ತೀರ್ಥಹಳ್ಳಿಯ ಮುಡುಬಾ ಜನರಿಗೆ ಕಿರಿಕಿರಿ ಆಗ್ತಿರೋ ಚೆಕ್​​ಪೋಸ್ಟ್! ಎಂಎಲ್​ಎ ಆರಗ ಜ್ಞಾನೇಂದ್ರರಿಗೆ ದೂರು

Muduba people in Thirthahalli taluk are getting irritated by the checkpost, complain to MLA Araga Jnanendra

ತೀರ್ಥಹಳ್ಳಿಯ ಮುಡುಬಾ ಜನರಿಗೆ ಕಿರಿಕಿರಿ ಆಗ್ತಿರೋ ಚೆಕ್​​ಪೋಸ್ಟ್! ಎಂಎಲ್​ಎ ಆರಗ ಜ್ಞಾನೇಂದ್ರರಿಗೆ ದೂರು
ತೀರ್ಥಹಳ್ಳಿಯ ಮುಡುಬಾ ಜನರಿಗೆ ಕಿರಿಕಿರಿ ಆಗ್ತಿರೋ ಚೆಕ್​​ಪೋಸ್ಟ್! ಎಂಎಲ್​ಎ ಆರಗ ಜ್ಞಾನೇಂದ್ರರಿಗೆ ದೂರು

MALENADUTODAY.COM | SHIVAMOGGA NEWS |THIRTHAHALLI  

ಶಿವಮೊಗ್ಗ ಜಿಲ್ಲೆಯಲ್ಲಿ ಮರಳು ಅಕ್ರಮ ಸಾಗಾಣಿಕೆಯನ್ನು ತಡೆಯುವ ನಿಟ್ಟಿನಲ್ಲಿ ಮುಖ್ಯ ರಸ್ತೆಗಳಲ್ಲಿ ಚೆಕ್​ಪೋಸ್ಟ್​ಗಳನ್ನು (checkpost) ನಿರ್ಮಾಣ ಮಾಡಲಾಗಿದೆ. ಆದರೆ ಈ ಚೆಕ್​ಪೋಸ್ಟ್​ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿಯೇ ನಿರ್ಮಿಸುತ್ತಿರುವುದಕ್ಕೆ  ತೀವ್ರ ವಿರೋಧವೂ ಸಹ ವ್ಯಕ್ತವಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ತಿರ್ಥಹಳ್ಳಿ ತಾಲ್ಲೂಕಿನ ಮುಡುಬದಲ್ಲಿ ಹಾಕಲಾಗಿರುವ ಚೆಕ್​ಪೋಸ್ಟ್​ ಸ್ಥಳೀಯರ ವಿರೋಧಕ್ಕೆ ಕಾರಣವಾಗಿದೆ. 

ಮುಡುಬಾ ಬಸ್​ಸ್ಟಾಂಡ್​ನಲ್ಲಿಯೇ ಚೆಕ್​ಪೋಸ್ಟ್​ನ್ನು ನಿರ್ಮಿಸಲಾಗಿದೆ. ಬಸ್​ಸ್ಟ್ಯಾಂಡ್​​ನ್ನು ಸಹ ಚೆಕ್​ಪೋಸ್ಟ್​ಗಾಗಿ ಬಳಸಿಕೊಳ್ಳಲಾಗುತ್ತಿದೆ. ಬ್ಯಾರಿಕೇಡ್​ಗಳನ್ನು ಹೈವೆ ರಸ್ತೆಯಲ್ಲಿ ಇರಿಸಿ, ಮರಳು ಲಾರಿಗಳನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಆದರೆ ಬಸ್​ಸ್ಟ್ಯಾಂಡ್​ ಬಳಿಯಲ್ಲಿಯೇ ಚೆಕ್​ಪೋಸ್ಟ್​ ನಿರ್ಮಿಸಿರುವುದು ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದೆ. ದಿನಕ್ಕೆ ಈ ಭಾಗದಲ್ಲಿ 100 ಕ್ಕು ಹೆಚ್ಚು ಲಾರಿಗಳು ಓಡಾಡುತ್ತಿವೆ. ಅವುಗಳನ್ನು ಜನವಿರುವ ಸ್ಥಳದಲ್ಲಿಯೇ ಪರಿಶೀಲನೆ ನಡೆಸ್ತಿರೋದರಿಂದ ಕಿರಿಕಿರಿಯಾಗುತ್ತಿದೆ ಎಂದು ಸ್ಥಳೀಯರು ಎಂಬವರು ಆರೋಪಿಸಿದ್ದಾರೆ.  

