ಆಯನೂರು ಮಂಜುನಾಥ್ ವಿರುದ್ಧ ಕೆರಳಿತೆ ಜಿಲ್ಲಾ ಕಾಂಗ್ರೆಸ್! Who is he...!

difference of opinion in the Shivamogga district Congress against Ayanur Manjunath Ayanur Manjunath, S.P. Dinesh, H.C. Yogesh, H.S. Sundaresh, Devendrappa,

ಆಯನೂರು ಮಂಜುನಾಥ್ ವಿರುದ್ಧ ಕೆರಳಿತೆ ಜಿಲ್ಲಾ ಕಾಂಗ್ರೆಸ್! Who is he...!
difference of opinion in the Shivamogga district Congress against Ayanur Manjunath Ayanur Manjunath,

SHIVAMOGGA  |  Jan 27, 2024  |  ಒಂದು ಕಡೆ ಶಿವಮೊಗ್ಗದಲ್ಲಿ ಮತ್ತೆ ಬಿವೈ ರಾಘವೇಂದ್ರವರನ್ನ ಗೆಲ್ಲಿಸಿ ಅಂತಾ ಕಾಂಗ್ರೆಸ್​ನ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪರವರೇ ಹೇಳಿದ್ದಾರೆ. ಅವರ ಹೇಳಿಕೆ ಪಕ್ಷವನ್ನೇ ಇರಿಸು ಮುರಿಸು ಮಾಡುತ್ತಿದೆಯಾದರೂ, ಅವರನ್ನ ವಿರೋಧಿಸುವ ಮಾತುಗಳು ಕಾಂಗ್ರೆಸ್​ನಲ್ಲಿ ಬರುತ್ತಿಲ್ಲ. ಬಹುಶಃ ಅದಕ್ಕೆ ಕಾರಣ ಕೂಡ ನಿಮಗೆ ತಿಳಿದಿರಬಹುದು. 

ಆಯನೂರು ಮಂಜುನಾಥ್

ಇದರ ನಡುವೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್​ನಲ್ಲಿ ಆಯನೂರು ಮಂಜುನಾಥ್ ವಿರುದ್ಧ ಆಕ್ರೋಶ, ಆಕ್ಷೇಪ ಮತ್ತು ವಿರೋಧಗಳು ತೀವ್ರಗೊಳ್ಳುತ್ತಿದೆ. ಬಿಜೆಪಿ ಬಿಟ್ಟು ಜೆಡಿಎಸ್​ಗೆ ಹೋಗಿ ಅಲ್ಲಿಂದ ಕಾಂಗ್ರೆಸ್​ ಗೆ ಬಂದ ಆಯನೂರು ಮಂಜುನಾಥ್ ರವರು ಇದು ತಮ್ಮ ಕೊನೆ ನಿಲ್ದಾಣ ಅಂತಾ ಈಗಾಗಲೇ ಘೋಷಿಸಿದ್ದಾರೆ. ಆದಾಗ್ಯು, ನೈರುತ್ಯ ಪದವೀಧರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಅವರು ಈಗಾಗಲೇ ಅದಕ್ಕಾಗಿ ಕಚೇರಿಯನ್ನು ಸಹ ಓಪನ್ ಮಾಡಿಕೊಂಡು ಓಡಾಡುತ್ತಿದ್ದಾರೆ. 

ಎಸ್​ಪಿ ದಿನೇಶ್​ ಮತ್ತು ಆಯನೂರು ಮಂಜುನಾಥ್ 

ಈ ಮಧ್ಯೆ ಕಾಂಗ್ರೆಸ್​ನಲ್ಲಿ ಟಿಕೆಟ್ ಆಕಾಂಕ್ಷಿಯಾಗಿರುವ ಎಸ್​ಪಿ ದಿನೇಶ್ ರವರು ಆಯನೂರು ಮಂಜುನಾಥ್​ರವರ ನಡೆಯನ್ನು ವಿರೋಧಿಸಿದ್ದಾರೆ. ಬಹಿರಂಗವಾಗಿಯೇ ಸುದ್ದಿಗೋಷ್ಟಿಯೊಂದರಲ್ಲಿ ಆಯನೂರು ಮಂಜುನಾಥ್​ರಿಗೆ ಗುರುಬಲ ಈಗಿಲ್ಲ ಎಂದಿದ್ದರು. ಸದಸ್ಯತ್ವ ಹೆಚ್ಚಿಸುತ್ತಿರುವ ಪ್ರಯತ್ನದಲ್ಲಿರುವ ಎಸ್​ಪಿ ದಿನೇಶ್​ ರವರು ಟಿಕೆಟ್ ತಮಗೆ ಸಿಗುತ್ತದೆ ಎಂದಿದ್ದರು. 

