MALENADUTODAY.COM | SHIVAMOGGA NEWS |THIRTHAHALLI TALUK
ತೀರ್ಥಹಳ್ಳಿ ತಾಲ್ಲೂಕಿನ ಮೇಳಿಗೆಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಜಾತ್ರಾ ರಥೋತ್ಸವವು ವಿಜ್ರಂಭಣೆಯಿಂದ ನಡೆಯುತ್ತಿದೆ. ಸುತ್ತಮುತ್ತಲಿನ ಊರಿನ ಸಮಸ್ತ ಜನರು ಜಾತ್ರೆಯಲ್ಲಿ ಭಾಗಿಯಾಗುವುದರ ಮುಖಾಂತರ ರಥೋತ್ಸವಕ್ಕೆ ಕಳೆ ಹೆಚ್ಚಿತು.
ಮೇಳಿಗೆಯ ರಥಬೀದಿಯ ಅಕ್ಕಪಕ್ಕದಲ್ಲಿ ಆಟಿಕೆ ಸಾಮಾನುಗಳು, ಅಲಂಕಾರಿಕ ಗೃಹಪಯೋಗಿ ವಸ್ತುಗಳ ಅಂಗಡಿಗಳು ಮುಂಗಟ್ಟುಗಳಯ ನೆರೆದಿದ್ದವರ ಗಮನ ಸೆಳೆಯಿತು. ದೇವಸ್ಥಾನದ ಆವರಣವು ವಿಶೇಷವಾಗಿ ಹೂವಿನ ಅಲಂಕಾರದೊಂದಿಗೆ ಕಂಗೊಸುತ್ತಿದ್ದು ಭಕ್ತಾದಿಗಳು ರಥೋತ್ಸವಕ್ಕೆ ಹಣ್ಣು ಕಾಯಿ ಮಾಡುವುದರ ಮೂಲಕ ಭಕ್ತಿಯಿಂದ ಜಾತ್ರಾ ಸಂಭ್ರಮದಲ್ಲಿ ಪಾಲ್ಗೊಂಡರು.
ಜಾತ್ರೆಯ ಸಂಭ್ರಮ ಒಂದೆಡೆಯಾದರೆ ಇತ್ತ ಗೃಹ ಸಚಿವ ಆರಗ ಜ್ಞಾನೇಂದ್ರರವರ ಅಭಿಮಾನಿಗಳು ಬಾಳೆಹಣ್ಣಿನಲ್ಲಿ 2023 ಕ್ಕೆ ಆರಗ ಮತ್ತೊಮ್ಮೆ ಎಂದು ಬರೆದು ಜಾತ್ರೋತ್ಸವದಲ್ಲಿ ರಥಕ್ಕೆ ಹಾಕುವುದರ ಮುಖಾಂತರ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
