ಜಸ್ಟ್ ಒಂದು ನಿಮಿಷ ಲೇಟ್​​ ಆಗಿದ್ದಕ್ಕೆ ಬಸ್​ ಡ್ರೈವರ್-ಏಜೆಂಟ್​ ಫೈಟ್! ಡಿಪೋದಲ್ಲಿ ಡ್ರೈವರ್​​-ಕಂಡೆಕ್ಟರ್​ ಹೊಡೆದಾಟ! TODAY @NEWS

Malenadu Today

KARNATAKA NEWS/ ONLINE / Malenadu today/ Aug 6, 2023 SHIVAMOGGA NEWS

ಬಸ್​ ಒಂದು ನಿಮಿಷ ಲೇಟ್​ ಆಗಿದ್ದಕ್ಕೆ ಫೈಟ್​!

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಬಸ್​ ಸ್ಟ್ಯಾಂಡ್​ ಬಳಿಯಲ್ಲಿ ಬಸ್​ ಒಂದು ನಿಮಿಷ ಲೇಟಾಗಿ ಬಂದ ವಿಚಾರಕ್ಕೆ ಬಸ್ ಏಜೆಂಟ್ ಹಾಗೂ ಡ್ರೈವರ್ ನಡುವೆ ಜಗಳವಾಗಿದ್ದು, ಈ ವಿಚಾರ ಸಂಬಂಧ ತೀರ್ಥಹಳ್ಳಿ ಪೊಲೀಸ್ ಸ್ಟೇಷನ್​ನಲ್ಲಿ ಕಂಪ್ಲೆಂಟ್ ಆಗಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಒಂದನೇ ತಾರೀಖು ಈ ಘಟನೆ ನಡೆದಿದ್ದು, ಖಾಸಗಿ ಬಸ್​ವೊಂದು ಕೋಣಂದೂರು ಬಸ್​ ಸ್ಟ್ಯಾಂಡ್​ಗೆ ಒಂದು ನಿಮಿಷ ತಡವಾಗಿ ಬಂತು ಎಂಬ ಕಾರಣಕ್ಕೆ ಇನ್ನೊಂದು ಬಸ್​ನ ಎಜೆಂಟ್​ ಹಾಗೂ ಡ್ರೈವರ್ ಜಗಳವಾಡಿದ್ಧಾರೆ. ಇದೇ ವಿಚಾರದಲ್ಲಿ ಡ್ರೈವರ್ ಮೇಲೆ ಹಲ್ಲೆಯಾಗಿದೆ ಎಂದು ಆರೋಪಿಸಲಾಗಿದೆ. ಸದ್ಯ ಪ್ರಕರಣ ಸಂಬಂಧ ತೀರ್ಥಹಳ್ಳಿ ಪೊಲೀಸರು ವಿಚಾರಣೆ ನಡೆಸ್ತಿದ್ಧಾರೆ. 

ಬಸ್​ ಡ್ರೈವರ್ ಕಂಡೆಕ್ಟರ್​ ನಡುವೆ ಹಲ್ಲೆ!

ಇನ್ನೂ ಇತ್ತ ಲಾಂಗ್​ ಡ್ರೈವಿಂಗ್​ನಲ್ಲಿ ಬಸ್ ಓಡಿಸುವ ವಿಚಾರಕ್ಕೆ ಬಸ್​ ಡ್ರೈವರ್ ಹಾಗೂ ಕಂಡಕ್ಟೆರ್​ ನಡುವೆ ಜಗಳವಾಗಿರುವ ಸಂಬಂಧ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ಡಿಪೋದಲ್ಲಿ ಶಿವಮೊಗ್ಗದಿಂದ ಕೊಯಮತ್ತೂರಿಗೆ ಹೋಗುವ ಬಸ್​ನ ಸಿಬ್ಬಂದಿ ನಡುವೆ ಜಗಳವಾಗಿದೆ. ಲಾಂಗ್ ರೂಟ್ ಗಾಡಿಗಳಿಗೆ ಡ್ರೈವರ್ ಜೊತೆ ಡ್ರೈವರ್ ಕಂ ಕಂಡೆಕ್ಟರ್ ಆದವರನ್ನ ಕಳುಹಿಸಲಾಗುತ್ತದೆ. ಇದೆ ರೀತಿಯಲ್ಲಿ ಕೊಯಮತ್ತೂರ್ ಬಸ್​ಗೆ ವ್ಯವಸ್ಥೆ ಮಾಡಲಾಗಿತ್ತು. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿ ಡ್ರೈವರ್ ಮೇಲೆ ಹಲ್ಲೆಯಾಗಿದೆ ಎಂದು ತಿಳಿದುಬಂದಿದೆ.  

ಇನ್ನಷ್ಟು ಸುದ್ದಿಗಳು 

 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

 

Share This Article