ಸಾಯುವುದರಲ್ಲಿ ಒಮ್ಮೆ ದರ್ಶನ್​ರನ್ನ ನೋಡ್ಬೇಕು ! ಡಿಬಾಸ್​ಗಾಗಿ 10 ವರ್ಷಗಳಿಂದ ಕಾಯ್ತಿದ್ದಾನೆ ಈ ಸುದೀಪ! ಖಿನ್ನತೆಗೊಳಗಾದ ಅಭಿಮಾನಿ ಆಸೆ ಈಡೇರಿಸುತ್ತಾರಾ ಅಭಿಮಾನಿಗಳ ಚಕ್ರವರ್ತಿ!

Sudeepa, a fan of actor D Boss Darshan, has been waiting for 10 years to see him once before he dies. Will a depressed fan's wish be fulfilled!

KARNATAKA NEWS/ ONLINE / Malenadu today/ Jun 14, 2023 SHIVAMOGGA NEWS

ನಟ ದರ್ಶನ್​ ತಮ್ಮ ಅಭಿಮಾನಿಗಳನ್ನೇ ಸೆಲೆಬ್ರಿಟಿಗಳು ಅಂತಾ ಕರೆದವರು. ಅದಕ್ಕಾಗಿ ಹಚ್ಚೆಯನ್ನು ಸಹ ಹಾಕಿಸಿಕೊಂಡು ತಮ್ಮ ಅಭಿಮಾನಿಗಳ ಮೇಲಿನ ಪ್ರೀತಿ ಎಷ್ಟಿದೆ ಎಂಬುದನ್ನ ಅವರು ತೋರಿಸಿದ್ದರು. ಇನ್ನೂ ಅವರಿಗೆ ಇರುವಷ್ಟು ಅಭಿಮಾನಿಗಳ ಪಡೆ ಹಾಗೂ ಅವರುಗಳ ವಿಶೇಷ ಪ್ರೀತಿಯನ್ನು ಅಳೆಯುವುದಕ್ಕಂತೂ ಸಾಧ್ಯವೇ ಇಲ್ಲ. ಅಂತಹ ಅಭಿಮಾನಿಯೊಬ್ಬನ ಸ್ಟೋರಿಯಿದು.. 

ಶಿವಮೊಗ್ಗದಲ್ಲಿದ್ದಾನೆ ಅಪ್ಪಟ ದರ್ಶನ್ ಅಭಿಮಾನಿ

ಶಿವಮೊಗ್ಗ ಜಿಲ್ಲೆಯ ದರ್ಶನ್ (darshan thoogudeepa)​ ಅಭಿಮಾನಿಯೊಬ್ಬ, ದಾಸ ದರ್ಶನ್​ರನ್ನ ನೋಡಲೇ ಬೇಕು ಎಂಬ ಹಂಬಲದೊಂದಿಗೆ ವರ್ಷಗಳೇ ಕಳೆದಿದ್ದಾನೆ. ಅಲ್ಲದೆ ಅದೇ ಯೋಚನೆಯಲ್ಲಿಯೇ ಮಾನಸಿಕವಾಗಿಯು ಕುಗ್ಗಿ ಹೋಗಿದ್ದಾನೆ. ಎಷ್ಟರಮಟ್ಟಿಗೆ ಎಂದರೆ, ಪ್ರತಿದಿನವೂ ದರ್ಶನ್​ ಎಲ್ಲಿದ್ದಾರೆ ಎಂದು ವಿಚಾರಿಸಿಕೊಳ್ಳುವ ಆತ, ಅದರ ಬಗ್ಗೆ ಮಾಹಿತಿ ಸಿಕ್ಕರೇ ಸಾಕು ಹೊರಟು ಬಿಡುತ್ತಾನೆ.

Shivamogga airport ಸೇರಿದಂತೆ ರಾಜ್ಯದ ವಿಮಾನ ನಿಲ್ದಾಣಗಳ ಬಗ್ಗೆ ರಾಜ್ಯ ಸರ್ಕಾರದ ಮಹತ್ವದ ಕ್ರಮ!

ದರ್ಶನ್​ರಿಗಾಗಿ ಮನೆ ಬಿಟ್ಟು ಹೋಗುವ ಅಭಿಮಾನಿ

ದರ್ಶನ್​ರನ್ನ ನೋಡಿಯೇ ಸಿದ್ದ ಎಂದು 14 ವರ್ಷದವನಿದ್ಧಾಗಿನಿಂದಲೂ ಶತಪ್ರಯತ್ನ ನಡೆಸುತ್ತಿದ್ದಾನೆ. ದರ್ಶನ್​ರ ಮನೆಯವರೆಗೂ ಹೋಗಿ ನಿಂತಿದ್ದ ಆತ, ಅಲ್ಲಿ ದರ್ಶನ್​ರ ಕಟೌಟ್​ ನೋಡಿ ವಾಪಸ್ ಆಗಿದ್ಧಾನೆ. ಆದರೆ ದರ್ಶನ್​ರ ದರ್ಶನ ಭಾಗ್ಯ ಮಾತ್ರ ಇದುವರೆಗೂ ಆತನಿಗೆ ಸಿಕ್ಕಿಲ್ಲ. ಮನೆಯಲ್ಲಿ ಯಾರಿಗೂ ಹೇಳದೇ ಕೇಳದೇ ನಡೆದು ಬಿಡುವ ಆತ, ದರ್ಶನ್​ರನ್ನು ನೋಡುವ ಪ್ರಯತ್ನದಲ್ಲಿ ಇದುವರೆಗೂ ಯಶಸ್ಸು ಕಂಡಿಲ್ಲ. 

