ಲಾರಿ ಮತ್ತು ಸರ್ಕಾರಿ ಬಸ್ ನಡುವೆ ಅಪಘಾತ! ಬೆಂಗಳೂರಿನಿಂದ ಹುಂಚಕ್ಕೆ ಬರುತ್ತಿದ್ದಾಗ ಘಟನೆ

Malenadu Today

SHIVAMOGGA |  Dec 11, 2023 | ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ನಲ್ಲಿ ಅಪಘಾತವೊಂದು ಸಂಭವಿಸಿದೆ. ಘಟನೆಯಲ್ಲಿ ಸರ್ಕಾರಿ ಬಸ್​ ಹಾಗೂ ಲಾರಿ ನಡುವೆ ಡಿಕ್ಕಿಯಾಗಿದೆ. ಇವತ್ತು ಬೆಳಗ್ಗೆ ಈ ಗಠನೆ ನಡೆದಿದೆ. 

ತೀರ್ಥಹಳ್ಳಿ ತಾಲ್ಲೂಕು

ಇಲ್ಲಿನ ಆರಗ ಸರ್ಕಲ್​ನಲ್ಲಿ ಘಟನೆ ಸಂಭವಿಸಿದ್ದು ಕೆಎಸ್​​ಆರ್​ಟಿಸಿ ಬಸ್​ ಹಾಗೂ ಹತ್ತು ಚಕ್ರದ ಲಾರಿಯ ಎದುರುಬದುರಾಗಿ ಒಂದು ಸೈಡ್​ಗೆ ಡಿಕ್ಕಿಯಾಗಿವೆ.

READ : ಭದ್ರಾವತಿ ಬಡಿದಾಟಕ್ಕೆ ಕಾರಣವೇನು? ಬಿಜೆಪಿ , ಕಾಂಗ್ರೆಸ್​ , ಗೋಕುಲ, ಕೆಂಚನಳ್ಳಿ, ಪೊಲೀಸು, ಇಸ್ಪೀಟು ಮತ್ತು ನಾ ನಿನ್ನ ಬಿಡಲಾರೆ! ಏನಿದೆಲ್ಲಾ Exclusive

ಕೆಎಸ್​ಆರ್​ಟಿಸಿ ಬಸ್ 

ಬೆಂಗಳೂರು ಬಸ್​ ತೀರ್ಥಹಳ್ಳಿ ಮೂಲಕ ಹುಂಚಕ್ಕೆ ಹೋಗುತ್ತಿತ್ತು. ಈ ವೇಳೆ ಘಟನೆ ಸಂಭವಿಸಿದೆ. ಅತ್ತ ಲಾರಿಯ ಮೂಲ ಸ್ಪಷ್ಟವಾಗಿಲ್ಲ. ಅಪಘಾತದಲ್ಲಿ ಬಸ್​ನ ಒಂದು ಬಾಗ ಜಖಂಗೊಂಡಿದೆ. ಲಾರಿಯ ಬಾಡಿ ಸಹ ಡ್ಯಾಮೇಜ್ ಆಗಿದೆ. ದಟ್ಟ ಮಂಜಿನ ಕಾರಣಕ್ಕೆ ಎದುರಿನ ದಾರಿ ಸ್ಪಷ್ಟವಾಗದೇ ಈ ಘಟನೆ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ. ಅದೃಷ್ಟಕ್ಕೆ ಇಲ್ಲಿ ಯಾರಿಗೂ ಏನೂ ಸಹ ಆಗಿಲ್ಲ. 


 

Share This Article