ಪೊಲೀಸ್ ಸಬ್-ಇನ್ಸ್ಪೆಕ್ಟರ್, ಇಂಜಿನಿಯರ್ ಹುದ್ದೆ: ಅರ್ಜಿ ಆಹ್ವಾನ

Malenadu Today

KARNATAKA NEWS/ ONLINE / Malenadu today/ Aug 6, 2023 SHIVAMOGGA NEWS 

ಸ್ಟಾಫ್ ಸೆಲೆಕ್ಷನ್ ಕಮೀಷನ್ ಕೇಂದ್ರ ನೇಮಕಾತಿ ಪ್ರಾಧಿಕಾರವು ದೆಹಲಿ ಪೊಲೀಸ್ ಪಡೆಗಳಲ್ಲಿ ಸಬ್-ಇನ್ಸ್ಪೆಕ್ಟರ್ ಮತ್ತು ಜೂನಿಯರ್ ಇಂಜಿನಿಯರ್ ಹುದ್ದೆಗಳ ನೇಮಕಾತಿಗೆ ವೆಬ್ಸೈಟ್ https://ssc.nic.in/  ಆನ್​ಲೈನ್​ ಪೋರ್ಟಲ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಸಬ್-ಇನ್ಸ್ಪೆಕ್ಟರ್ ಹುದ್ದೆಗಳಿಗೆ 20 ರಿಂದ 25 ವರ್ಷ ಮತ್ತು ಇಂಜಿನಿಯರ್ ಹುದ್ದೆಗಳಿಗೆ 30 ರಿಂದ 32 ವರ್ಷ ನಿರ್ದಿಷ್ಠ ವಯೋಮಿತಿ ಹೊಂದಿರುವ, ಮಾನ್ಯತೆ ಪಡೆದ ಮಂಡಳಿಯಿಂದ ಪದವಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.ಆನ್ಲೈನ್ ನೊಂದಣಿಗೆ ಸಬ್-ಇನ್ಸ್ಪೆಕ್ಟರ್ ಹುದ್ದೆಗಳಿಗೆ ಆಗಸ್ಟ್ 15 ಮತ್ತು ಇಂಜಿನಿಯರ್ ಹುದ್ದೆಗಳಿಗೆ ಆಗಸ್ಟ್ 16 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 080-25502520 ಅನ್ನು ಸಂಪರ್ಕಿಸಬಹುದಾಗಿದೆ 


ತೀರ್ಥಹಳ್ಳಿ ಶಿಕಾರಿ ಶೂಟ್​! ಪೊಲೀಸರು ದಾಖಲಿಸಿದ್ರು ಸುಮೋಟೋ ಕೇಸ್​! ಎಫ್​ಐಆರ್​ನಲ್ಲಿ ಏನಿದೆ!? ನಡೆದಿದ್ದೇನು?

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ದಾಸನಗದ್ದೆ ಹಿರೆಗದ್ದೆ ಗ್ರಾಮದ ಸಮೀಪ ನಡೆದಿದ್ದ ಶಿಕಾರಿ ಶೂಟ್ ಪ್ರಕರಣ ಸಂಬಂದ ಪೊಲೀಸರು ಸುಮೋಟೋ ಕೇಸ್ ದರ್ಜ್​ ಮಾಡಿದ್ದಾರೆ. ಈ ಸಂಬಂಧ  : IPC 1860 (U/s-341,323,504,506) ಅಡಿಯಲ್ಲಿ ಕೇಸ್ ಆಗಿದೆ. 

ಎಫ್​ಐಆರ್​ನಲ್ಲಿ ಏನಿದೆ? 

ತೀರ್ಥಹಳ್ಳಿ ಪೊಲೀಸರು ದಾಖಲಿಸಿರುವ ಎಫ್​ಐಆರ್​ ನ ಪ್ರಕಾರ,  ತೀರ್ಥಹಳ್ಳಿ ಪೊಲೀಸ್ ಸ್ಟೇಷನ್​ ಪಿಸಿ  ಟೌನ ಕೊಪ್ಪ ಸರ್ಕಲ್ ಬಳಿಯಲ್ಲಿ, ಮಾಹಿತಿ ಸಂಗ್ರಹಣೆಯಲ್ಲಿದ್ಧಾಗ, ಅವರಿಗೆ ಶಿಕಾರಿಯ ಮಾಹಿತಿ ಲಭ್ಯವಾಗಿದ್ದು, ಗುಂಡು ತಗಲಿರುವ ವಿಚಾರ ಗೊತ್ತಾಗಿದೆ. ತಕ್ಷಣವೇ ಅವರು,  ತೀರ್ಥಹಳ್ಳಿ, ಸರ್ಕಾರಿ ಜೆಸಿ, ಆಸ್ಪತ್ರೆಗೆ ಬಂದು ವಿಚಾರಿಸಿದ್ದಾರೆ. ಈ ವೇಳೆ ಗಾಯಾಳು ಮಾಹಿತಿ ನೀಡಿದ್ಧಾರೆ. 

ನಡೆದಿದ್ದೇನು?

ಎಫ್​ಐಆರ್​ನಲ್ಲಿ ಇರುವಂತೆ ರಾಕೇಶ್ ಹಾಗೂ ರಾಜೇಶ್ ಎಂಬ ಅಣ್ಣತಮ್ಮ ಕಾಡುಹಂದಿಯ ಶಿಕಾರಿಗೆ ಹೋಗಿದ್ದು, ದಾಸನಗದ್ದೆ ಬಳಿ ಕಾಣಿಸಿದ ಹಂದಿಗೆ ಗುಂಡು ಹೊಡೆದಿದ್ದಾರೆ. ಈ ವೇಳೆ ರಾಕೇಶ್ ಹೊಡೆದ  ಗುಂಡು ಹಂದಿಗೆ ಬೀಳದ ಹಿನ್ನೆಲೆ ರಾಜೇಶ್ ಗುಂಡು ಹಾರಿಸಿದ್ಧಾರೆ. ಆದರೆ ಹಂದಿಗೆ ಗುಂಡು ಬೀಳುವ ಬದಲು ರಾಕೇಶ್​ರ ಕಾಲಿಗೆ ಗುಂಡು ಬಿದ್ದಿದೆ ಎಂದು ಆರೋಪಿಸಲಾಗಿದೆ. ಸದ್ಯ ಈ ವಿಚಾರದ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. 

 

ಇನ್ನಷ್ಟು ಸುದ್ದಿಗಳು 

 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

 

Share This Article