ಮತ್ತೊಂದು ಆನೆ ಹಿಡಿಯಲು ಹೊರಟ ಆಲೆ, ಬಹದ್ದೂರ್, ಸೋಮಣ್ಣ ಮತ್ತು ಡಾ.ವಿನಯ್!
Ale, Bahadur, Somanna and Dr. Vinay set out to catch another elephant! ಮತ್ತೊಂದು ಆನೆ ಹಿಡಿಯಲು ಹೊರಟ ಆಲೆ, ಬಹದ್ದೂರ್, ಸೋಮಣ್ಣ ಮತ್ತು ಡಾ.ವಿನಯ್!
KARNATAKA NEWS/ ONLINE / Malenadu today/ Nov 9, 2023 SHIVAMOGGA NEWS
Shivamogga | ಶಿವಮೊಗ್ಗ ಜಿಲ್ಲೆ ಸಕ್ರೆಬೈಲ್ ಆನೆ ಬಿಡಾರದ ಆನೆಗಳು ಕಾಡಾನೆಗಳನ್ನು ಖೆಡ್ಡಾಕ್ಕೆ ಬೀಳಿಸುವ ಕಾರ್ಯಾಚರಣೆಗೆ ಆಗಾಗ ತೆರಳುತ್ತಿರುತ್ತವೆ. ಸದ್ಯ ಚಿಕ್ಕಮಗಳೂರಿನ ಕಾಡಾನೆಯನ್ನು ಹಿಡಿಯಲು ಸೋಮಣ್ಣ, ಆಲೆ ಹಾಗೂ ಬಹದ್ದೂರ್ ಆಗನೆಗಳು ತೆರಳಿವೆ . ಜೊತೆಯಲ್ಲಿ ಕಾಡಾನೆ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ಡಾ.ವಿನಯ್ ಕೂಡ ಸ್ಥಳದಲ್ಲಿದ್ದು ಕಾರ್ಯಾಚರಣೆಯನ್ನ ಆರಂಭಿಸಿದ್ದಾರೆ.
READ : ಹೊಳೆಹೊನ್ನೂರು ಸಮೀಪ ಪಲ್ಟಿಯಾಗಿ ಗದ್ದೆಗೆ ಉರುಳಿದ ಖಾಸಗಿ ಬಸ್!
ಚಿಕ್ಕಮಗಳೂರು ವಲಯ ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಚಿಕ್ಕಮಗಳೂರು ನಗರದಿಂದ ಮತ್ತಾವರ ಗ್ರಾಮದ ಬಳಿ ಒಂಟಿ ಸಲಗ ಬೀಡುಬಿಟ್ಟಿದೆ. ಆನೆ ಹಿಂಡಿನಿಂದ ಪ್ರತ್ಯೇಕವಾಗಿರುವ ಈ ಆನೆಯು ಈಗಾಗಲೇ ಇಬ್ಬರ ಜೀವಕ್ಕೆ ಮುಳುವಾಗಿದ್ದು, ಕಾಡಾನೆಯನ್ನು ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ.
READ : ಬಾನುಮತಿ ಆನೆ ಬಾಲ ಕಟ್ ಮಾಡಿದ್ದು ಯಾರು? ಸತ್ಯ ಹೊರಬಿತ್ತು! ಏನಿದು ರಿಪೋರ್ಟ್!
ಇನ್ನೂ ಸಕ್ರೆಬೈಲ್ ಬಿಡಾರದ ಆನೆಗಳ ಜೊತೆಯಲ್ಲಿ ದುಬಾರೆ ಆನೆ ಬಿಡಾರದ ನಾಲ್ಕು ಆನೆಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತಿವೆ. ಎರಡು ತಂಡಗಳಾಗಿ ಕಾರ್ಯಾಚರಣೆ ನಡೆಯಲಿದೆ.