ಗ್ಯಾಸ್​ ಸಿಲಿಂಡರ್​ ಎಸೆದು ಹೆದರಿಸ್ತಿದ್ದ ​ ಆಸಾಮಿ ವಿರುದ್ಧ ಹೆಚ್ಚುವರಿ ಆಕ್ಷನ್​! ಥ್ಯಾಂಕ್ಯು ಭದ್ರಾವತಿ ಪೊಲೀಸ್​!

Additional action against man who threatened to throw gas cylinders Thank you Bhadravathi Police!

ಗ್ಯಾಸ್​ ಸಿಲಿಂಡರ್​ ಎಸೆದು ಹೆದರಿಸ್ತಿದ್ದ ​ ಆಸಾಮಿ ವಿರುದ್ಧ ಹೆಚ್ಚುವರಿ ಆಕ್ಷನ್​! ಥ್ಯಾಂಕ್ಯು ಭದ್ರಾವತಿ ಪೊಲೀಸ್​!
gas cylinders ,Bhadravathi Police

Shivamogga Feb 12, 2024 |  ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಭದ್ರಾವತಿಯ ಹೊಸಮನೆ ಕಾಲೋನಿಯ ಎನ್ಎಂಸಿ ಮೂರನೇ ತಿರುವಿನಲ್ಲಿ ಕುಡುಕನೊಬ್ಬ ತುಂಬಿದ ಸಿಲಿಂಡರ್​ನ್ನ ಎತ್ತಿಹಾಕಿ ಸ್ಫೋಟಿಸಲು ಯತ್ನಿಸಿದ ವಿಚಾರದ ಬಗ್ಗೆ ಮಲೆನಾಡು ಟುಡೆ ವರದಿ ಮಾಡಿತ್ತು. ವರದಿಯಲ್ಲಿ ಸ್ಥಳೀಯರು ಮಾಡಿದ್ದ ಆರೋಪಗಳನ್ನು ವಿವರಿಸಲಾಗಿತ್ತು. ಭದ್ರಾವತಿ ಹೊಸಮನೆ ಕಾಲೋನಿಯ ಜನರ ಒತ್ತಾಯದ ಪ್ರತಿಯಾಗಿ  ಸ್ಥಳೀಯರು ಪೊಲೀಸರಿಗೆ ನೀಡಿದ ಮನವಿ ಕಾಪಿ ಹಾಗೂ ವಿಡಿಯೋವನ್ನು ಎಸ್​.ಪಿ.ಮಿಥುನ್ ಕುಮಾರ್​ ರವರ ಗಮನಕ್ಕೆ ತರಲಾಗಿತ್ತು. 

ಸದ್ಯ ಈ ವಿಚಾರವಾಗಿ ಭದ್ರಾವತಿ ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ಪ್ರಕರಣದ ಸಂಬಂಧ ಪೊಲೀಸರು ಆರೋಪಿಯನ್ನು ಬಿಟ್ಟು ಕಳುಹಿಸಿದ್ದರು ಎಂದು ಸ್ಥಳೀಯರು ದೂರಿದ್ದರು. ಆದರೆ ಘಟನೆ ನಡೆದ ದಿನವೇ ಆರೋಪಿಯನ್ನ ಮಾದಕವಸ್ತು ಸೇವನೆಯ ಸಂಬಂಧ ಪರೀಕ್ಷೆಗೆ ಒಳಪಡಿಸಿ ಆತನ ವಿರುದ್ಧ ಪಿಟ್ಟಿ ಕೇಸ್ ದಾಖಲಿಸಿದ್ದರು ಹೊಸಮನೆ  ಪೊಲೀಸರು. ಈ ಸಂಬಂಧ ಪೊಲೀಸ್ ಮಾಧ್ಯಮ ಮಾಹಿತಿ ಗ್ರೂಪ್​ನಲ್ಲಿ ಸಂದೇಶವನ್ನು ಸಹ ರವಾನೆ ಮಾಡಲಾಗಿದೆ. ಪ್ರಕರಣ ಸಂಬಂಧ ಯುವಕನ್ನ  ಠಾಣೆಗೆ ಕರೆದುಕೊಂಡು ಬಂದು. ಅವನಿಗೆ ಸೂಕ್ತ ಎಚ್ಚರಿಕೆ ನೀಡಿ, ತಿಳುವಳಿಕೆ, ಬುದ್ದಿವಾದ ಹೇಳಿ, ಬಂದೋಬಸ್ತ್ ಮಾಡಿದ್ದು, ಕಲಂ 92ಒ & ಆರ್​ ಕೆಪಿ ಆ್ಯಕ್ಟ್ ಅಡಿಯಲ್ಲಿ  ಲಘು ಪ್ರಕರಣ ದಾಖಲಿಸಿ. ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿರುತ್ತದೆ ಎಂದು ತಿಳಿಸಿದ್ದಾರೆ. ಭದ್ರಾವತಿ ಜನರ ಮಾಹಿತಿಗಾಗಿ  ಪೊಲೀಸ್ ಇಲಾಖೆ ತಿಳಿಸಿದ ವಿವರವನ್ನು ಸಹ ಇಲ್ಲಿ ನೀಡಲಾಗಿದೆ. 

