ಮುಸ್ಲಿಮ್ ವಿರೋದಿಯಲ್ಲ/ ಆದ ಗಲಾಟೆಗಳಲ್ಲ ಕೋಮುಗಲಭೆಯಲ್ಲ!

Not anti-Muslim/ Not communal riots Shivamogga city BJP candidate Channabasappa said

ಮುಸ್ಲಿಮ್ ವಿರೋದಿಯಲ್ಲ/ ಆದ ಗಲಾಟೆಗಳಲ್ಲ ಕೋಮುಗಲಭೆಯಲ್ಲ!

KARNATAKA NEWS/ ONLINE / Malenadu today/ May 1, 2023 GOOGLE NEWS


 ಶಿವಮೊಗ್ಗ/ ಪ್ರೆಸ್ ಟ್ರಸ್ಟ್ ಹಾಗೂ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದದಲ್ಲಿ ಇವತ್ತು ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಪಾಲ್ಗೊಂಡಿದ್ದರು. ಈ ವೇಳೆ ಅವರು  ಶಿವಮೊಗ್ಗದಲ್ಲಿ ಕೋಮುಗಲಭೆ ನಾವು ಹುಟ್ಟುವುದಕ್ಕೂ ಮುನ್ನವೇ ಇತ್ತು. ಆದರೆ, ಈಚೇಗೆ ರಾಜಕೀಯ ಕಾರಣಕ್ಕೆ ಶಾಂತಿಯುತವಾಗಿದ್ದ ಶಿವಮೊಗ್ಗ ನಗರದಲ್ಲಿ ಅಶಾಂತಿ ಮೂಡಿಸಿಕೊಂಡು ಬಂದಿದ್ದಾರೆ ಎಂದಿದ್ದಾರೆ. 

ಮುಸ್ಲಿಮ್​ ವಿರೋಧಿಯಲ್ಲ 

ಶಂಕಿತ ಉಗ್ರ ಕೃತ್ಯಗಳಲ್ಲಿ ಭಾಗಿಯಾಧವರು ಮುಸ್ಲಿಮರೆ.ಹಾಗೆಂದು  ಎಲ್ಲ ಮುಸ್ಲಿಮರು ಭಯೋತ್ಪಾದಕ ಕೃತ್ಯ ವೆಸಗಲ್ಲ. ಒಬ್ಬಿಬರು ಮಾಡುವ ತಪ್ಪಿಗೆ ಇಡೀ ಸಮುದಾಯವೇ ಹೊಣೆಯಾಗುತ್ತಿದೆ. ತಪ್ಪು ಮಾಡಿದಾಗ ಆ ಸಮಾಜದ ಹಿರಿಯರು ಬುದ್ದಿಹೇಳಿ ಪಾಠ ಕಲಿಸಿದ್ದರೆ ಅವರು ದಾರಿ ತಪ್ಪುತಿರಲಿಲ್ಲ. ಬಿಜೆಪಿ ಎಲ್ಲ ಮುಸ್ಲಿಮರ ವಿರೋಧಿ ಅಲ್ಲ. ನಮಗೂ ಮುಸ್ಲಿಮರು ಮತ ನೀಡುತ್ತಿದ್ದಾರೆ ಎಂದು ಚನ್ನಬಸಪ್ಪ ತಿಳಿಸಿದರು.



ಇದನ್ನೂ ಓದಿ / ಒಂದೇ ದಿನ 90 ಲಕ್ಷದ ಎಣ್ಣೆ ಜಪ್ತಿ/ ಶಿಕಾರಿಪುರದಲ್ಲಿ ಭರ್ಜರಿ ಹಣ ಪತ್ತೆ/  ಒಂದೇ ರಾತ್ರಿ 19 ಪಿಟ್ಟಿಕೇಸ್/ ಎ.ಎ. ಸರ್ಕಲ್​ ನಲ್ಲಿ ರೂಟ್ ಮಾರ್ಚ್​! ಪೊಲೀಸ್ ನ್ಯೂಸ್​ 

ಯಾರೋ ಮಾಡಿದ ಗಲಾಟೆಗೆ?

ಶಿವಮೊಗ್ಗದಲ್ಲಿ ಅನೇಕ ಬಾರಿ ಗಲಾಟೆ ನಡೆದಿದೆ. ಆದರೆ, ಅದ್ಯಾವುದು ಕೋಮುಗಲಭೆಯಲ್ಲ. ಯಾರದೋ ಮೇಲಿನ ಸಿಟ್ಟನ್ನು ತೀರಿಸಿಕೊಳ್ಳಲು ನಡೆದ ಗಲಾಟೆಗಳು. ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ತಲೆಗೆ ಕಟ್ಟುವಂತ ಕೆಲಸ ರಾಜಕೀಯ ಕಾರಣಕ್ಕೆ ಆಗಿದೆ ಎಂದು ದೂರಿದ್ಧಾರೆ. 



