ಜೆಡಿಎಸ್​ಗೆ ಹೊಸ ಬಲ ತುಂಬುತ್ತಿರುವ ಸಂಘಟನೆಗಳು/ ಇವತ್ತು ಕೂಡ ಹಲವರು ಪಕ್ಷ ಸೇರ್ಪಡೆ!

KARNATAKA NEWS/ ONLINE / Malenadu today/ Apr 25, 2023 GOOGLE NEWS


ಶಿವಮೊಗ್ಗ/    ಶಿವಮೊಗ್ಗದಲ್ಲಿ ಜೆಡಿಎಸ್​ ಸೇರುವ ಪ್ರವರ ಮುಂದುವರಿದಿದೆ. ನಿನ್ನೆಯಷ್ಟೆ ಕಾಂಗ್ರೆಸ್​ ಹಾಗೂ ಬಿಜೆಪಿಯ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಎಸ್​ ಪಕ್ಷವನ್ನು ಸೇರಿದ್ದರು. 

ಇವತ್ತು ಸಂವಿಧಾನ ಸಂರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಹಾಗೂ ವಕೀಲರು ಎ ಗಂಗಾಧರ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಗಪ್ಪ ಆರ್ ಜೆಡಿಎಸ್​ ಪಕ್ಷವನ್ನು ಸೇರಿದ್ದಾರೆ. 

ಜಿಲ್ಲಾ ಜೆಡಿಎಸ್​ ಕಚೇರಿಯಲ್ಲಿ ಇವತ್ತು ಬೆಳಗ್ಗೆ ಸುಮಾರು 500 ಮಂದಿ ತಮ್ಮ ಬೆಂಬಲಿಗರೊಡನೆ ಪಕ್ಷದ ಭಾವುಟ ಹಿಡಿದು ಸೇರ್ಪಡೆಗೊಂಡರು. 

ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಈ ವೇಳೆ ಮಾತನಾಡಿ, 32 ವಾರ್ಡ್​ಗಳಲ್ಲಿ ಪಕ್ಷದ ಸಂಘಟನೆ ಕೆಲಸವಾಗುತ್ತಿದೆ. ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಲವರು ಜೆಡಿಎಸ್​ ಸೇರುತ್ತಿದ್ದಾರೆ. 

ಇವತ್ತು ದೊಡ್ಡ ಸಂಖ್ಯೆಯಲ್ಲಿ ಪಕ್ಷವನ್ನು ಹಲವರು ಸೇರಿದ್ದಾರೆ. ಜೆಡಿಎಸ್​ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮವಹಿಸಿ ಎಂದು ನೂತನ ಕಾರ್ಯಕರ್ತರಿಗೆ ಕರೆಕೊಟ್ಟರು. 

ಪಕ್ಷ ಸೇರ್ಪಡೆಗೊಂಡ ಗಂಗಾಧರ್ ಮಾತನಾಡಿ, ಜಿಲ್ಲೆಯಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ.  ನಗರ ಕ್ಷೇತ್ರದಲ್ಲಿ ವಿಶೇಷವಾಗಿ ಜೆಡಿಎಸ್​ಗೆ ಶಕ್ತಿ ತುಂಬಲು ಪಕ್ಷ ಸೇರುತ್ತಿರುವುದಾಗಿ ತಿಳಿಸಿದರು. 

ಹಿರಿಯರಾದ ಆಯನೂರು ಮಂಜುನಾಥ್​ರವರು, ಶಿವಮೊಗ್ಗ ಶಾಂತಿಗಾಗಿ ಗೆಲ್ಲಬೇಕಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್​ನಿಂದ ಕೆ.ಬಿ ಪ್ರಸನ್ನಕುಮಾರ್​ ಕೂಡ ಜೆಡಿಎಸ್​ ಸೇರ್ಪಡೆಗೊಂಡಿದ್ದು, ಪಕ್ಷದ ಕೈ ಬಲಪಡಿಸಿದ್ದಾರೆ. ಇದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು. 

ಕಾರ್ಯಕ್ರಮದಲ್ಲಿ ಶಿವಮೊಗ್ಗದ ಹೊಸಮನೆ, ಶರಾವತಿ ನಗರ, ಗಾಡಿಕೊಪ್ಪ, ಬೊಮ್ಮನಕಟ್ಟೆ, ರಾಗಿಗುಡ್ಡ, ಮಿಲಘಟ್ಟ, ಸೀಗೆಹಟ್ಟಿ, ಕುಂಬಾರಗುಂಡಿ, ವಿದ್ಯಾನಗರ,ಬುದ್ದಾ ನಗರ , ಗೋಪಾಳ ಸೇರಿದಂತೆ ವಿವಿಧ ವಾರ್ಡ್​ಗಳ ಕಾರ್ಯಕರ್ತರು ಪಕ್ಷವನ್ನು ಸೇರ್ಪಡೆಗೊಂಡರು. 

 

Malenadutoday.com Social media

 

Leave a Comment