ಇದರ ಬೆನ್ನಲ್ಲೆ ಮತ್ತೆ ಸುದ್ದಿಗೋಷ್ಟಿ ನಡೆಸಿದ ಆಯನೂರು ಮಂಜುನಾಥ್​ರವರು ಗುರುಬಲಕ್ಕೆ ಕುರುಬಲ ಎಂತೇನೋ ವ್ಯಂಗ್ಯವಾಡಿದ್ದರು. ಈ ಮಧ್ಯೆ ಒಂದೆ ಪಾರ್ಟಿಯಲ್ಲಿ ಎಸ್​ಪಿ ದಿನೇಶ್ ಹಾಗೂ ಆಯನೂರು ಮಂಜುನಾಥ್​ ನಡುವೆ ಇದ್ದ ಟಿಕೆಟ್ ಸಮರ ಇತ್ತೀಚಿನ ಪ್ರೆಸ್ ಮೀಟ್​ನಲ್ಲಿಯೇ ಬೇರೆಯದ್ದೆ ಆಯಾಮ ಪಡೆದುಕೊಂಡಿತ್ತು. 

ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರಿದಾಗಿನಿಂದಲೂ ಅವರಿಗಲ್ಲಿ ತೀವ್ರ ವಿರೋಧವೇ ಇತ್ತು. ಪಕ್ಷದ ಕಚೇರಿಗೆ ಮೊದಲು ಭೇಟಿಕೊಟ್ಟ ಸಂದರ್ಭದಲ್ಲಿಯೇ ಇದು ಸಾಪ್ ಸಪಾಟಾಗಿ ಗೊತ್ತಾಗಿತ್ತು. ಅದಕ್ಕೂ ಮೊದಲು ಸುದ್ದಿಗೋಷ್ಟಿ ಮೂಲಕ ಸೀಜನ್​ಗೊಂದು ಪಕ್ಷ ಎಂಬಂತಹ ಸ್ವಾಗತಗಳು ಆಯನೂರು ಮಂಜುನಾಥ್​ರಿಗೆ ಸಿಕ್ಕಿತ್ತು. ವಿರೋಧಗಳ ನಡುವೆಯು ಪಕ್ಷದೊಳಕ್ಕೆ ಬಂದ ಹಿರಿಯ ಮುಖಂಡ  ಆಯನೂರು ಮಂಜುನಾಥ್ ಸಹ ತಮ್ಮನ್ನ ವಿರೋಧಿಸಿದವರ ವಿರುದ್ಧ ಮಾತಿನ ಬಾಣ ಬಿಡುತ್ತಲೇ ಇದ್ದಾರೆ. ಆಗಲೇ ಹೇಳಿದಾಗೆ, ಮೊನ್ನೆ ಮೊನ್ನೆಯ ಸುದ್ದಿಗೋಷ್ಟಿಯಲ್ಲಿ ಆಯನೂರು ಮಂಜುನಾಥ್​ರಿಂದ ಪ್ರಬಲ ವ್ಯಂಗ್ಯ ಮಾತಿನ ಬಾಣ ತೂರಿಬಂದಿತ್ತು. ಸದ್ಯ ಈ ಮಾತು ಕಾಂಗ್ರೆಸ್​ನಲ್ಲಿ ಕೆರಳುವಿಕೆಗೆ ಪ್ರಚೋದನೆ ನೀಡಿದೆ. 

