SHIMOGA BREAKING | ಕಲ್ಲಾಪುರದಲ್ಲಿ ಭೀಕರ ಆಕ್ಸಿಡೆಂಟ್’ | ಸ್ಥಳದಲ್ಲಿಯೇ ಮೂವರ ದುರ್ಮರಣ
ದಾವಣಗೆರೆ ಮೂಲದ ಚಾಲಕ ಕಾರ್ತಿಕ್, ವಿವೇಕ್, ಮೋಹನ ಎಂದು ಸಾವನ್ನಪ್ಪಿದ್ಧಾರೆ ಎಂದು ಹೇಳಲಾಗುತ್ತಿದೆ. ಇನ್ನೂ ರುದ್ರೇಶ್ ಎಂಬವರಿಗೆ ಗಂಭೀರ ಗಾಯವಾಗಿದ್ದು, ಅವರನ್ನ ಆಸ್ಪತ್ರೆಗೆ ರವಾನಿಸಲಾಗಿದೆ.
![SHIMOGA BREAKING | ಕಲ್ಲಾಪುರದಲ್ಲಿ ಭೀಕರ ಆಕ್ಸಿಡೆಂಟ್’ | ಸ್ಥಳದಲ್ಲಿಯೇ ಮೂವರ ದುರ್ಮರಣ](https://malenadutoday.com/uploads/images/202212/image_750x_63953bc924f89.jpg)
ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತವೊಂದು ಸಂಭವಿಸಿದೆ. ಘಟನೆಯಲ್ಲಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಗೂಡ್ಸ್ ಲಾರಿ ಹಾಗೂ ಬಲೆರೋ ಕಾರು ಪರಸ್ಪರ ಡಿಕ್ಕಿಯಾಗಿದ್ದು, ಘಟನೆಯಲ್ಲಿ ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ.
ಮೂವರ ದುರ್ಮರಣ
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾಪುರ ಬಳಿ ಈ ಘಟನೆ ಸಂಭವಿಸಿದೆ. ಕೆಎ 17 ಎಂಎ 3581 ನಂಬರ್ನ ಬಲೆರೋ ಕೆಎ 27 ಸಿ3924 ನಂಬರ್ನ ಗೂಡ್ಸ್ ಲಾರಿ ಡಿಕ್ಕಿ ಯಾಗಿದೆ. ಘಟನೆಯಲ್ಲಿ ದಾವಣಗೆರೆ ಮೂಲದ ಚಾಲಕ ಕಾರ್ತಿಕ್, ವಿವೇಕ್, ಮೋಹನ ಎಂದು ಸಾವನ್ನಪ್ಪಿದ್ಧಾರೆ ಎಂದು ಹೇಳಲಾಗುತ್ತಿದೆ. ಇನ್ನೂ ರುದ್ರೇಶ್ ಎಂಬವರಿಗೆ ಗಂಭೀರ ಗಾಯವಾಗಿದ್ದು, ಅವರನ್ನ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಲ್ಲಿ ಸಾವನ್ನಪ್ಪಿದವರು ದಾವಣಗೆರೆ ಮೂಲದ ವಿದ್ಯಾರ್ಥಿಗಳಾಗಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link