ಇನ್ನೂ ಇದೇ ವಿಚಾರದಲ್ಲಿ ಪೊಲೀಸರು ಸಿಆರ್​ಪಿಸಿ ಆಕ್ಟರ್​ 107 ಅಡಿಯಲ್ಲಿ ಕ್ರಮ ಕೈಗೊಳ್ಳುತ್ತಿದ್ದಾರೆ. ಸಾರ್ವಜನಿಕರಿಗೆ ನಿತ್ಯ ಕಿರುಕುಳ ನೀಡುತ್ತಿದ್ದರೇ ಆತ ಅಪಾಯಕಾರಿಯೇ. ಆತನ ವಿರುದ್ಧ ಕ್ರಮ ಅನಿವಾರ್ಯ. ಹೊಸಮನೆ ಎನ್​ಎಂಸಿಯಲ್ಲಿಯು ಇದೇ ರೀತಿಯಾಗಿತ್ತು. ವೈರಲ್ ಆದ ವಿಡಿಯೋದ ಮೂಲ ಹುಡುಕಿಹೋದ ಸಂದರ್ಭದಲ್ಲಿ,  ಸ್ಥಳೀಯರು ದೂರು ಹೇಳಿಕೊಂಡಿದ್ದರು.  ಮಲೆನಾಡು ಟುಡೆ ಜನರ ನೋವು ಹಾಗೂ ಧ್ವನಿಯನ್ನು ಎಸ್​ಪಿ ಮಿಥುನ್ ಕುಮಾರ್​ರವರಿಗೆ ತಲುಪಿಸಿ ಹಾಗೂ ವರದಿಯನ್ನ ಬಿತ್ತರಿಸಿತ್ತು. 

ಇದರ ಬೆನ್ನಲ್ಲೆ ಭದ್ರಾವತಿ ಪೊಲೀಸರು ಈ ಮೊದಲೇ ಕೈಗೊಂಡ ಕ್ರಮ ಹಾಗೂ ಸದ್ಯ ಕೈಗೊಳ್ಳುತ್ತಿರುವ ಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರ ಬಗ್ಗೆಯು ಮಲೆನಾಡು ಟುಡೆ ವಿವರವಾಗಿ ವರದಿ ಮಾಡಿದೆ. ಜೊತೆಯಲ್ಲಿ ಜನರ ಶಾಂತಿ ನೆಮ್ಮದಿಗಾಗಿ ಪೂರಕವಾಗಿ ಕೈಗೊಂಡ ಕ್ರಮಕ್ಕಾಗಿ ಭದ್ರಾವತಿ ಪೊಲೀಸರಿಗೆ ಧನ್ಯವಾದವನ್ನು ತಿಳಿಸುತ್ತೇವೆ.