Panchanga January ಬೆಂಗಳೂರು | ವಿಶ್ವಾವಸು ನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು ಪುಷ್ಯ ಮಾಸದ ಇಂದಿನ ತಿಥಿ ಬಹುಳ ನವಮಿ ಮಧ್ಯಾಹ್ನ 2-00 ಗಂಟೆಯವರೆಗೆ ಇರಲಿದ್ದು, ಆ ನಂತರ ದಶಮಿ ಆರಂಭವಾಗಲಿದೆ. ಸ್ವಾತಿ ನಕ್ಷತ್ರ ರಾತ್ರಿ 10-33 ರವರೆಗೆ ಇರಲಿದ್ದು, ತದನಂತರ ವಿಶಾಖ ನಕ್ಷತ್ರ ಪ್ರವೇಶವಾಗಲಿದೆ. ಅಮೃತ ಘಳಿಗೆ ಮಧ್ಯಾಹ್ನ 12-58 ರಿಂದ 2-44 ರವರೆಗೆ ಲಭ್ಯವಿದೆ. ರಾಹುಕಾಲ ಬೆಳಿಗ್ಗೆ 7-30 ರಿಂದ 9-00 ರವರೆಗೆ ಹಾಗೂ ಯಮಗಂಡ ಕಾಲವು ಬೆಳಿಗ್ಗೆ 10-30 ರಿಂದ 12-00 ರವರೆಗೆ ಇರಲಿದೆ.
ಶಿವಮೊಗ್ಗ ಸಿಮ್ಸ್ ಹಾಸ್ಟೆಲ್ನಲ್ಲಿ ರೇಡಿಯಾಲಜಿ ವಿಭಾಗದ ಪಿಜಿ ವೈದ್ಯ ಆತ್ಮಹತ್ಯೆ
ಇಂದಿನ ರಾಶಿಫಲ
ಮೇಷ | ಹೊಸ ವ್ಯಕ್ತಿಗಳ ಪರಿಚಯ, ಶುಭವಾರ್ತೆ. ಆರ್ಥಿಕ ಪ್ರಗತಿ ಕಂಡುಬರಲಿದ್ದು, ವ್ಯಾಪಾರ ಮತ್ತು ಉದ್ಯೋಗದಲ್ಲಿ ಉತ್ತಮ ಪ್ರೋತ್ಸಾಹ ಸಿಗಲಿದೆ. ವೃಷಭ | ಸ್ಥಗಿತಗೊಂಡ ಕೆಲಸ ವೇಗ ಪಡೆಯಲಿದ್ದು, ಆಪ್ತರಿಂದ ನೆರವು ಸಿಗಲಿದೆ, ಶುಭ ಸಮಾಚಾರ. ಆತಂಕವಿದ್ದರೆ ಅದು ದೂರವಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ. ವ್ಯಾಪಾರದಲ್ಲಿ ಲಾಭ ,ಉದ್ಯೋಗದಲ್ಲಿ ಕೆಲವು ಹೊಸ ಇಕ್ಕಟ್ಟು ಎದುರಾಗಬಹುದು.
ಮಿಥುನ | ಶ್ರಮ ಹೆಚ್ಚಾಗಲಿದೆ, ನಿರೀಕ್ಷಿತ ಫಲ ದೊರೆಯುವುದು ಕಷ್ಟವಾಗಲಿದೆ. ಅನಗತ್ಯ ಖರ್ಚು, ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರು . ಆಧ್ಯಾತ್ಮಿಕ ಕಾರ್ಯಗಳಲ್ಲಿ ಭಾಗಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಧಾರಣ ದಿನ

