ರಂಗಸ್ಥಳದ ಮೇಲೆ ಕುಣಿಯುತ್ತಿದ್ದಾಗಲೇ ಕಲಾವಿದನಿಗೆ ಹೃದಯಾಘಾತ/ ಮರಣ ಪ್ರಸಂಗ
ನಿನ್ನೆ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನದಲ್ಲಿ ಈ ಘಟನೆ ಸಂಭವಿಸದೆ. ಕಟೀಲು ಮೇಳದ ಪ್ರಸಿದ್ಧ ಕಿರೀಟ ವೇಷಧಾರಿ, ಪ್ರಸಂಗಕರ್ತರು ಆಗಿದ್ದ ಗುರುವಪ್ಪ ಬಾಯರು ಮೃತ ಕಲಾವಿದರು.
![ರಂಗಸ್ಥಳದ ಮೇಲೆ ಕುಣಿಯುತ್ತಿದ್ದಾಗಲೇ ಕಲಾವಿದನಿಗೆ ಹೃದಯಾಘಾತ/ ಮರಣ ಪ್ರಸಂಗ](https://malenadutoday.com/uploads/images/202212/image_750x_63a54c5f4698e.jpg)
ರಂಗಸ್ಥಳದ ಮೇಲೆ ಪ್ರಸಂಗ ನಡೆಯುತ್ತಿರುವಾಗಲೇ ಯಕ್ಷಗಾನ ವೇಷಧಾರಿ ಸಾವನ್ನಪ್ಪಿದ ಘಟನೆ ಕರಾವಳಿಯಲ್ಲಿ ಸಂಭವಿಸಿದೆ. ಕಟೀಲು ಮೇಳದ ರಂಗಸ್ಥಳದಲ್ಲಿ ನಿನ್ನೆ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನದಲ್ಲಿ ಈ ಘಟನೆ ಸಂಭವಿಸದೆ. ಕಟೀಲು ಮೇಳದ ಪ್ರಸಿದ್ಧ ಕಿರೀಟ ವೇಷಧಾರಿ, ಪ್ರಸಂಗಕರ್ತರು ಆಗಿದ್ದ ಗುರುವಪ್ಪ ಬಾಯರು ಮೃತ ಕಲಾವಿದರು.
ಇದನ್ನು ಸಹ ಒದಿ :ಜನ ಸ್ವಯಂಸೇವಕರಾದ್ರು/ ರಾಜಕಾರಣಿ ಡಾಕ್ಟರ್ ಆದ್ರು/ ಸಾಗರಿಕರ ಮಾನವೀಯತೆಗೆ ಸಾಕ್ಷಿಯಾದ ಆಕ್ಸಿಡೆಂಟ್
ಮೇಳ ನಡೆಯುತ್ತಿರುವಾಗಲೇ ರಂಗಸ್ಥಳದಿಂದ ಕುಸಿದು ಬಿದ್ದ ಗುರುವಪ್ಪರವರನ್ನು ಕೂಡಲೇ ಸ್ಥಳೀಯ ಅಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ಬಳಿಕ ಮಂಗಳೂರಿನ ಅಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ನಿಧನರಾಗಿದ್ದಾರೆ..
‘ಇದನ್ನು ಸಹ ಓದಿ : ಪ್ರಯಾಣಿಕರ ಗಮನಕ್ಕೆ/ ಶಿವಮೊಗ್ಗ ಟೌನ್ - ಎಂಜಿಆರ್ ಚೆನ್ನೈ ಸೆಂಟ್ರಲ್ ಸ್ಪೆಷಲ್ ಟ್ರೈನ್ ಸೌಲಭ್ಯ ವಿಸ್ತರಣೆ/ ವಿವರ ಇಲ್ಲಿದೆ ಓದಿ
ಕಳೆದ ರಾತ್ರಿ ಶ್ರೀಕ್ಷೇತ್ರ ಕಟೀಲಿನಲ್ಲಿ ನಡೆದ ನಾಲ್ಕನೇ ಮೇಳದ ತ್ರಿಜನ್ಮ ಮೋಕ್ಷ ಪ್ರಸಂಗ ನಡೆಯುತ್ತಿತ್ತು. ಈ ವೇಳೆ ಶಿಶುಪಾಲನಾಗಿ ರಂಗದಲ್ಲಿ ಮೆರೆಯುತ್ತಿದ್ದಾಗಲೇ ಬಾಯರವರಿಗೆ ಹೃದಯಾಘಾತವಾಗಿದೆ. 58 ವರ್ಷದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಮೇಳದ ಕಲಾವಿದ ಗುರುವಪ್ಪ ಬಾಯರು ನಿಧನಕ್ಕೆ ಕಲಾರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link