ಮಾನಸಿಕ ಖಿನ್ನತೆಗೆ ಒಳಗಾದ ಅಭಿಮಾನಿ

ಮೇಲಾಗಿ ಇದೇ ಕಾರಣಕ್ಕೆ ಮಾನಸಿಕವಾಗಿಯು ಖಿನ್ನತೆಗೆ ಒಳಗಾಗಿದ್ಧಾನೆ. ಸಾಯುವುದರೊಳಗೆ ಒಮ್ಮೆ ದರ್ಶನ್​ನನ್ನ ನೋಡಬೇಕು ಎನ್ನುತ್ತಿರುವ ಆತನಿಗಾಗಿ ಇದೀಗ ಆತನ ಕುಟುಂಬಸ್ಥರು ಸಹ ಡಿಬಾಸ್​ ಅಭಿಮಾನಿಗಳಲ್ಲಿ ದರ್ಶನ್​ರಿಗೆ ಈ ವಿಷಯ ಮುಟ್ಟಿಸಿ ಒಮ್ಮೆ ದರ್ಶನ್​​ರನ್ನ ನೊಡಲು ಅವಕಾಶ ಒದಗಿಸಿ ಎಂದು ಮನವಿ ಮಾಡುತ್ತಿದ್ದಾರೆ. 

ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾದ ಶಿವಣ್ಣ ದಂಪತಿ! ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗ್ತಾರಾ?

ಈ ಅಪ್ಪಟ ಅಭಿಮಾನಿಯ ಹೆಸರು ಸುದೀಪ್​

ಅಂದಹಾಗೆ ಇಂತಹ ಒಬ್ಬ ವಿಶೇಷ ಅಭಿಮಾನಿ ಇರೋದು  ಹೊಸನಗರ ತಾಲ್ಲೂಕಿನ ಬೆಳ್ಳೂರು ಗ್ರಾಮ ಪಂಚಾಯಿತ್ ವ್ಯಾಪ್ತಿಯ ಮತ್ತಿಕೊಪ್ಪ ಗ್ರಾಮದಲ್ಲಿ . ಇಲ್ಲಿನ ಹಿರಿಯಣ್ಣ ಮತ್ತು ತಾರಾ ಎಂಬುವರ ದ್ವಿತೀಯ ಪುತ್ರ ಇಪ್ಪತ್ನಾಲ್ಕು ವರ್ಷದ ಸುದೀಪ್  ದರ್ಶನ್ ದರ್ಶನಕ್ಕಾಗಿ ಇವತ್ತಿಗೂ ಹಾತೊರೆಯುತ್ತಿದ್ದಾನೆ.  

ಆರನೇ ಕ್ಲಾಸ್​ನಿಂದ ಡಿ ಬಾಸ್ ಅಭಿಮಾನಿ

ಆರನೇ ಕ್ಲಾಸ್​ನಲ್ಲಿಯೇ ದರ್ಶನ್​ರ ಅಭಿಯಾನಿಯಾದ ಸುದೀಪ, ಅವರ ಸಿನಿಮಾನಗಳನ್ನ ನೋಡಿ, ದರ್ಶನ್​​​ ಬಗ್ಗೆ ವಿಶಿಷ್ಟ ಆಸೆಯನ್ನು ತಮ್ಮ ಮನಸ್ಸಿನಲ್ಲಿ ತುಂಬಿಕೊಂಡಿದ್ದಾನೆ. ಅವರನ್ನ ನೋಡಬೇಕು ಎಂಬ ಹಂಬಲ ಈಡೇರದೇ ಇದ್ಧಾಗ, ಖಿನ್ನತೆಗೆ ಒಳಗಾಗಿದ್ದಾನೆ. 

ಹಲವು ಆಸ್ಪತ್ರೆಗಳಲ್ಲಿ ಟ್ರೀಟ್ಮೆಂಟ್​

ಈತನಿಗೆ ಶಿವಮೊಗ್ಗದ ಮೆಗ್ಗಾನ್​, ಮಂಗಳೂರಿನ ವೆನ್​ಲಾಕ್​ ಹಾಗೂ ಮಣಿಪಾಲ್ ಆಸ್ಪತ್ರೆಯಲ್ಲಿ ಮನೆಯವರು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಯಾವ ಚಿಕಿತ್ಸೆಗೂ ಚೇತರಿಸಿಕೊಳ್ಳದ ಸುದೀಪ, ಇದ್ದಕ್ಕಿದ್ದ ಹಾಗೆ ಮನೆಬಿಟ್ಟು ಹೊರಟು ಬಿಡುತ್ತಾನೆ.

