Daily Horoscope Kannada ಮಲೆನಾಡು ಟುಡೆ ಸುದ್ದಿ / ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸದ ಬಹುಳ ದಶಮಿ ತಿಥಿಯು ಬೆಳಗ್ಗೆ 11.48ರವರೆಗೆ ಇರಲಿದ್ದು, ನಂತರ ಏಕಾದಶಿ ಆರಂಭವಾಗಲಿದೆ. ಜ್ಯೇಷ್ಠ ನಕ್ಷತ್ರ ಮಧ್ಯಾಹ್ನ 1.29ರವರೆಗೆ ಇದ್ದು, ನಂತರ ಮೂಲ ನಕ್ಷತ್ರವಿರುತ್ತದೆ. ರಾಹುಕಾಲ ಮಧ್ಯಾಹ್ನ 1.30ರಿಂದ 3.00ರವರೆಗೆ ಹಾಗೂ ಯಮಗಂಡ ಕಾಲ ಬೆಳಗ್ಗೆ 6.00ರಿಂದ 7.30ರವರೆಗೆ ಇರಲಿದೆ.

ಬೆಟ್ಟೆ, ಚಾಲಿ, ರಾಶಿ , ಇವತ್ತಿನ ಅಡಿಕೆ ರೇಟು ! ಶಿವಮೊಗ್ಗ, ಕೊಪ್ಪ, ಸಿರಸಿ, ತುಮಕೂರು ಮಾರ್ಕೆಟ್ ನಲ್ಲಿ ಅಡಕೆ ದರ
ಇವತ್ತಿನ ರಾಶಿಫಲ
ಮೇಷ / ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆಯಿದ್ದು, ಆರ್ಥಿಕ ವ್ಯವಹಾರ ಕೊಂಚ ಮಂದಗತಿಯಲ್ಲಿ ಸಾಗಲಿವೆ. ಹಠಾತ್ ಪ್ರಯಾಣ, ದೇವಾಲಯಗಳಿಗೆ ಭೇಟಿ.ಉದ್ಯೋಗ ಮತ್ತು ವ್ಯಾಪಾರ ಸಾಧಾರಣವಾಗಿ ನಡೆಯಲಿವೆ.
ವೃಷಭ/ ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಂಭವ. ದೂರ ಪ್ರಯಾಣ ಮತ್ತು ಕುಟುಂಬದಲ್ಲಿ ಕೆಲವು ಸಮಸ್ಯೆ ತಲೆದೋರಬಹುದು. ದೈವ ದರ್ಶನ. ಅನಾರೋಗ್ಯ, ಕೆಲಸ ಅಂದುಕೊಂಡಂತೆ ಮುಂದೆ ಸಾಗುವುದಿಲ್ಲ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಏರಿಳಿತ ಕಂಡುಬರಲಿವೆ.
ಮಿಥುನ / ಶುಭದಿನ, ಗಣ್ಯ ವ್ಯಕ್ತಿಗಳಿಂದ ಆಹ್ವಾನ ಬರುತ್ತವೆ. ಅಂದುಕೊಂಡ ಕೆಲಸ ಅನಾಯಾಸವಾಗಿ ನೆರವೇರುತ್ತವೆ, ವ್ಯಾಪಾರದಲ್ಲಿ ವೃದ್ಧಿಯಾಗಲಿದೆ. ಉದ್ಯೋಗಿಗಳಿಗೆ ಬಡ್ತಿ

ಕರ್ಕಾಟಕ / ಉದ್ಯೋಗದಲ್ಲಿ ಉತ್ತಮ ಅವಕಾಶ. ಮನೆಯಲ್ಲಿ ಈ ದಿನ ಅನುಕೂಲಕರವಾಗಿರುತ್ತದೆ. ಹೊಸ ವ್ಯಕ್ತಿಗಳ ಪರಿಚಯ, ಶುಭ ಸುದ್ದಿ ಕೇಳುವಿರಿ. ಉದ್ಯೋಗ ಮತ್ತು ವ್ಯಾಪಾರ ಯಾವುದೇ ಅಡೆತಡೆ ಇಲ್ಲದೆ ಸರಾಗವಾಗಿ ಸಾಗಲಿವೆ.
ಸಿಂಹ / ಆಸ್ತಿ ಸಂಬಂಧಿತ ವಿವಾದ. ಮನಸ್ಸಿನ ಆಲೋಚನೆಗಳು ಸ್ಥಿರವಾಗಿರುವುದಿಲ್ಲ. ಸಹೋದರ ಮತ್ತು ಸಹೋದರಿಯರೊಂದಿಗೆ ಮನಸ್ತಾಪ. ಕೆಲಸಗಳಲ್ಲಿ ಸಣ್ಣಪುಟ್ಟ ಅಡೆತಡೆ ಎದುರಾಗಲಿದ್ದು, ಉದ್ಯೋಗ ಮತ್ತು ವ್ಯಾಪಾರ ಸಾಮಾನ್ಯವಾಗಿರಲಿದೆ.
ಕನ್ಯಾ/ ಹಠಾತ್ ಪ್ರಯಾಣ. ಕೈಗೊಂಡ ಕೆಲಸಗಳಲ್ಲಿ ವಿಘ್ನ. ಕುಟುಂಬದ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ. ದೈವ ದರ್ಶನ ಮತ್ತು ಆಧ್ಯಾತ್ಮಿಕ ಚಿಂತನೆಯಲ್ಲಿ ಮನಸ್ಸು ನೆಮ್ಮದಿ ಕಾಣಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಉದ್ಯೋಗ ಮತ್ತು ವ್ಯಾಪಾರದಲ್ಲಿ ಕಿರಿಕಿರಿ.
