ಶಿವಮೊಗ್ಗ : ಶಿವಮೊಗ್ಗದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರರವರು ಮಾದ್ಯಮಗಳ ಜೊತೆ ಮಾತನಾಡಿದ್ರು.
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಮತ್ತೊಂದು ಚುನಾವಣೆಗೆ ದಿನಾಂಕ ನಿಗದಿ/ ವಿವರ ಇಲ್ಲಿದೆ
ಈ ವೇಳೆ ಅರವಿಂದ ಲಿಂಬಾವಳಿ ವಿರುದ್ಧದ ಎಫ್ ಐ ಆರ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ತತ್ಸಂಬಂಧ ಪೊಲೀಸರು ತನಿಖೆ ಮಾಡುತ್ತಿದ್ದಾರೆ, ತಪ್ಪಿತಸ್ಥರ ವಿರುದ್ಧ ಕ್ರಮ ಆಗುತ್ತೆ ಎಂದಿದ್ದಾರೆ. ಅಲ್ಲದೆ, ಅರೆಸ್ಟ್ ಅಭಿಯಾನ ಮಾಡಿದ್ದಾರೆಂದು ಬಂಧನ ಮಾಡಲಾಗದು, ಅಭಿಯಾನ ಮಾಡಿಲ್ಲ ಅಂತ ಬಂಧಿಸದೆ ಇರಲೂ ಆಗಲ್ಲ,ಕಾನೂನಿನಂತೆ ಕ್ರಮ ಆಗುತ್ತೆ ಎಂದು ತಿಳಿಸಿದರು.
ಮಗುವಿನ ಚಿಕಿತ್ಸೆಗೆಂದು ಬಂದವರು ಕಾಣೆಯಾಗಿದ್ದಾರೆ/ ಇವರ ಸುಳಿವು ಸಿಕ್ಕರೆ ಮಾಹಿತಿ ನೀಡಿ
ಶಿವಮೊಗ್ಗದಲ್ಲಿ ಪೊಲೀಸ್ ಕಮೀಷನರೇಟ್ ಸ್ಥಾಪನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹಸಚಿವರು, ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ, ಸೆಂಟ್ರಲ್ ಮಾರ್ಗಸೂಚಿ ಪ್ರಕಾರ ಆಗುತ್ತಿಲ್ಲ, ಆದರೂ ನನ್ನ ಪ್ರಯತ್ನ ಮಾಡುತ್ತಿದ್ದೇನೆ ಎಂದರು
ಇನ್ನೂ ಇದೇ ವೇಳೆ ರಾಜ್ಯದಲ್ಲಿಯೇ ವಿಶೇಷ ಜೈಲೊಂದನ್ನ ಶಿವಮೊಗ್ಗಕ್ಕೆ ನೀಡಲಾಗಿದೆ, ಹೈಟೆಕ್ ಆರೋಪಿಗಳಿಗಾಗಿ ಈ ವಿಶೇಷ ಜೈಲು ಇರಲಿದೆ, ಶಿವಮೊಗ್ಗ ಸೆಂಟ್ರಲ್ ಜೈಲ್ ಆವರಣದಲ್ಲಿ ವಿಶೇಷ ಜೈಲು ನಿರ್ಮಾಣವಾಗಲಿದೆ ಎಂದು ತಿಳಿಸಿದರು.