ಅಮಿರ್​ ಅಹಮದ್ ಸರ್ಕಲ್​ನಲ್ಲಿ ಹಲ್ಲೆ/ ಬಸ್​ಗೆ ಲಾರಿ ಡಿಕ್ಕಿ/ ನಾಯಿಗೆ ಗುದ್ದಿದ್ದಕ್ಕೆ ಮಾಲೀಕನ ಕಿರಿಕ್!/ ಎದುರುಮನೆಯವನ ಕಾಟ! ಶಿವಮೊಗ್ಗ TODAY CRIME @ NEWS

ದರ್ಶನ್​ರ ಮನೆಯವರೆಗೂ ಹೋಗಿದ್ದ ಸುದೀಪ್​

ದರ್ಶನ್​ರನ್ನ ನೋಡಿಕೊಂಡು ಬರುತ್ತೇನೆ ಎಲ್ಲೆಂದರಲ್ಲಿ ಅಲೆಯುತ್ತಾನೆ. ಕೊನೆಗೊಮ್ಮೆ ಮತ್ತೆ ನಿರಾಸೆಗೊಂಡು ವಾಪಸ್ ಬರುತ್ತಾನೆ. ಹೀಗೆ ಒಮ್ಮೆ ದರ್ಶನ್​ರ ಮನೆಯ ಬಾಗಿಲವರೆಗೂ ಹೋಗಿದ್ದನಂತೆ. ಅಲ್ಲಿ ಈತನಿಗೆ ದರ್ಶನ್ ಸಿಗಲಿಲ್ಲ. ಅಲ್ಲಿದ್ದವರು ದರ್ಶನ್​ರವರು ಊರಲಿಲ್ಲ ಎಂದು ಹೇಳಿ ಕಳುಹಿಸಿದ್ದರಂತೆ ಹಾಗಾಗಿ ಇನ್ನಷ್ಟು ಖಿನ್ನತೆಗೆ ಒಳಗಾಗಿದ್ಧಾನೆ. 

ಮದುವೆಯಾಗುವ ಹುಡುಗಿಯ ಜೊತೆ ಸಾಯುವ ಮಾತು! ಸ್ಮಶಾನದ ವಿಚಾರ ಹೇಳಿದ ಹುಡುಗ! ಮಾತುಕತೆ ಮುರಿದಿದ್ದಕ್ಕೆ ನಡೀತು ಹಲ್​ಚಲ್​!

ದರ್ಶನ್​ ಸರ್ ಪ್ಲೀಸ್​…ಒಮ್ಮೆ ಭೇಟಿಯಾಗಿ

ಮೊದಲೆಲ್ಲಾ ಮನೆ ಕೆಲಸವೆಲ್ಲಾ ಮಾಡುತ್ತಿದ್ದ ಸುದೀಪ್ ಇದೀಗ ಖಿನ್ನತೆಯಿಂದಾಗಿ ಯಾವ ಕೆಲಸವನ್ನು ಮಾಡುತ್ತಿಲ್ಲವಂತೆ. ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೊರಡುವ ಈತ ಎಲ್ಲಾದರೂ ಹೋಗಿ ಏನು ಮಾಡಿಕೊಳ್ಳುತ್ತಾನೋ ಎಂಬ ಆತಂಕ ಮನೆಯವರದ್ಧಾಗಿದೆ. ಯಾವ ಚಿಕಿತ್ಸೆಯಿಂದಲೂ ಗುಣಮುಖನಾಗದ ಸುದೀಪ್​, ದರ್ಶನ್​ರ ಭೇಟಿಯಿಂದಾದರೂ ಸರಿಹೋಗಬಹುದು ಎಂಬ ಆಸೆ ಕುಟುಂಬಸ್ಥರಲ್ಲಿದೆ. ಆದರೆ ಎಲ್ಲೋ ಇರುವ ನಾವು ಅಷ್ಟು ದೊಡ್ಡ ನಟನನ್ನು ಭೇಟಿಯಾಗಲು ಸಾಧ್ಯವೆ ಎಂಬ ಪ್ರಶ್ನೆಯೊಂದಿಗೆ ಮಾದ್ಯಮದ ಮುಂದೆ ಕಣ್ಣೀರಿಡುತ್ತಿದೆ ಕುಟುಂಬ! ಸುದೀಪನ ಆಸೆಯ ಜೊತೆಗೆ ಕುಟುಂಬವೊಂದರ ನಿರೀಕ್ಷೆಯನ್ನ  ಸೆಲೆಬ್ರಿಟಿಗಳ ಕಣ್ಮಣಿ ಡಿ ಬಾಸ್ ದರ್ಶನ್​ ಪೂರೈಸಬೇಕಿದೆ. ಆ ದಿನ ಬೇಗ ಬರಲಿ ಎಂಬುದಷ್ಟೆ ಈ ವರದಿಯ ನಿರೀಕ್ಷೆ!