ಹೆಚ್​.ಸಿ.ಯೋಗೇಶ್ 

ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಆಯನೂರು ಮಂಜುನಾಥ್​ರವರಿಗೆ ಪತ್ರಕರ್ತರೊಬ್ಬರು ಪ್ಲೆಕ್ಸ್​ವೊಂದರಲ್ಲಿ ಹೆಚ್​.ಸಿ ಯೋಗೇಶ್​ರವರ ಹೆಸರು ಇಲ್ಲವಲ್ಲ ಎಂದು ಪ್ರಶ್ನಿಸುತ್ತಾರೆ. ಆಗವರು ಹೂ ಇಸ್ ಹೀ ಅಂತಾ ಶುರು ಮಾಡಿ ಓ ಅವರಾ ಎನ್ನುತ್ತಾರೆ. ಇದೇ ಮಾತಿಗೆ ಕಾಂಗ್ರೆಸ್​ನಲ್ಲೀಗ ದೂರು ದುಮ್ಮಾನಗಳು ಜಿಲ್ಲಾ ಅಧ್ಯಕ್ಷರಿಗೆ ಸಲ್ಲಿಕೆಯಾಗುತ್ತಿದೆ. ನಿಗಮ ಮಂಡಳಿಯ ನಿರೀಕ್ಷೆಯಲ್ಲಿರುವ ಅಧ್ಯಕ್ಷರು ಬಿಡುವಿಲ್ಲದ ಚಟುವಟಿಕೆಯಲ್ಲಿದ್ದಾರೆ. ಅದರ ನಡುವೆಯು ಅವರಿಗೆ ದೂರು ಸಲ್ಲಿಸಿರುವ ಕೆಪಿಸಿಸಿ ಕಾರ್ಯಾದರ್ಶಿ ಕೆ.ದೇವೇಂದ್ರಪ್ಪ ಹೆಚ್​.ಸಿ ಯೋಗೇಶ್​ ಬಗ್ಗೆ ಆಡಿದ ಮಾತಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. 

ಜಿಲ್ಲಾಧ್ಯಕ್ಷರಿಗೆ ದೂರು

ಆಯನೂರು ಮಂಜುನಾಥ್ ಇನ್ನೂ ಬಿಜೆಪಿಯಲ್ಲಿದ್ದಾರೆ. ಬಿಎಸ್​ವೈ ಕುಟುಂಬಸ್ಥರನ್ನ ಟೀಕಿಸದ ಅವರು ಮೂಲ ಕಾಂಗ್ರೆಸ್​ನವರನ್ನ ಅವಮಾನಿಸ್ತಿದ್ದಾರೆ. ಅವರು ಕಳೆದ ಚುನಾವಣೆಯಲ್ಲಿ ಏಳು ಸಾವಿರ ಮತ ತೆಗೆದುಕೊಂಡಿದ್ದರು, ಹೆಚ್​.ಸಿ.ಯೋಗೇಶ್ 70 ಸಾವಿರ ಮತ ತೆಗೆದುಕೊಂಡಿದ್ದರು. ಅವರನ್ನೇ ಇವರು ಹೂ ಇಸ್ ಹೀ ಅಂತಾ ಪ್ರಶ್ನಿಸುತ್ತಾರೆ. ಪದೇಪದೇ ಸುದ್ದಿಗೋಷ್ಟಿ ಮಾಡುವುದು ಅವರಿಗೆ ಅಭ್ಯಾಸ ಆಗಿಬಿಟ್ಟಿದೆ ಎಂದು ದೂರಲಾಗಿದೆ. ವಿಷಯ ಸೀರಿಯಸ್ ಆಗತ್ತಿದೆಯಾದರೂ ಈ ಬಗ್ಗೆ ದೊಡ್ಡ ದೊಡ್ಡ ನಾಯಕರು ತಲೆಕೆಡಿಸಿಕೊಂಡಂತಿಲ್ಲ. ಶಿವಮೊಗ್ಗಕ್ಕೆ ಸೀಮಿತವಾಗಿ ನಡೆಯುತ್ತಿರುವ ಭಿನ್ನ ಬೆಂಕಿ ಮುಂದಿನ ಚುನಾವಣೆಗಳ ಮೇಲೆ ಪರಿಣಾಮ ಬೀರಿದರೂ ಅಚ್ಚರಿಯಿಲ್ಲ.