ಡಿವೈಎಸ್ಪಿ ಬಾಲರಾಜ್ ಪ್ಲೇಸ್ಗೆ ಬಂದ್ರು DYSP ಜೆ.ಜೆ.ತಿರುಮಲೇಶ್! ಇವರ ಬಗ್ಗೆ ತಿಳಿದುಕೊಳ್ಳಲೇಬೇಕು!
Dysp JJ Thirumalesh arrives at DySP Balaraj Place You need to know about them!
Shivamogga | Jan 30, 2024 | Dysp JJ Thirumalesh ಶಿವಮೊಗ್ಗ ನಗರ ಉಪವಿಭಾಗ 1ರ ಡಿವೈಎಸ್ಪಿಯಾಗಿ ಜೆ.ಜೆ.ತಿರುಮಲೇಶ್ ವರ್ಗಾವಣೆಗೊಂಡಿದ್ದಾರೆ. ಇತ್ತೀಚೆಗಷ್ಟೆ ಬಿಟ್ ಕಾಯಿನ್ ತನಿಖೆಯ ಭಾಗವಾಗಿ ಶಿವಮೊಗ್ಗದ ಡಿವೈಎಸ್ಪಿಯಾಗಿದ್ದ ಬಾಲರಾಜ್ ರವರನ್ನು ಎಸ್ಐಟಿಗೆ ವರ್ಗಾವಣೆ ಮಾಡಲಾಗಿತ್ತು. ಆ ಸುದ್ದಿಯನ್ನು ಮಲೆನಾಡು ಟುಡೆ ಎಕ್ಸ್ ಕ್ಲ್ಯೂಸಿವ್ ಆಗಿ ನೀಡಿತ್ತು. ಅದರ ಲಿಂಕ್ ಇಲ್ಲಿದೆ ಬಿಟ್ ಕಾಯಿನ್ ತನಿಖೆಗೆ ಬಿಗ್ ಟ್ವಿಸ್ಟ್! ತನಿಖಾಧಿಕಾರಿಯಾಗಿ ಶಿವಮೊಗ್ಗದ ಡಿವೈಎಸ್ಪಿ ಬಾಲರಾಜ್ ನೇಮಕ! ಜೆಪಿ ಎಕ್ಸ್ಕ್ಲ್ಯೂಸಿವ್
ಸದ್ಯ ಇವರಿಂದ ಖಾಲಿಯಾಗಿರುವ ಪ್ಲೇಸ್ಗೆ ಲೋಕಾಯುಕ್ತದಲ್ಲಿ ಡಿವೈಎಸ್ಪಿಯಾಗಿರುವ ಜೆ.ಜೆ.ತಿರುಮಲೇಶ್ ರವರು ಆಗಮಿಸಿದ್ದಾರೆ. ಈ ಸಲುವಾಗಿ ರಾಜ್ಯ ಸರ್ಕಾರ ವರ್ಗಾವಣೆ ಆದೇಶವನ್ನು ಹೊರಡಿಸಿದೆ. ಡೈರೆಕ್ಟರ್ ಜನರಲ್ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಜನರಲ್ರವಾ ಕಾರ್ಯಾಲಯ, ಕರ್ನಾಟಕ ರಾಜ್ಯ ನಂ. 2. ನೃಪತುಂಗ ರಸ್ತೆ, ಬೆಂಗಳೂರು ರವರಿಂದ ಆದೇಶ ಹೊರಬಿದ್ದಿದ್ದು, 33 ಡಿವೈಎಸ್ಪಿಗಳ ವರ್ಗಾವಣೆಯನ್ನು ಆದೇಶಿಸಲಾಗಿದೆ. ಈ ಪೈಕಿ ಶಿವಮೊಗ್ಗ ಉಪವಿಭಾಗಕ್ಕೆ ಜೆಜೆ ತಿರುಮಲೇಶ್ರವರನ್ನು ವರ್ಗಾವಣೆ ಮಾಡಲಾಗಿದೆ.
