ಅಪ್ಪನನ್ನ ಕೂರಿಸಿಕೊಂಡು ಬೈಕ್​ನಲ್ಲಿ ಹೋಗುತ್ತಿದ್ದ ಮಗನಿಗೆ ಲಾರಿ ಡಿಕ್ಕಿ! ದುರಂತ ಘಟನೆ

A lorry hit a man who was riding a bike with his father sitting on it! A tragic event ಅಪ್ಪನನ್ನ ಕೂರಿಸಿಕೊಂಡು ಬೈಕ್​ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಲಾರಿ ಡಿಕ್ಕಿ! ದುರಂತ ಘಟನೆ

ಅಪ್ಪನನ್ನ ಕೂರಿಸಿಕೊಂಡು ಬೈಕ್​ನಲ್ಲಿ ಹೋಗುತ್ತಿದ್ದ ಮಗನಿಗೆ ಲಾರಿ ಡಿಕ್ಕಿ!  ದುರಂತ ಘಟನೆ

KARNATAKA NEWS/ ONLINE / Malenadu today/ Nov 15, 2023 SHIVAMOGGA NEWS

Chikkamagaluru | Malnenadutoday.com | ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ತರಕಾರಿ ಲಾರಿಯೊಂದು ಡಿಕ್ಕಿ ಹೊಡೆದಿದ್ದರಿಂದ ಬೈಕ್​ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. 

ಇಲ್ಲಿನ ಬಿದರಹಳ್ಳಿಯಲ್ಲಿ ಈ ಘಟನೆ ನಡೆದಿದ್ದು ಘಟನೆಯಲ್ಲಿ ಸಾವನ್ನಪ್ಪಿದ್ದ ವ್ಯಕ್ತಿಯು,  ಮೂಡಿಗೆರೆಯ ಬಾಳೆಹಳ್ಳಿ ನಿವಾಸಿ ಮಂಜುನಾಥ್ ಎಂದು ಗೊತ್ತಾಗಿದೆ. 

READ : ನಾಲ್ವರನ್ನ ಸಾಯಿಸಿ ಬೆಳಗಾವಿಯಲ್ಲಿ ಅಡಗಿದ್ದ ಆರೋಪಿ! ಉಡುಪಿ ಕೇಸ್​ನಲ್ಲಿ ಕಂಡು ಬಂದಿದ್ದೇನು?

ಅಪ್ಪನ ಜೊತೆಯಲ್ಲಿ ಬೈಕ್​ನಲ್ಲಿ ತೆರಳುತ್ತಿದ್ದ ಮಂಜುನಾಥ್​ರಿಗೆ ಎದುರುಗಡೆಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಸ್ಪೀಡ್​ನಲ್ಲಿ ಬಂದು ಬೈಕ್​ಗೆ ತಾಗಿದ ಪರಿಣಾಮ ಮಂಜುನಾಥ್​ ಆಯತಪ್ಪಿ ಲಾರಿಯಡಿಯಲ್ಲಿ ಸಿಲುಕಿದ್ದಾರೆ. 

ತಕ್ಷಣಕ್ಕೆ ನಿಲ್ಲದ ಲಾರಿ ಮಂಜುನಾಥ್​ ರನ್ನ ಎಳೆದುಕೊಂಡು ಮುಂದಕ್ಕೆ ಸಾಗಿದ್ದು, ಬಳಿಕ ಪಲ್ಟಿಯಾಗಿದೆ. ಸದ್ಯ ಪ್ರಕರಣ ಸಂಬಂಧ ಮೂಡಿಗೆರೆ ಪೊಲೀಸರು ಕೇಸ್ ದಾಖಲಿಸಿಕೊಂಡು ಎನ್​ಕ್ವೈರಿ ನಡೆಸ್ತಿದ್ದಾರೆ