ಹಿಂದೂ ಸಮಾಜದ ಮೇಲೆ ಹಲ್ಲೆಯಾದರೆ, ಹಿಂದುಗಳನ್ನು ಕೊಂದರೆ ಅದನ್ನು ಪ್ರಶ್ನಿಸುವುದೇ ತಪ್ಪೇ. ಶಾಂತಿಯನ್ನು ಕದಡುವವರು ನಾವಲ್ಲ. ವಿಶ್ವವೇ ಒಂದು ಕುಟುಂಬ ಎಂದು ಹಿಂದು ಸಮಾಜ ಬಯಸುತ್ತದೆ. ಆದರೆ, ಅಶಾಂತಿಗೆ ಕಾರಣರಾದವರ ವಿರುದ್ಧ ನಮ್ಮ ಧ್ವನಿ ಸದಾ ಇರುತ್ತದೆ. ಆದರೆ ಈ ಧ್ವನಿಯನ್ನೇ ಕೋಮುವಾದ ಎಂದರೆ ಹೇಗೆ ಎಂದು ಚನ್ನಬಸಪ್ಪ ಪ್ರಶ್ನೆ ಮಾಡಿದರು.



ಇದನ್ನ ಓದಿ/ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿವಮೊಗ್ಗ ಕೋರ್ಟ್​ ನೀಡಿತು ಭಾರೀ ಶಿಕ್ಷೆ 

ಗೆಲುವು ನಮ್ಮದೆ

ಸಂಘಟನೆ ಮತ್ತು ಈಶ್ವರಪ್ಪ ಅವರ ಮಾರ್ಗದರ್ಶನದಲ್ಲಿ ಗೆದ್ದು ಅವರ ಆಶೀರ್ವಾದ ಪಡೆದು ಸಂಘಟನೆಯ ಅಪೇಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ನಗರದ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ಬಿಜೆಪಿ ಸಂಘಟನಾತ್ಮಕವಾಗಿ ಪ್ರಬಲವಾಗಿದ್ದು, ಗೆಲುವಿಗೆ ಪೂರಕ ವಾತಾವರಣವಿದೆ ಎಂದರು.

ಈಶ್ವರಪ್ಪ ನನ್ನ ಬೆಳಸಿದ್ದಾರೆ

ಬಿಜೆಪಿ ಕಾರ್ಯಕರ್ತನಾದ ನನಗೆ ಪಕ್ಷ ಸ್ಪರ್ಧೆಗೆ ಅವಕಾಶ ನೀಡಿದೆ. ಯಡಿಯೂರಪ್ಪ, ಈಶ್ವರಪ್ಪ, ಮೇಲ್ಪಂಕ್ತಿ ಹಾಕಿದ್ದಾರೆ.  1980 ರ ದಶಕದಿಂದ  ಶಿವಮೊಗ್ಗ ಶಾಸಕರಾಗಿ ಈಶ್ವರಪ್ಪರವರು ಕೆಲಸ ಮಾಡಿದ್ದಾರೆ. ನಾನು ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಅವರು ನನ್ನನ್ನು ಬೆಳೆಸಿದ್ದಾರೆ. ದೇಶ ಮೊದಲು ಎನ್ನುವ ಪಕ್ಷ ನಮ್ಮದು. ಪಕ್ಷದ ಮುಖಂಡರು ಪಕ್ಷ ಬಿಟ್ಟು ಹೋಗಬಹುದು. ಆದರೆ ಬಿಜೆಪಿ ಕಾರ್ಯಕರ್ತರ ಪಕ್ಷ. ಕಾರ್ಯಕರ್ತರು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದಿದ್ದಾರೆ. 

ಇದನ್ನ ಓದಿ/ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿವಮೊಗ್ಗ ಕೋರ್ಟ್​ ನೀಡಿತು ಭಾರೀ ಶಿಕ್ಷೆ 

ಆಟೋ ಚಾಲಕನಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಡಿಐಜಿಪಿ ತ್ಯಾಗರಾಜನ್​ ರಿಂದ ಸನ್ಮಾನ! ಕಾರಣವೇನು ?

ಶಿವಮೊಗ್ಗ ಶಿವಮೊಗ್ಗ ಪೊಲೀಸ್  ಇಲಾಖೆ ಆಟೋ ಡ್ರೈವರ್​ ಒಬ್ಬರಿಗೆ ಕಚೇರಿಗೆ ಕರೆದು ಸನ್ಮಾನ ಮಾಡಿದೆ. ಆಟೋದಲ್ಲಿ ಪ್ರಯಾಣಿಕರೊಬ್ಬರು ಬಿಟ್ಟುಹೋಗಿದ್ದ ಬೆಲೆಬಾಳುವ ವಸ್ತುಗಳನ್ನ ಹಿಂತಿರುಗಿಸಿದ ಪ್ರಾಮಾಣಿಕತೆಗಾಗಿ ಅವರನ್ನ ಸನ್ಮಾನ ಮಾಡಲಾಗಿದೆ. 

