ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ, ತಾಳಗುಪ್ಪ -ಮೈಸೂರು ಎಕ್ಸ್ಪ್ರೆಸ್ ರೈಲು ಹತ್ತುವಾಗ, ಕಾಲು ಜಾರಿ ಬಿದ್ದ ಪ್ರಯಾಣಿಕ
ಜನರು ಹಾಗೂ ರೈಲ್ವೆ ಪೊಲೀಸರು ತಕ್ಷಣ ಓಡಿ ಬಂದಿದ್ದಾರೆ. ಅಲ್ಲದೆ ಕೆಳಕ್ಕೆ ಬಿದ್ದಿದ್ದ ಪ್ರಯಾಣಿಕನನ್ನ ರಕ್ಷಿಸಿ, ಆತನಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಬಳಿಕ ಅವರನ್ನ ರೈಲಿನಲ್ಲಿ ಕಳುಹಿಸಿಕೊಟ್ಟಿದ್ಧಾರೆ.
ಶಿವಮೊಗ್ಗ ರೈಲು ನಿಲ್ದಾಣದಲ್ಲಿ ನಿನ್ನೆ ಒಂದು ಘಟನೆ ಸಂಭವಿಸಿದೆ. ತಾಳಗುಪ್ಪ-ಮೈಸೂರು ಎಕ್ಸ್ಪ್ರೆಸ್ ರೈಲು (Train No. 16221 Ex:TLGP-MYS Express) ಹತ್ತುವ ಸಂದರ್ಭದಲ್ಲಿ ಪ್ರಯಾಣಿಕರೊಬ್ಬರು ಕಾಲು ಜಾರಿ ಬಿದ್ದಿದ್ದಾರೆ.
ಇದನ್ನು ಸಹ ಓದಿ : ಶಿವಮೊಗ್ಗದಲ್ಲಿ ದಾವಣಗೆರೆಯ ಮೂಲದ ಮೂವರು ವಿದ್ಯಾರ್ಥಿಗಳ ದುರ್ಮರಣ | ಘಟನೆಗೆ ಕಾರಣವೇನು?
ಅದೃಷ್ಟಕ್ಕೆ ಇದನ್ನ ನೋಡಿದ ಮಂಜುನಾಥ್ ಎಂಬವರು ತಕ್ಷಣ ಅವರ ಸಹಾಯಕ್ಕೆ ಮುಂದಾಗಿದ್ದಾರೆ. ಈ ವೇಳೆ ಸುತ್ತಮುತ್ತಲಿದ್ದ ಜನರು ಹಾಗೂ ರೈಲ್ವೆ ಪೊಲೀಸರು ತಕ್ಷಣ ಓಡಿ ಬಂದಿದ್ದಾರೆ. ಅಲ್ಲದೆ ಕೆಳಕ್ಕೆ ಬಿದ್ದಿದ್ದ ಪ್ರಯಾಣಿಕನನ್ನ ರಕ್ಷಿಸಿ, ಆತನಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಬಳಿಕ ಅವರನ್ನ ರೈಲಿನಲ್ಲಿ ಕಳುಹಿಸಿಕೊಟ್ಟಿದ್ಧಾರೆ.
ಇದನ್ನು ಸಹ ಓದಿ : SHIMOGA BREAKING | ಕಲ್ಲಾಪುರದಲ್ಲಿ ಭೀಕರ ಆಕ್ಸಿಡೆಂಟ್’ | ಸ್ಥಳದಲ್ಲಿಯೇ ಮೂವರ ದುರ್ಮರಣ
ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ರೈಲ್ವೆ ಪೊಲೀಸ್ ಮೈಸೂರು ವಿಭಾಗದ ಟ್ವಿಟ್ಟರ್ನಲ್ಲಿ (RPF MYSURU DIV@rpfswrmys) ವಿಡಿಯೋವನ್ನು ಹಾಕಲಾಗಿದೆ. ರೈಲನ್ನು ಹತ್ತುವಾಗ ಅದು ಹೊರಡುವರೆಗೂ ಕಾಯದೇ ಮೊದಲೆ ಹತ್ತುವುದು ಕ್ಷೇಮ. ಈ ನಿಟ್ಟಿನಲ್ಲಿ ಎಲ್ಲಾ ಪ್ರಯಾಣಿಕರು ಮುನ್ನೆಚ್ಚರಿಕೆಯನ್ನು ವಹಿಸಬೇಕಿದೆ.
#Mission Jeevan Raksha: Mysuru, Sri N Manjunatha Con/Shivamogga Town noticed a passenger slipped and fell down while he try to board Train No. 16221 Ex:TLGP-MYS Express at Shivamogga Town Railway Station. Further rendered first aid allows for continuing journey. @RPF_INDIA pic.twitter.com/kk8mVKXfpb — RPF MYSURU DIV (@rpfswrmys) December 11, 2022
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link