ತುಂಬಿದ ತುಂಗೆಗೆ ಹಾರಿದ ಯುವಕನಿಗೆ ಕೋಟೆ ಪೊಲೀಸ್ ಸ್ಟೇಷನ್ ಪೊಲೀಸರು ನೀಡಿದ್ರು ಶಾಕ್!
kote police station police have registered a case against a youth who jumped into an overflowing river in Shivamogga city ಶಿವಮೊಗ್ಗ ನಗರದಲ್ಲಿ ತುಂಬಿ ಹರಿಯುತ್ತಿದ್ದ ನದಿಗೆ ಹಾರಿದ್ದ ಯುವಕನ ವಿರುದ್ಧ ಕೋಟೆ ಪೊಲೀಸ್ ಸ್ಟೆಷನ್ ಪೊಲೀಸರು ಪಿಟ್ಟಿ ಕೇಸ್ ದಾಖಲಿಸಿದ್ದಾರೆ
KARNATAKA NEWS/ ONLINE / Malenadu today/ Jul 26, 2023 SHIVAMOGGA NEWS
ಶಿವಮೊಗ್ಗ ನಗರದ ಹಳೆಯ ಸೇತುವೆ ಬಳಿಯಲ್ಲಿ ನಿನ್ನೆ ತುಂಬಿದ ನದಿಗೆ ಹಾರಿ ಯುವಕನೊಬ್ಬ ಆತಂಕ ಸೃಷ್ಟಿಸಿದ್ದ. ಮೊದಮೊದಲು ಯುವಕ ನೀರಿಗೆ ಹಾರುತ್ತಿದ್ದುದನ್ನ ಗಮನಿಸಿದವರು, ಅಗ್ನಿಶಾಮ ಸಿಬ್ಬಂದಿಗೆ , ಕೋಟೆ ಪೊಲೀಸರಿಗೆ ಕರೆ ಮಾಡಿ ಯಾರೋ ಯುವಕ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ತಿದ್ಧಾನೆ ಎಂದಿದ್ದಾರೆ ಆನಂತರ ನೀರಿಗೆ ಬಿದ್ದ ಯುವಕ, ಮತ್ತೆ ಸೇತುವೆ ಮೇಲೆ ಹತ್ತಿ ಬಂದಿದ್ಧಾನೆ. ಈ ವೇಳೆ ಆತನನ್ನ ವಿಚಾರಿಸಿದ ಸ್ಥಳೀಯರು ಒಂದರೆಡು ಧರ್ಮದೇಟನ್ನ ಸಹ ನೀಡಿದ್ದಾರೆ.
ಇನ್ನೂ ಇದೇ ಘಟನೆ ಸಂಬಂಧ ಶಿವಮೊಗ್ಗ ಕೋಟೆ ಠಾಣೆ ಪೊಲೀಸರು ಯುವಕನನ್ನ ಸ್ಟೇಷನ್ಗೆ ಕರೆಸಿ ಬುದ್ದಿವಾದ ಹೇಳಿದ್ದಾರೆ. ಅಲ್ಲದೆ ಕೋಟೆ ಸಿಪಿಐ ಶಿವಪ್ರಸಾದ್ ರಾವ್ ಯುವಕನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ವಿಚಾರಣೆ ವೇಳೆ ಯುವಕ ರಾಜೀವ್ ಗಾಂಧಿ ಬಡಾವಣೆ ನಿವಾಸಿ ಗಂಗಪ್ಪ @ ಅಂಗೂರ್ ಎಂದು ತಿಳಿದುಬಂದಿದೆ. ಪೊಲೀಸರ ವಿಚಾರಣೆ ವೇಳೆ ಗಂಗಪ್ಪ ತಾನೊಬ್ಬ ನುರಿತ ಈಜುಗಾರ ಎಂದು ಹೇಳಿಕೊಂಡಿದ್ದಾನೆ.
ಎಂತಹ ಈಜುಗಾರನಾಗಿದ್ದರೂ ಅಪಾಯಕಾರಿ ಮಟ್ಟದಲ್ಲಿರುವ ನದಿಯಲ್ಲಿ ಈಜುವುದು ಪ್ರಾಣಕ್ಕೆ ಸಂಚಕಾರ ತರುವ ಸಾಧ್ಯತೆ ಇದೆ. ಈ ವಿಷಯ ತಿಳಿದು ಸಹ ದುಸ್ಸಾಹಸಕ್ಕೆ ಕೈ ಹಾಕಿದ ಹಿನ್ನೆಲೆಯಲ್ಲಿ ಗಂಗಪ್ಪನ ವಿರುದ್ಧ ಪಿಟ್ಟಿ ಕೇಸ್ ದಾಖಲಿಸಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ತುಂಬಿ ತುಂಗಾ ನದಿಗೆ ಸೇತುವೆ ಮೇಲಿಂದ ಹಾರಿದ ಯುವಕ! #shivamogga pic.twitter.com/N4srtdWeXw — malenadutoday.com (@CMalenadutoday) July 25, 2023
ಶಿವಮೊಗ್ಗ ಸಿಟಿಯಲ್ಲಿ ಟ್ರಾಫಿಕ್ ಪೊಲೀಸರ ದಿಢೀರ್ ಕಾರ್ಯಾಚರಣೆ! ಅರ್ಧಗಂಟೆಯಲ್ಲಿ ನೂರಕ್ಕೂ ಹೆಚ್ಚು ಹಾಫ್ ಹೆಲ್ಮೆಟ್ ಜಪ್ತಿ! ಕಾರಣವೇನು?
ಭದ್ರಾವತಿ ಮರ್ಡರ್ ಕೇಸ್! ರೌಡಿ ಮುಜ್ಜು ಹತ್ಯೆ ಪ್ರಕರಣದ ರಹಸ್ಯ ಭೇದಿಸಿದ ಶಿವಮೊಗ್ಗ ಪೊಲೀಸ್ ! ನಡೆದಿದ್ದೇನು?
ನಡುರಸ್ತೆಯಲ್ಲಿ ಮಹಿಳೆಯ ಕೊಲೆ! ಸಾಬೀತಾಯ್ತು ಅಪರಾಧ! ಶಿಕಾರಿಪುರ ಗ್ರಾಮಾಂತರ ಠಾಣೆಯ ಕೇಸ್ನಲ್ಲಿ ಕೋರ್ಟ್ ತೀರ್ಪು!
ಮಾಜಿ ಸಿಎಂ ಬಿಎಸ್ವೈ ಇನ್ಮುಂದೆ ಡಾ.ಬಿಎಸ್ ಯಡಿಯೂರಪ್ಪ! ಅಭಿಮಾನಿಗಳಿಗೂ ಅವಕಾಶ ನೀಡಿದ BYR
ಮಗ ಬೈಕ್ ಓಡಿಸಿದ ತಪ್ಪಿಗೆ 25 ಸಾವಿರ ರೂಪಾಯಿ ದಂಡ ಕಟ್ಟಿದ ತಂದೆ! ಕಾರಣವೇನು ಗೊತ್ತಾ?
ವೈದ್ಯರೊಬ್ಬರ ಸಮಯ ಪ್ರಜ್ಞೆಯಿಂದ ಬಯಲಾಯ್ತು ದುಷ್ಕೃತ್ಯ! ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಯ್ತು ಮತ್ತೊಂದು ಪೋಕ್ಶೋ ಕೇಸ್!