Accident / ಎಗ್​ ರೈಸ್ಗೆ ಆರ್ಡರ್​ ಹೇಳಿ , ಬೈಕ್​ ಬಳಿ ನಿಂತಾಗ ಸಂಭವಿಸಿತು ದುರಂತ

Malenadu Today

KARNATAKA NEWS/ ONLINE / Malenadu today/ May 18, 2023 SHIVAMOGGA NEWS PAPER ONLINE

ಶಿವಮೊಗ್ಗ ಎಗ್​​ರೈಸ್ ತಿನ್ನಲು ಬೈಕ್​ ಸೈಡ್​ಹಾಕಿ ನಿಂತಿದ್ದಾಗ ಟ್ರ್ಯಾಕ್ಟರ್​ ಗುದ್ದಿ, ಯುವಕನೊಬ್ಬ ಸಾವನ್ನಪ್ಪಿದ್ದಾನೆ.ಶಿವಮೊಗ್ಗದ ಹೊಳಲೂರಿನ ಕೆಇಬಿ ಕಚೇರಿ ಬಳಿ ಈ ಘಟನೆ ಸಂಭವಿಸಿದೆ. 

ರೈಲಿಗೆ ಕಾಡುಕೋಣ ಡಿಕ್ಕಿ/ ಚರಂಡಿಗೆ ಬಿದ್ದು ಕಾಡು ಪ್ರಾಣಿಯ ನರಳಾಟ

ಹೇಗಾಯ್ತು! 

ಹೊಳಲೂರಿನ ಕೆಇಬಿ ಮುಂಭಾಗ ಎಗ್ ರೈಸ್ ತಿನ್ನಲು ಆಕಾಶ್ (20) ಮತ್ತು ಸೋಮಿಕೊಪ್ಪದ ನವೀನ (23) ತೆರಳಿದ್ರು. ಬೈಕ್ ಸೈಡ್​ಗೆ ಹಾಕಿ  ಎಗ್ ರೈಸ್ ಆರ್ಡರ್ ಹೇಳಿ, ಬೈಕ್​ ಬಳಿಯಲ್ಲಿಯೇ ಮೊಬೈಲ್ ನೋಡುತ್ತಾ ನಿಂತಿದ್ದರು.

ಶಿವಮೊಗ್ಗದಲ್ಲಿ ಎಲೆಕ್ಷನ್ ಡ್ಯೂಟಿ ಮುಗಿಸಿ ಊರಿಗೆ ಹೋದ ಅಧಿಕಾರಿಗೆ ಕಾದಿತ್ತು ಶಾಕ್

ಈ ವೇಳೆ ಮೇಲಿನ ಹನಸವಾಡಿಯಿಂದ ಇಟ್ಟಿಗೆ ತುಂಬಿಸಿಕೊಂಡು ಬರುತ್ತಿದ್ದ  ಟ್ರ್ಯಾಕ್ಟರ್​ ಬೈಕ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನವೀನ್​ ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ (shivamogga hospital) ಗೆ ರವಾನಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾರೆ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Viral video/ ಕಾರಿನಲ್ಲಿ ಬಂದು ಸರಗಳ್ಳತನ! ! ವೈರಲ್ ಆಗ್ತಿದೆ ಈ ಸಿಸಿ ಟಿವಿ ದೃಶ್ಯ

Malenadutoday.com Social media

Share This Article