MALENADUTODAY.COM | SHIVAMOGGA NEWS
ಶಿವಮೊಗ್ಗದ ರಾಗಿ ಗುಡ್ಡದ ಮೇಲೆ 108 ಅಡಿ ಎತ್ತರದ ಶಿವನ ಮೂರ್ತಿ ಸ್ಥಾಪನೆಯಾಗಲಿದೆ. ಈ ಸಂಬಂಧ ಸ್ಥಳೀಯ ವಿರೋಧದ ನಡುವೆ ಇವತ್ತು ಶಿವನ ಮೂರ್ತಿ ಸ್ಥಾಪನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೂಮಿ ಪೂಜೆ ನೆರವೇರಿಸಿದರು.
*ಶಿವಮೊಗ್ಗಕ್ಕೆ ಸಿಎಂ! ಯಾವೆಲ್ಲಾ ಅಭಿವೃದ್ಧಿ ಕಾಮಗಾರಿಗೆ ಸಿಗಲಿದೆ ಚಾಲನೆ! ವಿವರ ಇಲ್ಲಿದೆ ಓದಿ*
ರಾಗಿಗುಡ್ಡದಲ್ಲಿ ಕಾಮಗಾರಿಗಾಗಿ ದೇವಸ್ಥಾನ ಕೆಡವಲಾಗುತ್ತಿದೆ ಎಂದು ಆರೋಪಿಸಿದ್ದ ರಾಗಿಗುಡ್ಡ ಬ್ರಹ್ಮ ವಿಷ್ಣ ಮಹೇಶ್ವರ ಸೇವಾ ಟ್ರಸ್ಟ್ ಈ ಸಂಬಂಧ ನ್ಯಾಯಾಲಯದ ಮೊರೆಹೋಗಿತ್ತು. ಇದರ ನಡುವೆ ಇವತ್ತು ಸಿಎಂ ಬಸವರಾಜ ಬೊಮ್ಮಾಯಿ 108 ಅಡಿ ಎತ್ತರದ ಶಿವನಮೂರ್ತಿ ಉದ್ಘಾಟನೆಗೆ ಚಾಲನೆ ನೀಡಿದರು. ಇನ್ನೂ ಈ ವೇಳೆ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಸಚಿವರಾದ ಕೆ.ಸಿ.ನಾರಾಯಣಗೌಡ, ಆರಗ ಜ್ಞಾನೇಂದ್ರ, ಬೈರತಿ ಬಸವರಾಜ, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹಾಗೂ ಮತ್ತಿತರರು ಹಾಜರಿದ್ದರು.
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
