BREAKING NEWS/ ಶಿವಮೊಗ್ಗ-ಬೆಂಗಳೂರು ವಿಮಾನ ಹಾರಾಟದ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರರ ಮಹತ್ವದ ಹೇಳಿಕೆ!
Breaking NEWS/ Shimoga-Bengaluru flight: Mp B.Y. Raghavendra's statement
KARNATAKA NEWS/ ONLINE / Malenadu today/ Apr 27, 2023 GOOGLE NEWS
ಶಿವಮೊಗ್ಗ/ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನಗಳು ಯಾವಾಗ ಹಾರಾಟ ಆರಂಭಿಸುತ್ತವೆ. ಏರ್ಪೋರ್ಟ್ ಉದ್ಘಾಟನೆಯಾಗಿ 2 ತಿಂಗಳೇ ಕಳದರೂ ಈ ಪ್ರಶ್ನೆಗೆ ಇಲ್ಲಿವರೆಗೂ ಉತ್ತರ ಸಿಕ್ಕಿರಲಿಲ್ಲ. ಇದೀಗ ಈ ಸಂಬಂಧ ಮತ್ತೆ ಸಂಸದ ಬಿ.ವೈ ರಾಘವೇಂದ್ರ ಕೆಲವೊಂದು ಮಾಹಿತಿ ನೀಡಿದ್ದಾರೆ.
ಇದನ್ನು ಕೂಡ ಓದಿ- ಶಿವಮೊಗ್ಗದಲ್ಲಿ ಬಸ್ ಹತ್ತಿದ ಎಸ್ಪಿ ಮಿಥುನ್ ಕುಮಾರ್, ಡಿಸಿ ಡಾ.ಆರ್ ಸೆಲ್ವಮಣಿ! ವಿವರ ಇಲ್ಲಿದೆ
ಸಂಸದರು ಹೇಳಿದ್ದೇನು?
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಒಂದು ತಿಂಗಳ ಹಿಂದೆ ಇನ್ನೊಂದು ವಾರದಲ್ಲಿ ವಿಮಾನ ಹಾರಾಟ ಆಗುತ್ತೆ ಎಂದು ಹೇಳಿದ್ದೆ. ಆ ಸಂದರ್ಭದಲ್ಲಿ ಒಂದು ವಾರದ ಪ್ರಕ್ರಿಯೆಗಳು ಮಾತ್ರ ಬಾಕಿ ಇದ್ದವು.
ಆನಂತರ ನಾವಿನ್ನೂ ಒಂದು ಹಂತ ಮುಂದಕ್ಕೆ ಹೋಗಿದ್ದೇವೆ. ಬಿಫೋರ್ ಎಲೆಕ್ಷನ್ ಅಗುತ್ತೆ ಎಂದುಕೊಂಡಿದ್ದೇವೆ. ಆದರೆ ಕೋಡ್ ಆಫ್ ಕಂಡಕ್ಟ್ನಿಂದ ಮುಂದಕ್ಕೆ ಹೋಗುತ್ತೋ ಏನೋ ಗೊತ್ತಿಲ್ಲ. ನಮ್ಮ ಕಡೆಯಿಂದ ಏನು ಪ್ರಕ್ರಿಯೆಗಳು ಆಗಬೇಕಿತ್ತೋ ಅದೆಲ್ಲವೂ ಮುಗಿದಿದೆ ಎಂದಿದ್ದಾರೆ.