ಟ್ರಾಫಿಕ್​ ಫೈನ್​ ಕಟ್ಟಲು 50 ಪರ್ಸೆಂಟ್ ಡಿಸ್ಕೌಂಟ್! ಶಿವಮೊಗ್ಗ ಸಿಟಿಯಲ್ಲಿ ಎಲ್ಲೆಲ್ಲಿ ದಂಡ ಕಟ್ಟಲು ಇದೆ ಅವಕಾಶ! ವಿವರ ಇಲ್ಲಿದೆ

ಮುಡುಬಾ ಬಸ್​ಸ್ಟಾಂಡ್​ನ ಬಳಿಯಲ್ಲಿ ನಿತ್ಯಾ ನೂರಾರು ಮಂದಿ ಓಡಾಡುತ್ತಿರುತ್ತಾರೆ. ಮಕ್ಕಳು ಶಾಲೆಗೆ ಹೋಗಲು ಸಹ ಇದೇ ಬಸ್​ಸ್ಟ್ಯಾಂಡ್​ ಬಳಿ ಬರುತ್ತಾರೆ. ಅಲ್ದೆ ನಿತ್ಯದ ವಹಿವಾಟು ಸಹ ಇಲ್ಲಿಯೆ ನಡೆಯುತ್ತದೆ. ಹೀಗಿರುವ ಸ್ಥಳದಲ್ಲಿಯೇ ಚೆಕ್​ಪೋಸ್ಟ್​ ನಿರ್ಮಾಣ ಮಾಡಿರೋದು ಎಷ್ಟು ಸರಿ ಎಂದು ಸ್ಥಳೀಯರ ತಂಡವೊಂದು ಎಂಎಲ್​ಎ ಆರಗ ಜ್ಞಾನೇಂದ್ರರನ್ನ (Araga jnanendra) ಭೇಟಿ ಮಾಡಿ ಸಮಸ್ಯೆ ತೋಡಿಕೊಂಡಿದೆ. ಸಮಸ್ಯೆಗೆ ಸ್ಪಂದಿಸಿರುವ ಆರಗ ಜ್ಞಾನೇಂದ್ರರವರು ಸಂಬಂಧಪಟ್ಟ ಅಧಿಕಾರಿಗಳಿಗೆ ಫೋನ್ ಹಾಯಿಸಿ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಚೆಕ್​ಪೋಸ್ಟ್​ ನಿರ್ಮಿಸಿ ಎಂದು ಸೂಚಿಸಿದ್ಧಾರೆ. 

ಶಿವಮೊಗ್ಗದಿಂದ ತೀರ್ಥಹಳ್ಳಿಯವರೆಗೆ ಹಾದು ಹೋಗುವ 169 ರಾಷ್ಟ್ರೀಯ ಹೆದ್ದಾರಿಯಲ್ಲಿ ಗಾಜನೂರು, ಮುಡುಬಾದಲ್ಲಿ ಈಗಾಗಲೇ ಎರಡು ಫಾರೆಸ್ಟ್ ಚೆಕ್​ಪೋಸ್ಟ್​ಗಳಿವೆ. ಇನ್ನೂ ರಾಷ್ಟ್ರೀಯ ಹೆದ್ದಾರಿಯಲ್ಲಿ  ಚೆಕ್​ಪೋಸ್ಟ್​ಗಳ ನಿರ್ಮಾಣದ ಬಗ್ಗೆಯು ಕೆಲವೊಂದು ನಿಯಮಗಳಿವೆ. ಸದ್ಯ ಹೆಚ್ಚುವರಿಯಾಗಿ ಹಾಕಲಾಗುತ್ತಿರುವ ತಾತ್ಕಾಲಿಕ ಚೆಕ್​ಪೋಸ್ಟ್​ಗಳು ಅವಶ್ಯಕತೆ ಇದೆಯೇ ಎಂಬ ಪ್ರಶ್ನೆಯು ಸ್ಥಳೀಯರದ್ದಾಗಿದೆ. ಹಳೆಯ ಚೆಕ್​ಪೋಸ್ಟ್​ಗಳನ್ನು ಇನ್ನಷ್ಟು ಬಿಗಿಗೊಳಿಸುವ ಅವಕಾಶಗಳನ್ನು ಆಡಳಿತ ವ್ಯವಸ್ಥೆ ಬಳಸಿಕೊಳ್ಳಬೇಕಿದೆ.

*ಶಿವಮೊಗ್ಗ ಜಿಲ್ಲೆಗೆ ಮೋದಿಗಿಫ್ಟ್​! ಮೂರು ರೈಲ್ವೆನಿಲ್ದಾಣ​ಕ್ಕೆ Amrit Bharat Station Yojana ಜಾರಿ! ಏನಿದು ಯೋಜನೆ ಗೊತ್ತಾ?*

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com