ತುಂಬಿದ ತುಂಗೆಗೆ ಹಾರಿದ ಯುವಕನಿಗೆ ಕೋಟೆ ಪೊಲೀಸ್ ಸ್ಟೇಷನ್​ ಪೊಲೀಸರು ನೀಡಿದ್ರು ಶಾಕ್!

kote police station police have registered a case against a youth who jumped into an overflowing river in Shivamogga city ಶಿವಮೊಗ್ಗ ನಗರದಲ್ಲಿ ತುಂಬಿ ಹರಿಯುತ್ತಿದ್ದ ನದಿಗೆ ಹಾರಿದ್ದ ಯುವಕನ ವಿರುದ್ಧ ಕೋಟೆ ಪೊಲೀಸ್​ ಸ್ಟೆಷನ್​ ಪೊಲೀಸರು ಪಿಟ್ಟಿ ಕೇಸ್ ದಾಖಲಿಸಿದ್ದಾರೆ

ತುಂಬಿದ ತುಂಗೆಗೆ ಹಾರಿದ ಯುವಕನಿಗೆ ಕೋಟೆ ಪೊಲೀಸ್ ಸ್ಟೇಷನ್​ ಪೊಲೀಸರು ನೀಡಿದ್ರು ಶಾಕ್!

KARNATAKA NEWS/ ONLINE / Malenadu today/ Jul 26, 2023 SHIVAMOGGA NEWS  

ಶಿವಮೊಗ್ಗ ನಗರದ ಹಳೆಯ ಸೇತುವೆ ಬಳಿಯಲ್ಲಿ ನಿನ್ನೆ ತುಂಬಿದ ನದಿಗೆ ಹಾರಿ ಯುವಕನೊಬ್ಬ ಆತಂಕ ಸೃಷ್ಟಿಸಿದ್ದ. ಮೊದಮೊದಲು ಯುವಕ ನೀರಿಗೆ ಹಾರುತ್ತಿದ್ದುದನ್ನ ಗಮನಿಸಿದವರು, ಅಗ್ನಿಶಾಮ ಸಿಬ್ಬಂದಿಗೆ , ಕೋಟೆ ಪೊಲೀಸರಿಗೆ ಕರೆ ಮಾಡಿ ಯಾರೋ ಯುವಕ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ತಿದ್ಧಾನೆ ಎಂದಿದ್ದಾರೆ  ಆನಂತರ  ನೀರಿಗೆ ಬಿದ್ದ ಯುವಕ, ಮತ್ತೆ ಸೇತುವೆ ಮೇಲೆ ಹತ್ತಿ ಬಂದಿದ್ಧಾನೆ. ಈ ವೇಳೆ ಆತನನ್ನ ವಿಚಾರಿಸಿದ ಸ್ಥಳೀಯರು ಒಂದರೆಡು ಧರ್ಮದೇಟನ್ನ ಸಹ ನೀಡಿದ್ದಾರೆ. 

ಇನ್ನೂ ಇದೇ ಘಟನೆ ಸಂಬಂಧ ಶಿವಮೊಗ್ಗ ಕೋಟೆ ಠಾಣೆ ಪೊಲೀಸರು ಯುವಕನನ್ನ ಸ್ಟೇಷನ್​ಗೆ ಕರೆಸಿ ಬುದ್ದಿವಾದ ಹೇಳಿದ್ದಾರೆ. ಅಲ್ಲದೆ ಕೋಟೆ ಸಿಪಿಐ ಶಿವಪ್ರಸಾದ್ ರಾವ್ ಯುವಕನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ವಿಚಾರಣೆ ವೇಳೆ ಯುವಕ  ರಾಜೀವ್ ಗಾಂಧಿ ಬಡಾವಣೆ ನಿವಾಸಿ ಗಂಗಪ್ಪ @ ಅಂಗೂರ್ ಎಂದು ತಿಳಿದುಬಂದಿದೆ. ಪೊಲೀಸರ ವಿಚಾರಣೆ ವೇಳೆ ಗಂಗಪ್ಪ ತಾನೊಬ್ಬ ನುರಿತ ಈಜುಗಾರ ಎಂದು ಹೇಳಿಕೊಂಡಿದ್ದಾನೆ. 

ಎಂತಹ ಈಜುಗಾರನಾಗಿದ್ದರೂ ಅಪಾಯಕಾರಿ ಮಟ್ಟದಲ್ಲಿರುವ ನದಿಯಲ್ಲಿ ಈಜುವುದು ಪ್ರಾಣಕ್ಕೆ ಸಂಚಕಾರ ತರುವ ಸಾಧ್ಯತೆ ಇದೆ. ಈ ವಿಷಯ ತಿಳಿದು ಸಹ ದುಸ್ಸಾಹಸಕ್ಕೆ ಕೈ ಹಾಕಿದ ಹಿನ್ನೆಲೆಯಲ್ಲಿ ಗಂಗಪ್ಪನ ವಿರುದ್ಧ ಪಿಟ್ಟಿ ಕೇಸ್ ದಾಖಲಿಸಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. 

ಶಿವಮೊಗ್ಗ ಸಿಟಿಯಲ್ಲಿ ಟ್ರಾಫಿಕ್ ಪೊಲೀಸರ ದಿಢೀರ್​ ಕಾರ್ಯಾಚರಣೆ! ಅರ್ಧಗಂಟೆಯಲ್ಲಿ ನೂರಕ್ಕೂ ಹೆಚ್ಚು ಹಾಫ್​ ಹೆಲ್ಮೆಟ್​ ಜಪ್ತಿ! ಕಾರಣವೇನು?

ಭದ್ರಾವತಿ ಮರ್ಡರ್ ಕೇಸ್! ರೌಡಿ ಮುಜ್ಜು ಹತ್ಯೆ ಪ್ರಕರಣದ ರಹಸ್ಯ ಭೇದಿಸಿದ ಶಿವಮೊಗ್ಗ ಪೊಲೀಸ್ ! ನಡೆದಿದ್ದೇನು? 

ನಡುರಸ್ತೆಯಲ್ಲಿ ಮಹಿಳೆಯ ಕೊಲೆ! ಸಾಬೀತಾಯ್ತು ಅಪರಾಧ! ಶಿಕಾರಿಪುರ ಗ್ರಾಮಾಂತರ ಠಾಣೆಯ ಕೇಸ್​ನಲ್ಲಿ ಕೋರ್ಟ್ ತೀರ್ಪು!

ಮಾಜಿ ಸಿಎಂ ಬಿಎಸ್​ವೈ ಇನ್ಮುಂದೆ ಡಾ.ಬಿಎಸ್​ ಯಡಿಯೂರಪ್ಪ! ಅಭಿಮಾನಿಗಳಿಗೂ ಅವಕಾಶ ನೀಡಿದ BYR

ಮಗ ಬೈಕ್​ ಓಡಿಸಿದ ತಪ್ಪಿಗೆ 25 ಸಾವಿರ ರೂಪಾಯಿ ದಂಡ ಕಟ್ಟಿದ ತಂದೆ! ಕಾರಣವೇನು ಗೊತ್ತಾ?

ವೈದ್ಯರೊಬ್ಬರ ಸಮಯ ಪ್ರಜ್ಞೆಯಿಂದ ಬಯಲಾಯ್ತು ದುಷ್ಕೃತ್ಯ! ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಯ್ತು ಮತ್ತೊಂದು ಪೋಕ್ಶೋ ಕೇಸ್!

 ​