ಶಿವಮೊಗ್ಗದಲ್ಲಿ ಕಾರ್ಯ ನಿರ್ವಹಿಸಿದ್ದ ತಿರುಮಲೇಶ್
ಈ ಹಿಂದೆ ಶಿವಮೊಗ್ಗದಲ್ಲಿಯೇ ಕಾರ್ಯ ನಿರ್ವಹಿಸಿದ್ದ ತಿರುಮಲೇಶ್ ಶಿವಮೊಗ್ಗ ರೌಡಿಸಂ ಜಗತ್ತಿನ ಹಲವು ಆಪರೇಷನ್ಗಳಲ್ಲಿ ಪಾಲ್ಗೊಂಡಿದ್ದರು. ಎರಡನೇ ಹಂತದ ರೌಡಿ ಚಟುವಟಿಕೆಗಳ ಬಗ್ಗೆ ಶಿವಮೊಗ್ಗದಲ್ಲಿಯೇ ಅನುಭವ ಪಡೆದಿರುವ ತಿರುಮಲೇಶ್ ಅದಕ್ಕೆ ಬೇಕಾದ ಟ್ರೀಟ್ಮೆಂಟ್ ಕೊಡುವ ಸಾಧ್ಯತೆಗಳಿವೆ. ಇವರಿಗೂ ಮೊದಲು ಶಿವಮೊಗ್ಗದ ಕೋಮು ಸೂಕ್ಷತೆಯನ್ನ ತಿಳಿಗೊಳಿಸುವ ನಿಟ್ಟಿನಲ್ಲಿ ಬಾಲರಾಜ್ರವರನ್ನ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಕರೆಸಿಕೊಳ್ಳಲಾಗಿತ್ತು.
ಡಿವೈಎಸ್ಪಿ ಬಾಲರಾಜ್ /DySP Balaraj
ಸರ್ವಿಸ್ನಲ್ಲಿ ಡ್ಯೂಟಿ ಮಾಡಿದ ಏರಿಯಾಕ್ಕೆ ವಾಪಸ್ ಬಂದಿದ್ದ ಬಾಲರಾಜ್ ಶಿಸ್ತುಬದ್ಧವಾಗಿ ರೌಡಿಸಂ ಚಟುವಟಿಕೆಗೆ ಪಾಠ ಕಳಿಸಿದ್ದರು. ರೌಡಿಸಂ ಭಾಷೆಯಲ್ಲಿ ಮೆಸೆಜ್ ರವಾನೆ ಮಾಡುತ್ತಿದ್ದ ಅವರು, ಪುಂಡಾಟಿಕೆ ಮೆರೆದವರನ್ನ ಸೈಲೆಂಟ್ ಆಗುವಂತೆ ಮಾಡಿದ್ದರು. ಇನ್ನೂ ತಿರುಮಲೇಶ್ರವರ ವರ್ಗಾವಣೆ ಈ ಹಿಂದೆಯೇ ಆಗುವುದರಲ್ಲಿತ್ತು. ಆ ಸಂದರ್ಭದಲ್ಲಿ ಬಾಲರಾಜ್ರವರನ್ನು ಶಿವಮೊಗ್ಗದ ಜನಪ್ರತಿನಿಧಿಗಳು ಸರ್ಕಾರಕ್ಕೆ ಮನವಿ ಮೂಲಕ ಮನವರಿಕೆ ಮಾಡಿ ಅವರನ್ನು ಇಲ್ಲಿಯೇ ಇರಿಸಿಕೊಂಡಿದ್ದರು. ಕೋಮು ಸೂಕ್ಷ್ಮತೆಯ ವಿಚಾರದಲ್ಲಿ ಬಾಲರಾಜ್ ರವರು ತೋರಿದ ಚಾಣಾಕ್ಯತೆ ಹಾಗೂ ಜೀರೋ ಟಾಲರೆನ್ಸ್ ಶಿವಮೊಗ್ಗ ಸಿಟಿಯಲ್ಲಿ ಸಾಕಷ್ಟು ಕೆಲಸ ಮಾಡಿದೆ.