ಕರ್ಕಾಟಕ | ವ್ಯವಹಾರ ಅಂದುಕೊಂಡಷ್ಟು ವೇಗವಾಗಿ ಸಾಗದಿರಬಹುದು. ಆರ್ಥಿಕ ಪರಿಸ್ಥಿತಿಯು ಸ್ವಲ್ಪ ಮಟ್ಟಿಗೆ ಚೇತರಿಕಗೆ ಸಮಯ ಬೇಕು, ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಅಗತ್ಯ. ದೂರ ಪ್ರಯಾಣ ಮತ್ತು ಆರೋಗ್ಯದಲ್ಲಿ ಸಮಸ್ಯೆ. ಉದ್ಯೊಗದಲ್ಲಿ ಸಾಮಾನ್ಯ ದಿನ
ಸಿಂಹ | ಕುಟುಂಬದಲ್ಲಿ ಶುಭಕಾರ್ಯಗಳ ಚರ್ಚೆ. ಧನಲಾಭ,ಭೂವಿವಾದ ಇತ್ಯರ್. ಉದ್ಯೋಗದಲ್ಲಿನ ಒತ್ತಡ ನಿವಾರಣೆ. ವ್ಯವಹಾರದಲ್ಲಿ ವಿಶೇಷ ದಿನ
ಕನ್ಯಾ | ವ್ಯವಹಾರದಲ್ಲಿ ಈ ದಿನ ಮಂದಗತಿ, ಕೆಲವು ನಿರ್ಧಾರಗಳನ್ನು ಬದಲಿಸಿಕೊಳ್ಳುವ ಅನಿವಾರ್ಯತೆ. ಆರ್ಥಿಕ ಪರಿಸ್ಥಿತಿ ಮತ್ತು ಉದ್ಯೋಗದ ವಾತಾವರಣವು ಆಶಾದಾಯಕವಾಗಿರುವುದಿಲ್ಲ.
ಶಿವಮೊಗ್ಗದಲ್ಲಿ 91000! ಉಳಿದ ಕಡೆ ಎಷ್ಟಿದೆ ಅಡಕೆ ದರ! ಅಡಿಕೆ ರೇಟು ಓದಿ
ತುಲಾ | ಕೈಗೊಂಡ ಕೆಲಸ ನಿಗದಿತ ಸಮಯಕ್ಕೆ ಪೂರ್ಣಗೊಳ್ಳಲಿವೆ. ಆಕಸ್ಮಿಕವಾಗಿ ಧನಲಾಭ ಸಾಧ್ಯತೆ, ಹೊಸ ಪರಿಚಯ ಹೆಚ್ಚಾಗಲಿವೆ. ವಸ್ತುಲಾಭ, ಉದ್ಯೋಗ ಮತ್ತು ವ್ಯಾಪಾರ ಸುಗಮವಾಗಿ ಸಾಗಲಿವೆ.
ವೃಶ್ಚಿಕ | ಕೆಲಸಗಳಲ್ಲಿ ಅಡೆತಡೆ ಎದುರಾಗಬಹುದು. ಸಾಲದ ಪ್ರಯತ್ನ, ಅನಗತ್ಯ ಖರ್ಚು ಮತ್ತು ಆಕಸ್ಮಿಕ ಪ್ರಯಾಣ. ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವುದು ಮುಖ್ಯ.
ಧನು | ಕೆಲಸದಲ್ಲಿದ್ದ ಸಮಸ್ಯೆ ದೂರ. ಧನಲಾಭ, ದೇವಾಲಯಗಳಿಗೆ ಭೇಟಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಮಸ್ಯೆಗಳ ನಿವಾರಣೆ, ಅನಾರೋಗ್ಯ.

ಮಕರ | ಬಂಧುಮಿತ್ರರ ಸಲಹೆ ಉಪಯೋಗಕ್ಕೆ ಬರಲಿವೆ. ವಾಹನ ಖರೀದಿ, ಶಿಕ್ಷಣ ಅಥವಾ ಉದ್ಯೋಗದ ಅವಕಾಶ ಅರಸಿ ಬರಲಿವೆ. ವ್ಯಕ್ತಿಗಳ ಪರಿಚಯವಾಗಲಿದ್ದು, ಉದ್ಯೋಗದಲ್ಲಿ ತೃಪ್ತಿ ಇರಲಿದೆ.
ಕುಂಭ | ಕೆಲಸದ ಒತ್ತಡ ಹೆಚ್ಚಾಗಲಿದ್ದು, ಶ್ರಮಕ್ಕೆ ತಕ್ಕ ವಿಶ್ರಾಂತಿ ಸಿಗುವುದು ಕಷ್ಟ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ
ಶಿವಮೊಗ್ಗ: ಹೃದಯಾಘಾತದಿಂದ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

ಮೀನ | ಸಣ್ಣಪುಟ್ಟ ಭಿನ್ನಾಭಿಪ್ರಾಯ, ಕೆಲಸ ವಿಳಂಬವಾಗಲಿದ್ದು, ಕುಟುಂಬದಲ್ಲಿನ ಜವಾಬ್ದಾರಿ ಜಾಸ್ತಿ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿನ ಗೊಂದಲ ದೂರವಾಗಲಿವೆ. ವಹಿವಾಟು, ಉದ್ಯೋಗದಲ್ಲಿ ಸಾಮಾನ್ಯ ದಿನ
ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ: ಜನವರಿ 12, 2026 ರ ದಿನ ಭವಿಷ್ಯ | ಮಲೆನಾಡು ಟುಡೆ Todays Horoscope and Panchanga January 12, 2026 Daily Predictions | Malenadu Today
ರಾಶಿ ಭವಿಷ್ಯ, ಪಂಚಾಂಗ, ಇಂದಿನ ದಿನ ಭವಿಷ್ಯ, ಪಂಚಾಂಗ ಫಲ, ದಿನ ಫಲ, ಜ್ಯೋತಿಷ್ಯ, ಮಲೆನಾಡು ಟುಡೆ ಸುದ್ದಿ.Horoscope Today, Panchanga, Daily Predictions, Astrology, Zodiac Signs, Daily Horoscope Kannada, Malenadu Today.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.