SHIVAMOGGA | Dec 11, 2023 | ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ನಲ್ಲಿ ಅಪಘಾತವೊಂದು ಸಂಭವಿಸಿದೆ. ಘಟನೆಯಲ್ಲಿ ಸರ್ಕಾರಿ ಬಸ್ ಹಾಗೂ ಲಾರಿ ನಡುವೆ ಡಿಕ್ಕಿಯಾಗಿದೆ. ಇವತ್ತು ಬೆಳಗ್ಗೆ ಈ ಗಠನೆ ನಡೆದಿದೆ.
ತೀರ್ಥಹಳ್ಳಿ ತಾಲ್ಲೂಕು
ಇಲ್ಲಿನ ಆರಗ ಸರ್ಕಲ್ನಲ್ಲಿ ಘಟನೆ ಸಂಭವಿಸಿದ್ದು ಕೆಎಸ್ಆರ್ಟಿಸಿ ಬಸ್ ಹಾಗೂ ಹತ್ತು ಚಕ್ರದ ಲಾರಿಯ ಎದುರುಬದುರಾಗಿ ಒಂದು ಸೈಡ್ಗೆ ಡಿಕ್ಕಿಯಾಗಿವೆ.
ಕೆಎಸ್ಆರ್ಟಿಸಿ ಬಸ್
ಬೆಂಗಳೂರು ಬಸ್ ತೀರ್ಥಹಳ್ಳಿ ಮೂಲಕ ಹುಂಚಕ್ಕೆ ಹೋಗುತ್ತಿತ್ತು. ಈ ವೇಳೆ ಘಟನೆ ಸಂಭವಿಸಿದೆ. ಅತ್ತ ಲಾರಿಯ ಮೂಲ ಸ್ಪಷ್ಟವಾಗಿಲ್ಲ. ಅಪಘಾತದಲ್ಲಿ ಬಸ್ನ ಒಂದು ಬಾಗ ಜಖಂಗೊಂಡಿದೆ. ಲಾರಿಯ ಬಾಡಿ ಸಹ ಡ್ಯಾಮೇಜ್ ಆಗಿದೆ. ದಟ್ಟ ಮಂಜಿನ ಕಾರಣಕ್ಕೆ ಎದುರಿನ ದಾರಿ ಸ್ಪಷ್ಟವಾಗದೇ ಈ ಘಟನೆ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ. ಅದೃಷ್ಟಕ್ಕೆ ಇಲ್ಲಿ ಯಾರಿಗೂ ಏನೂ ಸಹ ಆಗಿಲ್ಲ.