ರವಿ ಚನ್ನಣ್ಣವರ್, ಅಭಿನವ್ ಖರೆ
ಇದೀಗ ಅವರ ಸ್ಥಾನಕ್ಕೆ ಜೆ.ಜೆ. ತಿರುಮಲೇಶ್ ರವರು ವರ್ಗಾವಣೆಗೊಂಡಿದ್ದಾರೆ. ಪಾತಕ ಲೋಕದ ವಿಚಾರವಾಗಿ ಇನ್ಫಾರ್ಮಿಂಗ್ ನೆಟ್ವರ್ಕ್ ಹೊಂದಿರುವ ತಿರುಮಲೇಶ್ ರೌಡಿಗಳಿಗೆ ಬಾಲರಾಜ್ರಷ್ಟೆ ವಾರ್ನಿಂಗ್ ಬಾಡಿಯಾಗಿ ನಿಲ್ಲುತ್ತಾರೆ. ಮೇಲಾಗಿ ಶಿವಮೊಗ್ಗದ ಈ ಹಿಂದಿನ ಎಸ್ಪಿಗಳು ಭೇದಿಸಿದ ನಿಗೂಢ ಹಾಗೂ ಕ್ಲೂಲೆಸ್ ಕೇಸ್ಗಳಲ್ಲಿ ತಿರುಮಲೇಶ್ ತನಿಖೆಯ ಭಾಗವಾಗಿ ಕೆಲಸ ಮಾಡಿದವರು. ಮಾರ್ಕೆಟ್ ಲೋಕಿ ಬಂಧನ, ಎಸ್ಪಿ ರವಿಚನ್ನಣ್ಣವರ್ ಭೇದಿಸಿದ ಗೋಲ್ಡ್ ಕೇಸ್ ಸೇರಿದಂತೆ ಎಸ್ಪಿ ಅಭಿನವ್ ಖರೆ ಯವರ ಜೊತೆಯಲ್ಲಿ ಕೆಲಸ ನಿರ್ವಹಿಸಿದ್ದರು.
ಭದ್ರಾವತಿ ಕ್ರೈಂ
ಇನ್ನೂ ಭದ್ರಾವತಿಯ ಅಕ್ರಮ ದಂಧೆಯನ್ನ ನಿಯಂತ್ರಿಸುವಲ್ಲಿ ಯಶಸ್ಸು ಸಾಧಿಸಿದ್ದ ತಿರುಮಲೇಶ್ ಕಳ್ಳರೆ ಖೆಡ್ಡಾ ತೋಡಿದ್ರು. ಕಳ್ಳನೊಬ್ಬ ತಾನು ಕದ್ದಿದ್ದು ಇಷ್ಟು , ಆದರೆ ತನಿಖಾಧಿಕಾರಿ ಕಡಿಮೆ ತೋರಿಸಿದ್ದಾರೆ ಎಂದು ಠಾಣೆಗೆ ದೂರು ಕೊಟ್ಟಿದ್ದ. ಆ ಸಂದರ್ಭದಲ್ಲಿ ತಿರುಮಲೇಶ್ ಸಸ್ಪೆಂಡ್ ಸಹ ಆಗಿದ್ದರು, ಆನಂತರ ನ್ಯಾಯಾಲಯ ಇವರನ್ನ ಖುಲಾಸೆಗೊಳಿಸಿತ್ತು. ಭದ್ರಾವತಿಯ ಪಾತಕ ಜಗತ್ತು ತಿರುಮಲೇಶ್ರನ್ನ ಹಣಿಯಲೆಂದೆ ಹಲವು ಕುತಂತ್ರಗಳನ್ನ ನಡೆಸಿ ಅವರನ್ನ ವರ್ಗಾವಣೆಗೊಳಿಸುವಲ್ಲಿ ಯಶಸ್ಸಾಗಿತ್ತು.
ಲೋಕಾಯುಕ್ತ ಡಿವೈಎಸ್ಪಿ
ಆನಂತರ ಎಲ್ ಆ್ಯಂಡ್ ಒ ದಿಂದ ದೂರವಾಗಿದ್ದ ತಿರುಮಲೇಶ್ ಬಳಿಕ ಡಿವೈಎಸ್ಪಿಯಾಗಿ ತರಿಕೆರೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅಲ್ಲಿಂದ ಲೋಕಾಯುಕ್ತ ಚಿಕ್ಕಮಗಳೂರು ಡಿವೈಎಸ್ಪಿ ಯಾಗಿ ಆಯ್ಕೆಯಾಗಿದ್ದರು. ಇದೀಗ ಶಿವಮೊಗ್ಗ ನಗರ ಉಪವಿಭಾಗದ ಡಿವೈಎಸ್ಪಿಯಾಗಿ ಬರುತ್ತಿದ್ದಾರೆ. ಅವರ ಅನುಭವ ಹಾಗೂ ಚಾಕಚಕ್ಯತೆ ಶಿವಮೊಗ್ಗ ನಗರ ಹಾಗೂ ಶಿವಮೊಗ್ಗ ಪೊಲೀಸ್ ಇಲಾಖೆಗೆ ಉಪಯುಕ್ತವಾಗಲಿ ಎಂದು ಮಲೆನಾಡು ಟುಡೆ ಹಾರೈಸುತ್ತದೆ.