ಸಿಎಂ ಸಿದ್ದರಾಮಯ್ಯ ಬೆಸ್ಟ್ ಸಿಎಂ POST ನಲ್ಲಿ ಅವಹೇಳನ! ಶಿವಮೊಗ್ಗದಲ್ಲಿ ದಾಖಲಾಯ್ತು ಮತ್ತೊಂದು ಕಂಪ್ಲೆಂಟ್! ಏನಿದು

KARNATAKA NEWS/ ONLINE / Malenadu today/ Sep 27, 2023 SHIVAMOGGA NEWS’ 

SUNCONTROL_FINAL-scaled

ಇತ್ತೀಚೆಗೆ ಕಾಂಗ್ರೆಸ್​ನ ಸೌಗಂಧಿಕಾ ರಘುನಾಥ್ ಬಿಜೆಪಿಯ ಚಕ್ರವರ್ತಿ ಸೂಲಿಬೆಲೆ ಫೇಸ್​ಬುಕ್​ ಅಕೌಂಟ್​ನಲ್ಲಿ ಬರೆದ ಕಾಮೆಂಟ್​​ವೊಂದಕ್ಕೆ ಪ್ರತಿಯಾಗಿ ದೂರು ನೀಡಿದ್ದರು. ಶಿವಮೊಗ್ಗದ ವಿನೋಬನಗರ ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾದ ದೂರಿನ ಸಂಬಂಧ ಚಕ್ರವರ್ತಿ ಸೂಲಿಬೆಲೆಯವರ ವಿಚಾರಣೆಯು ನಡೆದಿತ್ತು. 

ಇದೀಗ ಶಿವಮೊಗ್ಗದ ಸಿಇಎನ್ ಪೊಲೀಸ್ ಸ್ಟೇಷನ್​ನಲ್ಲಿ (Shimoga CEN Police Station) ಇನ್ನೊಂದು ದೂರು ದಾಖಲಾಗಿದ್ದು, ಈ ಸಲ ಶಿವಮೊಗ್ಗ ಹೈಕ್ಲು ಎಂಬ ಹೆಸರಿನ ಟ್ವಿಟ್ಟರ್ ಹಾಗೂ ಕಿರಿಕ್ ಸಂಗ್ಲಿ ಹೆಸರಿನ ಟ್ವಿಟ್ಟರ್ ಖಾತೆಯ ವಿರುದ್ಧ ರಾಕೇಶ್ ಎಂಬವರು ದೂರು ನೀಡಿದ್ದಾರೆ. 

ಬಸವರಾಜ ರಾಯರೆಡ್ಡಿಯವರು ಸಿದ್ದರಾಮಯ್ಯರವರನ್ನು ಈ ದೇಶದ ಬೆಸ್ಟ್ ಸಿಎಂ ಎಂದು ಕರೆದಿದ್ದರು. ಈ ಸಂಬಂಧ ಖಾಸಗಿ ಚಾನಲ್​ವೊಂದು ಪ್ರಕಟಿಸಿದ್ದ ಟ್ವೀಟ್ ಹಾಗೂ ರೈತರ ಮುಖಂಡರಿಂದ ಸನ್ಮಾನ ಸ್ವೀಕರಿಸಿದ ಪೋಟೋವೊಂದಕ್ಕೆ ಹಾಕಿ ಕಾಮೆಂಟ್ ಮತ್ತು ಪೋಸ್ಟ್​ನಲ್ಲಿ ಬಳಸಿದ ಬಾಷೆ ವಿರುದ್ದ ದೂರು ನೀಡಲಾಗಿದೆ. 

ವರ್ಗಗಳ ನಡುವೆ ಉದ್ದೇಶ ಪೂರ್ವಕವಾಗಿ ಪ ಪ್ರಚೋಧಿಸುವಂತೆ ಸಾಮಾಜಿಕ ಜಾಲತಾಣದಲ್ಲಿ, ವದಂತಿಯನ್ನು ಹರಡಿರುವವರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕಂಪ್ಲೆಂಟ್​ನಲ್ಲಿ ಮನವಿ  ಮಾಡಲಾಗಿದ್ದು, ಈ ಸಂಬಂಧ IPC 1860 (U/s-505(1)(C),153) ಅಡಿಯಲ್ಲಿ ಕೇಸ್ ದಾಖಲಾಗಿದೆ


ಇನ್ನಷ್ಟು ಸುದ್ದಿಗಳು 

  1. BREAKING NEWS / ಜೋಗದ ಸಮೀಪ ನೀರಿಗಿಳಿದಿದ್ದ ಓರ್ವ ಅಧಿಕಾರಿ ಮತ್ತು ಬ್ಯಾಂಕ್ ಉದ್ಯೋಗಿ ಸಾವು! ಕಾರ್ಗಲ್​ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದ್ದೇನು?

  2. ಲೋಡ್ ಗಾಡಿಯಿಂದ ಬಿದ್ದ ಮರದ ತುಂಡು ಬಡಿದು ಬೈಕ್​ ಸವಾರನ ಸ್ಥಿತಿ ಗಂಭೀರ! ಹೀಗೂ ಆಗುತ್ತೆ ಹುಷಾರು ತಪ್ಪದಿರಿ ವಾಹನ ಸವಾರರೇ?

  3. ದೌರ್ಜನ್ಯ ಪ್ರಕರಣ ! ಶಿವಮೊಗ್ಗ ಡಿಸಿಯಿಂದ 15 ಸೂಚನೆ! ಯುವಕನ ಸಾವು, ಮರಳು, ಅಧಿಕಾರಿಗಳಿಂದ ಕಿರುಕುಳ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು?


 

SUNCONTROL_FINAL-scaled

Leave a Comment