ಓದಿ / ಶಿವಮೊಗ್ಗದಲ್ಲಿ ಬಸ್ ಹತ್ತಿದ ಎಸ್ಪಿ ಮಿಥುನ್ ಕುಮಾರ್, ಡಿಸಿ ಡಾ.ಆರ್ ಸೆಲ್ವಮಣಿ! ವಿವರ ಇಲ್ಲಿದೆ
ಎಲ್ಲಾ ಓಕೆ..ಓಕೆ…ಓಕೆ
ದುಬೈನಿಂದ ಒಂದಕ್ಕೆ 12 ಕೋಟಿ ರೂಪಾಯಿಯಂತೆ ಮೂರು ಫೈರ್ ಇಂಜಿನ್ ಬರಬೇಕಿತ್ತು. ಅದು ಸದ್ಯದಲ್ಲಿಯೇ ಶಿವಮೊಗ್ಗ ಏರ್ಪೋರ್ಟ್ಗೆ ರೀಚ್ ಆಗುತ್ತಿದೆ. ಇಂಡಿಗೋ ಟೀಂ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದು ಇನ್ಸ್ಪೆಕ್ಷನ್ ಮಾಡಿದ್ದಾರೆ. ಅಲ್ಲದೆ ಡಿಜಿಸಿಎ ಜೊತೆಗೆ ಈ ಸಂಬಂಧ ಒಪ್ಪಂದ ಕೂಡ ಮಾಡಿಕೊಳ್ಳಲಾಗಿದೆ.
ಶಿವಮೊಗ್ಗ-ಬೆಂಗಳೂರು ವೇಳಾಪಟ್ಟಿಗೆ ಕಾಯುತ್ತಿದ್ದೇವೆ
ಶಿವಮೊಗ್ಗ-ಬೆಂಗಳೂರು ನಡುವೆ ಹಾರಾಟಕ್ಕೆ ಸಂಬಂಧಿಸಿದಂತೆ ಅಗ್ರಿಮೆಂಟ್ ಆಗಿದೆ. ಸರ್ಕಾರದಿಂದ 2 ಕೋಟಿ ಸಬ್ಸಿಡಿಯನ್ನು ಪ್ರತಿಯೊಂದು ಟಿಕೆಟ್ಗೆ 500 ರೂಪಾಯಿ ನೀಡಲಾಗ್ತಿದೆ. ಪ್ರತಿದಿನಕ್ಕೆ ಇದರ ಮೊತ್ತ 73 ಸಾವಿರ ರೂಪಾಯಿ ಆಗುತ್ತದೆ. ನಾವು ಕೂಡ ಕಾಯುತ್ತಿದ್ದೇವೆ ಡಿಜಿಸಿಎಯವರು ಅಧಿಕೃತವಾಗಿ ವೇಳಾಪಟ್ಟಿ ಬಿಡುಗಡೆಯಾಗಲಿ ಎಂದು ಕಾಯುತ್ತಿದ್ದೇವೆ.
ಇದನ್ನು ಕೂಡ ಓದಿ- ಶಿವಮೊಗ್ಗದಲ್ಲಿ ಬಸ್ ಹತ್ತಿದ ಎಸ್ಪಿ ಮಿಥುನ್ ಕುಮಾರ್, ಡಿಸಿ ಡಾ.ಆರ್ ಸೆಲ್ವಮಣಿ! ವಿವರ ಇಲ್ಲಿದೆ
ರಾಷ್ಟ್ರೀಯ ಪಕ್ಷಗಳಿಗೆ ಅನುಕೂಲ
ಏರ್ಪೋರ್ಟ್ನಿಂದ ವಿಮಾನ ಹಾರಾಟದಿಂದ ಯಾರಿಗೆ ಅನುಕೂಲವಾಗುತ್ತೋ ಗೊತ್ತಿಲ್ಲ. ಆದರೆ ರಾಷ್ಟ್ರೀಯ ಪಕ್ಷಗಳು ರಾಷ್ಟ್ರೀಯ ನಾಯಕರು ಚುನಾವಣಾ ಪ್ರಚಾರಕ್ಕೆ ಬರಲು ಮಾತ್ರ ಅನುಕೂಲವಾಗುತ್ತಿದೆ ಎಂದು ಹಾಸ್ಯ ಮಾಡಿ ಸಂಸದ ರಾಘವೇಂದ್ರರವರು ನಕ್ಕರು
Malenadutoday.com Social media