 2023 SHIVAMOGGA NEWS
ಆತ ನಟ ದರ್ಶನ್ರ ಅಪ್ಪಟ ಅಭಿಮಾನಿ! ಒಂದು ಸಲವಾದರೂ ದರ್ಶನ್ರನ್ನ ನೋಡಲೇ ಬೇಕು ಎಂದು ಹುಚ್ಚನಾದವನು. ಅದಕ್ಕಾಗಿ ಉಟ್ಟ ಬಟ್ಟೆಯಲ್ಲಿ ಮನೆ ಬಿಟ್ಟು ದರ್ಶನ್ರ ಮನೆಯ ಬಳಿ ಹೋಗಿ , ಗೇಟು ಕಾದವನು. ಆದರೆ ತಮ್ಮ ಅಭಿಮಾನಿಗಳನ್ನೆ ಸೆಲೆಬ್ರಿಟಿ ಎಂದು ಕರೆದುಕೊಂಡಿರುವ ಡಿಬಾಸ್ ದರ್ಶನ್ರನ್ನ ನೋಡುವ ಭಾಗ್ಯ ಮಾತ್ರ ಆ ಅಭಿಮಾನಿಗೆ ಸಿಕ್ಕಿರಲಿಲ್ಲ.
14 ವರ್ಷದಿಂದ ವನವಾಸ!
ದರ್ಶನ್ರನ್ನ ನೋಡಲೇ ಬೇಕು ಎಂದು 14 ವರ್ಷದಿಂದ ಪ್ರಯತ್ನ ಪಟ್ಟಿದ್ದ ಆತ. ಕೊನೆಕೊನೆಗೆ ಅದೇ ನೋವಲ್ಲಿ ಮಾನಸಿಕ ಖಿನ್ನತೆಗೂ ಒಳಗಾಗಿದ್ದ. ಆತನ ಹೆಸರು ಸುದೀಪ! ಊರು ರಿಪ್ಪನ್ಪೇಟೆಯ ಸಮೀಪದ ಬೆಳ್ಳೂರು ಗ್ರಾಮ. ಈತನನ್ನು ಹೀಗೆ ಬಿಟ್ಟರೇ ಕೈ ಬಿಟ್ಟು ಹೋಗುತ್ತಾನೆ ಎಂದು ಕೊಂಡ ಸ್ಥಳೀಯರು ಈ ವಿಷಯವನ್ನು ಮಾಧ್ಯಮಗಳಿಗೆ ಮುಟ್ಟಿಸಿದ್ದರು. ಸ್ಥಳೀಯ ಮಾಧ್ಯಮಗಳು ಕೂಡ, ವಿಷಯ ತಿಳಿದು ದರ್ಶನ್ ಅಭಿಮಾನಿಯ ಮನೆಗೆ ಹೋಗಿ ಆತನ ಪೂರ್ವಪರ ವಿಚಾರಿಸಿದಾಗ ಆತನಲ್ಲಿದ್ದ ದರ್ಶನ್ರನ್ನ ನೋಡಬೇಕು ಎಂಬ ಕುತೂಹಲ ಎಷ್ಟು ಗಾಢವಾಗಿದೆ ಎಂಬುದು ಅರ್ಥವಾಗಿತ್ತು.
ಈ ಸಂಬಂಧ ಮಲೆನಾಡು ಟುಡೆ ತಂಡ ಕೂಡ ವರದಿಯನ್ನ ಮಾಡಿತ್ತು. ಸಾಯುವುದರಲ್ಲಿ ಒಮ್ಮೆ ದರ್ಶನ್ರನ್ನ ನೋಡ್ಬೇಕು ! ಡಿಬಾಸ್ಗಾಗಿ 10 ವರ್ಷಗಳಿಂದ ಕಾಯ್ತಿದ್ದಾನೆ ಈ ಸುದೀಪ! ಖಿನ್ನತೆಗೊಳಗಾದ ಅಭಿಮಾನಿ ಆಸೆ ಈಡೇರಿಸುತ್ತಾರಾ ಅಭಿಮಾನಿಗಳ ಚಕ್ರವರ್ತಿ! ಎಂಬ ಶೀರ್ಷಿಕೆಯ ಅಡಿಯಲ್ಲಿ ಸುದ್ದಿಯನ್ನ ಪ್ರಸಾರ ಮಾಡಿತ್ತು.
ಹೀಗೆ ಹಲವು ಮಾಧ್ಯಮಗಳು ವರದಿ ಬರೆದ ಬೆನ್ನಲ್ಲೆ, ನಿರೀಕ್ಷೆಯಂತೆಯೇ ದರ್ಶನ್ರ ಅಭಿಮಾನಿಗಳು ಸುದೀಪನಿಗೆ ಡಿಬಾಸ್ರನ್ನ ಭೇಟಿ ಮಾಡಿಸುವ ಅವಕಾಶ ಕಲ್ಪಿಸಲು ಪ್ರಯತ್ನಿಸಿದ್ದಾರೆ. ಸದ್ಯ ಈ ಪ್ರಯತ್ನ ಯಶಸ್ವಿಯಾಗಿದೆ. ದಾಸ ದರ್ಶನ್ ತಮ್ಮ ಅಭಿಮಾನಿಯ ಕೈ ಕುಲುಕಿ ಆತನೊಂದಿಗೆ ಸೆಲ್ಪಿಗೂ ಪೋಸ್ ಕೊಟ್ಟಿದ್ಧಾರೆ. ಪುಣ್ಯಾತ್ಮನ ಹರಸಾಹಸದ ಕಥೆಗಳನ್ನು ಕೇಳಿ ಚಿನ್ನ….ಅಂತಾ ಪ್ರೀತಿಯಿಂದ ಮಾತನಾಡಿದ್ಧಾರೆ ದರ್ಶನ್.
ತಮ್ಮ ಕೈ ಕುಲುಕಿದ ಅಭಿಮಾನಿಯ ಕೈಯನ್ನ ಕೆಲವು ಹೊತ್ತು ಹಿಡಿದೆ ಇದ್ದ ದರ್ಶನ್, ಆತನ ಬಗ್ಗೆ ತಿಳಿದುಕೊಂಡಿದ್ಧಾರೆ. ಅಭಿಮಾನಿಯ ಮನದಾಸೆಯನ್ನು ತಣಿಸುವ ಹೊತ್ತು ಆತನೊಂದಿಗೆ ಇದ್ದು, ಅಲ್ಲಿಂದ ಮುಂದಕ್ಕೆ ಸಾಗಿದ್ಧಾರೆ.