ಮಳೆ ನೀರಿನ ಜೊತೆ ತಗ್ಗಿಗೆ ಉರುಳಿದ ಕಾರು | ಗಾಂಜಾ ಆಸಾಮಿಯ ಬಳಿಯಲ್ಲಿ ಸಿಕ್ತು ಪಿಸ್ತೂಲ್​!

Malenadu Today

KARNATAKA NEWS/ ONLINE / Malenadu today/ Oct 11, 2023 SHIVAMOGGA NEWS

 

ಕಂದಕಕ್ಕೆ ಬಿದ್ದ ಕಾರು | ನೆರೆಯ ಚಿಕ್ಕಮಗಳೂರು ಜಿಲ್ಲೆಯ ಬಣಕಲ್​ ನಲ್ಲಿ ನಿನ್ನೆ  ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿದೆ. ಜೋರು ಮಳೆಯಾದ್ದರಿಂದ್ದ ರಸ್ತೆಯಲ್ಲಿ ನೀರು ತುಂಬಿಕೊಂಡಿತ್ತು. ಈ ಹಿನ್ನೆಲೆಯಲ್ಲಿ  ಚಾಲಕನಿಗೆ ರಸ್ತೆ ಸರಿಯಾಗಿ ಕಾಣದೇ ಕಾರು ರಸ್ತೆ ಪಕ್ಕಕ್ಕೆ ಚಲಿಸಿದೆ. ಪರಿಣಾಮ  ನಿಯಂತ್ರಣಕ್ಕೆ ಸಿಗದೇ,  ಕಾರು  ತಗ್ಗಿಗೆ ಉರುಳಿದೆ. 

 

ಗಾಂಜಾ ಆಸಾಮಿ ಬಳಿ ಸಿಕ್ತು ಪಿಸ್ತೂಲ್ | ಇನ್ನೊಂದಡೆ ಕಡೂರು ಪಟ್ಟಣದಲ್ಲಿ ಗಾಂಜಾ ಗುಂಗಿನಲ್ಲಿ ಪಿಸ್ತೂಲ್ ಸೇರಿದಂತೆ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುತ್ತಿದ್ದ ವ್ಯಕ್ತಿಯನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಬಿರೂರು ನಿವಾಸಿ ಸಮೀರ್ ಎಂದು ಗೊತ್ತಾಗಿದೆ.  ಎಪಿಎಂಸಿ ಆವರಣದ ಗೋದಾಮು ಬಳಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಈತನನ್ನು ಪೊಲೀಸರು ರೆಡ್ ಹಿಡಿದು ಮಾರಕಾಸ್ತ್ರಗಳನ್ನು ಜಪ್ತು ಮಾಡಿದ್ದಾರೆ. 

 


ಇನ್ನಷ್ಟು ಸುದ್ದಿಗಳು 

  1. ಅಭಯ್ ಪ್ರಕಾಶ್ ಸಸ್ಪೆಂಡ್ ಪೊಲೀಸ್ ಇಲಾಖೆಯ ವೈಫಲ್ಯವೇ? ಹೀಗೆ ಮಾಡುವುದಾದರೆ ಹಲವರು ಅಮಾನತ್ತಲ್ಲಿರಬೇಕಿತ್ತಲ್ಲವೇ? ಯಾವ ತಪ್ಪಿಗೆ ಈ ಶಿಕ್ಷೆ? JP ಬರೆಯುತ್ತಾರೆ

  2. FACEBOOK , INSTAGRAM ಪೋಸ್ಟ್ ಹಾಕಬೇಕಾದರೆ ಹುಷಾರ್! ಬೀಳುತ್ತೆ ಕೇಸ್​! social media monitoring ಮಾಡುತ್ತಿದೆ ಶಿವಮೊಗ್ಗ ಪೊಲೀಸ್ ಇಲಾಖೆ

  3. ಈ ಹಾವು ನಿಮ್ಮ ಕಣ್ಣಿಗೆ ಬಿದ್ದಿತ್ತಾ? ಇದನ್ನ ಏನಂದು ಕರೆಯುತ್ತಾರೆ? ಈ ಹಾವಿನ ಮೈಮೇಲೆ ನೀರು ಇಂಗುತ್ತೆ ಗೊತ್ತಾ?


 

Share This Article