ಸಿಗರೇಟಿನ ದುಡ್ಡು ಕೇಳಿದ್ದಕ್ಕೆ ಬೇಕರಿ ಹುಡುಗರಿಗೆ ಹಲ್ಲೆ/ ಭುಗಿಲೆದ್ದ ಆಕ್ರೋಶ/ ವೈರಲ್ ಆದ ವಿಡಿಯೋ
ಸಿಗರೇಟಿನ ದುಡ್ಡು ಕೇಳಿದ್ದಕ್ಕೆ ಊರು ಬಿಟ್ಟು ಬಂದು ಬೇಕರಿ ನಡೆಸ್ತಿರೋರು ನಮಗೆ ಸಿಗರೇಟ್ ಕೊಡಲ್ವಾ ಎಂದು ಹಲ್ಲೆ ಮಾಡಿದ ಘಟನೆಯ ದೃಶ್ಯ ವೈರಲ್ ಆಗಿದೆ. ಈ ದೃಶ್ಯ ಇದೀಗ ರಾಜ್ಯದಲ್ಲಿ ಆಕ್ರೋಶ ಹುಟ್ಟುಹಾಕಿದೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಸಿ ಟಿವಿ ಪೂಟೇಜ್ವೊಂದು ಸಾಕಷ್ಟು ವೈರಲ್ ಆಗಿದೆ. ಅಲ್ಲದೆ ವಿಡಿಯೋ ನೋಡಿದವರು ಸಹ ನಾನಾ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯಾವುದೇ ಕಾರಣವಿಲ್ಲದೆ, ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಹುಡುಗರ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ ಘಟನೆಯ ದೃಶ್ಯವದು.
ಇದನ್ನು ಸಹ ಓದಿ : ಪತಿ ಎದುರೇ ನಡೀತು ಪತ್ನಿಯ ಕಿಡ್ನ್ಯಾಪ್/ ಇಟ್ಟುಕೊಂಡವನೇ ಮಾಡಿದ್ದ ಅಪಹರಣ/ ಸ್ಟೇಷನ್ ಮಟ್ಟಿಲೇರಿತು ಇಬ್ಬರು ಪುರುಷರ ಜೊತೆಗಿನ ಸಂಸಾರ ಕದನ
ಎಲ್ಲಿ ನಡೆದಿದ್ದು? ಏನ್ ಕಥೆ
ಅಂದಹಾಗೆ ಸದ್ಯ ಆಕ್ರೋಶಕ್ಕೆ ಗುರಿಯಾಗಿರುವ ವೈರಲ್ ವಿಡಿಯೋ ಬೆಂಗಳೂರಿನ ಕುಂದೇನಹಳ್ಳಿಯಲ್ಲಿ ನಡೆದಿದ್ದು ಎನ್ನಲಾಗಿದೆ. ಈ ಸಂಬಂಧ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ. ಅಲ್ಲದೆ ಬೇಕರಿ ಮಾಲೀಕರು ಸಹ ಸ್ಟೇಷನ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಇದನ್ನ ಸಹ ಓದಿ : ನಿಮಗಿದು ಗೊತ್ತಾ | ಜಸ್ಟ್ ಎರಡುವರೆ ತಿಂಗಳಿನಲ್ಲಿ ₹18 ಸಾವಿರ ಕುಸಿತ ಕಂಡಿದೆ ಅಡಿಕೆ ಧಾರಣೆ
ಕಳೆದ ಡಿಸೆಂಬರ್ 8 ರಂದು ನಡೆದ ಘಟನೆ ಇದಾಗಿದೆ. ಇಲ್ಲಿನ ಬೇಕರಿಯೊಂದರಲ್ಲಿ ಕೆಲಸ ಮಾಡ್ತಿದ್ದ ಹುಡುಗರಿಗೆ , ಅಲ್ಲಿಗೆ ಬಂದಿದ್ದ ದುಷ್ಕರ್ಮಿಗಳು ಸಿಗರೇಟು ಕೇಳಿದ್ದಾರೆ. ಸಿಗರೇಟು ಪಡೆದುಕೊಂಡು ಹಾಗೆ ಹೊರಟಿದ್ದಾರೆ. ಈ ವೇಳೆ ದುಡ್ಡು ಕೇಳಿದ್ದಕ್ಕೆ ಊರು ಬಿಟ್ಟು ಊರಿಗೆ ಬಂದು ಬೇಕರಿ ನಡೆಸ್ತಿದ್ದೀರೀ, ನಮಗೆ ಸಿಗರೇಟ್ ಕೊಡಲ್ವಾ ಎಂದು ಗುಂಪು ಗೂಡಿ, ಕೆಲಸಗಾರರಿಗೆ ಹೊಡೆದಿದ್ಧಾರೆ.
ಇದನ್ನು ಸಹ ಓದಿ : ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಇನ್ನೊಂದು ದೊಡ್ಡ ಅವಕಾಶ
ಮನಸ್ಸೋ ಇಚ್ಚೆ ಥಳಿಸಿದ್ದರಿಂದ ಬಡಪಾಯಿ ಕಾರ್ಮಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಕರಾವಳಿಯ ಹುಡುಗರ ಮೇಲಿನ ಈ ಹಲ್ಲೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ ಈ ಸಂಬಂಧ ಪ್ರತಿಭಟನೆಗಳು ಸಹ ನಡೆಯುತ್ತಿದೆ. ಪೊಲೀಸ್ ಇಲಾಖೆ ಆರೋಪಿಗಳನ್ನು ವಶಕ್ಕೆ ಪಡೆದಿಲ್ಲ ಎಂಬ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರ ವಿರುದ್ಧ ಆಕ್ರೋಶ ಹೊರಬೀಳ್ತಿದೆ.
ಈ ಮಧ್ಯೆ ಪೊಲೀಸರು ಹಲ್ಲೆ ಮಾಡಿದ ಪುಡಿರೌಡಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಆರೋಪಿಗಳು ದೋಚಿದ್ದ ಚಿನ್ನ ಹಾಗೂ ಹಣವನ್ನು ಸಹ ವಶಕ್ಕೆ ಪಡೆದಿದ್ಧಾರೆ.
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link
Innocent bakery boys brutally attacked by rowdies near Kundanahalli Gate HAL in Bengaluru, Such incidents are increasing day by day in Bengaluru. / ಬೆಂಗಳೂರಿನಲ್ಲಿ ಬೇಕರಿ ಹುಡುಗರ ಮೇಲೆ ನಡೆದ ಹಲ್ಲೆಯ ದೃಶ್ಯ/ ಅಮಾಯಕರ ಮೇಲೆಗೆ ಹಲ್ಲೆಗೆ ಖಂಡನೆ/#Bangalore pic.twitter.com/iXp4T5m4IY — malenadutoday.com (@CMalenadutoday) December 10, 2022