ಮತ್ತೊಂದು ಆನೆ ಹಿಡಿಯಲು ಹೊರಟ ಆಲೆ, ಬಹದ್ದೂರ್​, ಸೋಮಣ್ಣ ಮತ್ತು ಡಾ.ವಿನಯ್​!

Ale, Bahadur, Somanna and Dr. Vinay set out to catch another elephant! ಮತ್ತೊಂದು ಆನೆ ಹಿಡಿಯಲು ಹೊರಟ ಆಲೆ, ಬಹದ್ದೂರ್​, ಸೋಮಣ್ಣ ಮತ್ತು ಡಾ.ವಿನಯ್​!

ಮತ್ತೊಂದು ಆನೆ ಹಿಡಿಯಲು ಹೊರಟ ಆಲೆ, ಬಹದ್ದೂರ್​, ಸೋಮಣ್ಣ ಮತ್ತು ಡಾ.ವಿನಯ್​!

KARNATAKA NEWS/ ONLINE / Malenadu today/ Nov 9, 2023 SHIVAMOGGA NEWS

Shivamogga  |  ಶಿವಮೊಗ್ಗ ಜಿಲ್ಲೆ ಸಕ್ರೆಬೈಲ್ ಆನೆ ಬಿಡಾರದ ಆನೆಗಳು ಕಾಡಾನೆಗಳನ್ನು ಖೆಡ್ಡಾಕ್ಕೆ ಬೀಳಿಸುವ ಕಾರ್ಯಾಚರಣೆಗೆ ಆಗಾಗ ತೆರಳುತ್ತಿರುತ್ತವೆ. ಸದ್ಯ ಚಿಕ್ಕಮಗಳೂರಿನ ಕಾಡಾನೆಯನ್ನು ಹಿಡಿಯಲು ಸೋಮಣ್ಣ, ಆಲೆ ಹಾಗೂ ಬಹದ್ದೂರ್ ಆಗನೆಗಳು ತೆರಳಿವೆ . ಜೊತೆಯಲ್ಲಿ ಕಾಡಾನೆ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ಡಾ.ವಿನಯ್​ ಕೂಡ ಸ್ಥಳದಲ್ಲಿದ್ದು ಕಾರ್ಯಾಚರಣೆಯನ್ನ ಆರಂಭಿಸಿದ್ದಾರೆ. 



READ : ಹೊಳೆಹೊನ್ನೂರು ಸಮೀಪ ಪಲ್ಟಿಯಾಗಿ ಗದ್ದೆಗೆ ಉರುಳಿದ ಖಾಸಗಿ ಬಸ್!

ಚಿಕ್ಕಮಗಳೂರು ವಲಯ ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಚಿಕ್ಕಮಗಳೂರು ನಗರದಿಂದ ಮತ್ತಾವರ ಗ್ರಾಮದ ಬಳಿ ಒಂಟಿ ಸಲಗ ಬೀಡುಬಿಟ್ಟಿದೆ. ಆನೆ ಹಿಂಡಿನಿಂದ ಪ್ರತ್ಯೇಕವಾಗಿರುವ ಈ ಆನೆಯು ಈಗಾಗಲೇ ಇಬ್ಬರ ಜೀವಕ್ಕೆ ಮುಳುವಾಗಿದ್ದು, ಕಾಡಾನೆಯನ್ನು ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ. 

READ : ಬಾನುಮತಿ ಆನೆ ಬಾಲ ಕಟ್ ಮಾಡಿದ್ದು ಯಾರು? ಸತ್ಯ ಹೊರಬಿತ್ತು! ಏನಿದು ರಿಪೋರ್ಟ್!

ಇನ್ನೂ ಸಕ್ರೆಬೈಲ್ ಬಿಡಾರದ ಆನೆಗಳ ಜೊತೆಯಲ್ಲಿ ದುಬಾರೆ ಆನೆ ಬಿಡಾರದ ನಾಲ್ಕು ಆನೆಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತಿವೆ. ಎರಡು ತಂಡಗಳಾಗಿ ಕಾರ್ಯಾಚರಣೆ ನಡೆಯಲಿದೆ.