kimmane ratnakar : ಕೆಪಿಸಿಸಿ ನಿಯೋಗಕ್ಕೆ ಕಿಮ್ಮನೆ ರತ್ನಾಕರ್​ ನೇಮಕ | ಡಿಕೆ ಶಿವಕುಮಾರ್​ ಆದೇಶ

prathapa thirthahalli
Prathapa thirthahalli - content producer

kimmane ratnakar : ಕೆಪಿಸಿಸಿ ನಿಯೋಗಕ್ಕೆ ಕಿಮ್ಮನೆ ರತ್ನಾಕರ್​ ನೇಮಕ | ಡಿಕೆ ಶಿವಕುಮಾರ್​ ಆದೇಶ

ಉಡುಪಿ, ಉತ್ತರ ಕನ್ನಡ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇತ್ತೀಚೆಗೆ ನಡೆಯುತ್ತಿರುವ ಅಹಿತಕರ ಪ್ರಕರಣಗಳ ಬಗ್ಗೆ ತಿಳಿದುಕೊಳ್ಳಲು ಕೆಪಿಸಿಸಿ ವತಿಯಿಂದ ನಿಯೋಗವೊಂದನ್ನು ಕಳುಹಿಸಲಾಗಿದೆ. ಈ ನಿಯೋಗಕ್ಕೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್​ ಅವರನ್ನು ನೇಮಕ ಮಾಡಲಾಗಿದೆ.

ಕಿಮ್ಮನೆ ರತ್ನಾಕರ್​ರವರನ್ನು ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆದೇಶ ಹೊರಡಿಸಿದ್ದು, ಕಿಮ್ಮನೆ ರತ್ನಾಕರ್​ ಸೇರಿದಂತೆ ಇತರರು ಘಟನೆ ನಡೆದ ಪ್ರದೇಶಗಳಲ್ಲಿ ಬೇಟಿ ನೀಡಬೇಕಿದೆ. ಹಾಗೆಯೇ ಅಲ್ಲಿನ ಸಂತ್ರಸ್ತ ಕುಟುಂಬಗಳು ಹಾಗೂ  ಎಲ್ಲ ವರ್ಗದ ಜನರೊಂದಿಗೆ ಚರ್ಚಿಸಿ ಕೆಪಿಸಿಸಿಗೆ ವರದಿ ಸಲ್ಲಿಸಬೇಕಿದೆ.

Share This Article