ಶಿವಮೊಗ್ಗ ಜಿಲ್ಲೆ ಹೊಸನಗರ( hosanagara) ತಾಲ್ಲೂಕಿನ ಪಟ್ಟಣ ಭಾಗದಲ್ಲಿ ಆಗಾಗ ಕಳ್ಳತನದ ಸುದ್ದಿಗಳು ಕೇಳಿಬರುತ್ತಲೇ ಇದೆ. ಇದರ ನಡುವೆ ಇವತ್ತು ಬೆಳಗ್ಗಿನ ಜಾವ ಚೌಡಮ್ಮ ರಸ್ತೆಯ ಬಳಿಯಲ್ಲಿ ಪಿಎಲ್ಡಿ ಬ್ಯಾಂಕ್ನಲ್ಲಿ (pld bank) ಕಳ್ಳತನಕ್ಕೆ ಯತ್ನ ನಡೆಯುತ್ತಿತ್ತು. ಸ್ಥಳಿಯೊರೊಬ್ಬರ ಸಮಯಪ್ರಜ್ಞೆಯಿಂದಾಗಿ ಕಳ್ಳ ಸ್ಥಳದಲ್ಲಿಯೇ ಸಿಕ್ಕಿಬಿದ್ದಿದ್ಧಾನೆ.
ನಡೆದಿದ್ದೇನು?
ಹೊಸನಗರ ಪಿಎಲ್ಡಿ ಬ್ಯಾಂಕ್ನ ಭೀಗ ಒಡೆದು ವ್ಯಕ್ತಿಯೊಬ್ಬ ಒಳಕ್ಕೆ ನುಗ್ಗಿದ್ದ, ಈ ವೇಳೇ ಅಲ್ಲಿಯೇ ಇದ್ದ ವಾಚ್ಮನ್ ಒಬ್ಬರು ಏನೋ ಸದ್ದಾಗಿದ್ದನ್ನ ಗಮನಿಸಿದ್ದಾರೆ. ಅಲ್ಲದೆ ಅನುಮಾನಗೊಂಡು ಪರಿಶೀಲಿಸಿದ್ಧಾರೆ. ಈ ವೇಳೆ ಭೀಗ ಮುರಿದು ಬ್ಯಾಂಕ್ನ ಒಳಕ್ಕೆ ಯಾರೋ ಹೋಗಿದ್ದು ಗೊತ್ತಾಗಿದೆ. ತಕ್ಷಣ ಬ್ಯಾಂಕ್ ಸಿಬ್ಬಂದಿ ಹಾಗೂ ಪೊಲೀಸರಿಗೆ ಕರೆ ಮಾಡಿದ್ದ ಅವರು, ಕಳ್ಳನನ್ನು ಸ್ಥಳದಲ್ಲಿಯೇ ಹಿಡಿದಿದ್ದಾರೆ
ಸಿಕ್ಕಿಬಿದ್ದ ಕಬಾಬ್ ಗಣೇಶ್
ಇನ್ನೂ ಸ್ಥಳೀಯರು ಕಳ್ಳನನ್ನು ಹಿಡಿದ ಬೆನ್ನಲ್ಲೆ ಪೊಲೀಸರು ಆತನನ್ನ ವಶಕ್ಕೆ ಪಡೆದಿದ್ಧಾರೆ. ಬೆಳಗಿನ ಜಾವ ನಡೆದ ಈ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಆರೋಪಿ ಕೂಡ ಹೊಸನಗರದವನೇ ಆಗಿದ್ದ. ಸ್ಥಳೀಯವಾಗಿ ಕಬಾಬ್ ಅಂಗಡಿ ನಡೆಸ್ತಿದ್ದ ಗಣೇಶ್ ಎಂಬಾತನೇ ಕೃತ್ಯವೆಸಗಿದ್ದ. ಈ ಮೊದಲು ಕಬಾಬ್ ಅಂಗಡಿ ನಡೆಸ್ತಿದ್ದ ಗಣೇಶ ಬಳಿಕ ಬೆಂಗಳೂರಿಗೆ ಹೋಗಿದ್ದನಂತೆ. ಆತನನ್ನ ಕಬಾಬ್ ಗಣೇಶ ಎಂದೇ ಕರೆಯಲಾಗುತ್ತಿತ್ತಂತೆ. ಈ ಮಧ್ಯೆ ಬೆಂಗಳೂರಿನಿಂದ ವಾಪಸ್ ಬಂದಿದ್ದ ಈತ, ಪಿಎಲ್ಡಿ ಬ್ಯಾಂಕ್ನಲ್ಲಿ ಕಳ್ಳತನಕ್ಕೆ ಮುಂದಾಗಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಹಿಂದಿನ ಕಳ್ಳತನಗಳ ಬಗ್ಗೆ ತನಿಖೆ
ಇನ್ನೂ ಹೊಸನಗರದಲ್ಲಿ ಕಳೆದ ಮೂರು ನಾಲ್ಕು ತಿಂಗಳಿನಿಂದ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ ಸದ್ಯ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಹಿಂದಿನ ಕಳ್ಳತನ ಪ್ರಕರಣಗಳಿಗೂ ಸದ್ಯ ವಶಕ್ಕೆ ಪಡೆಯಲಾಗಿರುವ ಆರೋಪಿಗೂ ಏನಾದರೂ ಸಂಬಂಧವಿದೆಯೇ ಎಂದು ವಿಚಾರಣೆ ನಡೆಸ್ತಿದ್ಧಾರೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