ತುಲಾ/ ಹೊಸಬರ ಪರಿಚಯ, ಸಂತಸ ತರಲಿದೆ. ಶುಭ ಸುದ್ದಿಗಳನ್ನು ಕೇಳುವಿರಿ ಮತ್ತು ವಾಹನ ಯೋಗ ಕೂಡ ಇದೆ. ನೀವು ಕೈಗೆತ್ತಿಕೊಂಡ ಕಾರ್ಯಕ್ರಮಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಹಳೆಯ ಘಟನೆಗಳು ನೆನಪಾಗಬಹುದು. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಇದ್ದ ಒತ್ತಡಗಳು ನಿವಾರಣೆಯಾಗಲಿವೆ.
ವೃಶ್ಚಿಕ / ನಿಗದಿತ ಕಾರ್ಯಕ್ರಮಗಳನ್ನು ಮುಂದೂಡುವ ಸಾಧ್ಯತೆ ಇದೆ. ಆಲೋಚನೆಗಳೇ ಕಿರಿಕಿರಿ. ಪ್ರಯತ್ನಿಸಿದ ಕಾರ್ಯಗಳಲ್ಲಿ ಸಿದ್ಧಿ. ದೈವ ಚಿಂತನೆ. ಕುಟುಂಬದಲ್ಲಿ ಸಣ್ಣಪುಟ್ಟ ಕಿರಿಕಿರಿ ಮತ್ತು ಆರೋಗ್ಯದಲ್ಲಿ ವ್ಯತ್ಯಯ. ಉದ್ಯೋಗ ಮತ್ತು ವ್ಯಾಪಾರಗಳಲ್ಲಿ ಒತ್ತಡದ ಅನುಭವ .
ಶಿವಮೊಗ್ಗ ಜಿಲ್ಲೆಯ ಪ್ರಧಾನ ಜಿಲ್ಲಾ ನ್ಯಾಯಾಧೀಶ ಮಂಜುನಾಥ ನಾಯಕ್ ಬೆಳಗಾವಿಗೆ ವರ್ಗಾವಣೆ
ಧನು/ ಕೆಲಸದಲ್ಲಿ ಜಯ ಸಿಗಲಿದೆ. ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಒಪ್ಪಂದ. ವಸ್ತು ಲಾಭ, ಉದ್ಯೋಗ ಮತ್ತು ವ್ಯಾಪಾರ ಅನುಕೂಲಕರವಾಗಿರಲಿವೆ.
ಮಕರ / ಆದಾಯಕ್ಕೆ ಮೀರಿ ಖರ್ಚು. ಕುಟುಂಬ ಸದಸ್ಯರೊಂದಿಗೆ ಮನಸ್ತಾಪ ,ಮಾನಸಿಕ ಶಾಂತಿ ಕೆಡಬಹುದು. ಆರ್ಥಿಕವಾಗಿ ಸಂಕಷ್ಟ , ಉದ್ಯೋಗ ಮತ್ತು ವ್ಯಾಪಾರ ಮಂದಗತಿಯಲ್ಲಿ ಸಾಗಲಿದ್ದು, ತಾಳ್ಮೆ ಅತ್ಯಗತ್ಯ.
ಕುಂಭ / ದೂರದ ಬಂಧುಗಳ ಭೇಟಿ. ಕೆಲಸಗಳಲ್ಲಿ ಇದ್ದ ಅಡೆತಡೆ ನಿವಾರಣೆಯಾಗುತ್ತವೆ. ಪುಣ್ಯಕ್ಷೇತ್ರಗಳಿಗೆ ಭೇಟಿ. ಉದ್ಯೋಗ ಮತ್ತು ವ್ಯಾಪಾರ ರಂಗದಲ್ಲಿ ಪ್ರೋತ್ಸಾಹದಾಯಕ ವಾತಾವರಣ ಇರಲಿದೆ.
ಮೀನ / ಪರಿಸ್ಥಿತಿಗಳು ಸಂಪೂರ್ಣವಾಗಿ ಅನುಕೂಲಕರವಾಗಿವೆ. ಸಮಾಜದಲ್ಲಿ ಗೌರವ ಹೆಚ್ಚಲಿದೆ. ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಮೂಡಲಿದೆ. ಆಸ್ತಿ ವಿಷಯದಲ್ಲಿ ಅಗ್ರಿಮೆಂಟ್ ಆಗಲಿದೆ. ವಸ್ತು ಮತ್ತು ವಸ್ತ್ರ ಲಾಭ, ಉದ್ಯೋಗ ಹಾಗೂ ವ್ಯಾಪಾರಗಳಲ್ಲಿ ಉತ್ಸಾಹದ ವಾತಾವರಣ.
ಮನೆಯೆದುರು ಮಹಿಳೆಗೆ ಉಪಟಳ; ಥಟ್ ಅಂತಾ ಪ್ರತ್ಯಕ್ಷವಾದ ಅಕ್ಕ ಪಡೆ !ಶಿವಮೊಗ್ಗದಲ್ಲಿ ನಡೆದ ಘಟನೆ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
Daily Horoscope Kannada: Today’s Rashi Bhavishya 12-02-2026 – Malenadu Today , ಇಂದಿನ ಪಂಚಾಂಗ: ವಾಹನ ಯೋಗ, ನಿಮ್ಮ ಅದೃಷ್ಟ ಹೇಗಿದೆ? ಕಾರ್ಯ ಜಯ ಯಾರಿಗೆ?