ಪ್ರಾಮಾಣಿಕತೆ ಮೆರೆದ ಚಾಲಕ

ದಿನಾಂಕಃ 30-04-2023 ರಂದು ಶಿವಮೊಗ್ಗ ಟೌನ್ ಬಸವೇಶ್ವರ ನಗರದ ವಾಸಿ ಶ್ರೀನಿವಾಸ ಗೌಡರವರ ಕಾರು  ಶರಾವತಿ ನಗರದ ಬಳಿ ಕೆಟ್ಟುನಿಂತಿತ್ತು. ಹೀಗಾಗಿ , ಆಟೋದಲ್ಲಿ ಮನೆಗೆ ಹೊರಡಲು ಮುಂದಾಗಿದ್ದಾರೆ. 

ಆ ಸಂದರ್ಭದಲ್ಲಿ  ಆಟೋದ ಚಾಲಕ ಶ್ರೀನಿವಾಸ್ ಗೌಡರ ಕಾರನ್ನು ತಳ್ಳಿ ಸ್ಟಾರ್ಟ್ ಮಾಡಲು ಅನುವು ಮಾಡಿಕೊಟ್ಟಿದ್ದರು. ಆದರೆ, ಅಷ್ಟರಲ್ಲಿ ಶ್ರೀನಿವಾಸ್ ಗೌಡರವರು,  ತಮ್ಮ ನಗದು  ಹಣ, ಎಟಿಎಂ ಕಾರ್ಡ್, ಬ್ಯಾಂಕ್ ಪಾಸ್ ಬುಕ್  ಮತ್ತು ಅಡಿಕೆ ಮಂಡಿಯ ಕೀ ಇದ್ದ ತಮ್ಮ ಬ್ಯಾಗ್ ಅನ್ನು ಮರೆತು ಆಟೋದಲ್ಲಿಯೇ ಮರೆತು ಹೋಗಿದ್ದರು. 

ಇದನ್ನ ಗಮನಿಸಿದ ಆಟೋ ಚಾಲಕ ಫೈರೋಜ್ ಖಾನ್, ಬ್ಯಾಗ್​ನ್ನು  ಪೊಲೀಸ್ ರಿಗೆ ತಂದು ಕೊಟ್ಟು ಅದರ ಮಾಲೀಕರಿಗೆ ಒಪ್ಪಿಸುವಂತೆ ಮನವಿ ಮಾಡಿದ್ದರು. ಅದರಂತೆ ಪೊಲೀಸರು ಬ್ಯಾಗ್ ಮತ್ತು ಅದರಲ್ಲಿದ್ದ ರೂ 22,000/- ನಗದು  ಹಣ, ಎಟಿಎಂ ಕಾರ್ಡ್, ಬ್ಯಾಂಕ್ ಪಾಸ್ ಬುಕ್  ಮತ್ತು ಅಡಿಕೆ ಮಂಡಿಯ ಕೀ ಅನ್ನು ಮಾಲೀಕರಾದ ಶ್ರೀನಿವಾಸ್ ಗೌಡ ರವರಿಗೆ ಹಿಂದಿರುಗಿಸಿದ್ದಾರೆ. ಅಲ್ಲದೆ ಪ್ರಾಮಾಣಿಕತೆ ಮೆರೆದ ಆಟೋ ಚಾಲಕರಿಗೆ ಸನ್ಮಾನ ಮಾಡಿದ್ದಾರೆ.  

ಇದನ್ನ ಓದಿ/ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿವಮೊಗ್ಗ ಕೋರ್ಟ್​ ನೀಡಿತು ಭಾರೀ ಶಿಕ್ಷೆ 

 

ಈ  ವೇಳೆ,  ಜಿಲ್ಲಾ ಪೊಲೀಸ್ ಕಛೇರಿಯಲ್ಲಿ,  ತ್ಯಾಗರಾಜನ್, ಐಪಿಎಸ್, ಮಾನ್ಯ ಡಿಐಜಿಪಿ, ಪೂರ್ವ ವಲಯ ದಾವಣಗೆರೆ ಮತ್ತು ಮಿಥುನ್ ಕುಮಾರ್ ಜಿ.ಕೆ, ಐಪಿಎಸ್,  ಮಾನ್ಯ  ಪೊಲೀಸ್ ಅಧೀಕ್ಷಕರು,   ಅನಿಲ್ ಕುಮಾರ್ ಭುಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು  ಸತೀಶ ಕುಮಾರ ಕೆ.ವಿ, ಪೊಲೀಸ್ ನಿರೀಕ್ಷಕರು, ಜಿಲ್ಲಾ ನಿಸ್ತಂತು ವಿಭಾಗ, ಕಂಟ್ರೋಲ್ ರೂಂ ಶಿವಮೊಗ್ಗ ರವರು ಉಪಸ್ಥಿತರಿದ್ದರು.



 

 



 

Malenadutoday.com Social media