Wednesday, 24 Sep 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • UNCATEGORIZED
  • INFORMATION NEWS
  • ARECANUT RATE
  • NATIONAL NEWS
  • SHIMOGA NEWS LIVE
  • DISTRICT
  • SAGARA
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
JP STORY

ರಾಜ್ಯ ಅರಣ್ಯ ಸೇವೆಯ ಅಧಿಕಾರಿಗಳಿಗಿಲ್ಲ IFS ಕೆಡರ್​ ರೂಲ್​ ಹುದ್ದೆ | ಏನಿದು ಆದೇಶ ?!

13
Last updated: March 22, 2025 8:11 pm
13
Share
SHARE

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 22, 2025 ‌‌ ‌‌

ರಾಜ್ಯ ಸರ್ಕಾರ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಾಕ್ಷಾಣಾಧಿಕಾರಿ ಹುದ್ದೆಗೆ ಐಎಫ್​ಎಸ್ ಕೇಡರ್​ರನ್ನ ಮಾತ್ರ ಸೀಮಿತಗೊಳಿಸಿ  ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಈ ಆದೇಶದಿಂದಾಗಿ ಪ್ರಮೋಶನ್​ ಮೂಲಕ ಎನ್​ ಕೇಡರ್​ ಹುದ್ದೆ ಪಡೆದುಕೊಳ್ಳುತ್ತಿದ್ದವರಿಗೆ ನಿರಾಸೆ ಉಂಟಾಗಿದೆ. ಹೀಗಾಗಿ ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಲ್ಲಿ ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಏನಿದು ವಿಚಾರ

ಅರಣ್ಯ ಇಲಾಖೆ ಸಚಿವ ಈಶ್ವರ್​ ಖಂಡ್ರೆ  ದಿನಾಂಕ ಮಾರ್ಚ್​​ 14 ರಂದು ಆದೇಶವೊಂದನ್ನು ಹೊರಡಿಸಿದ್ದಾರೆ. ಈ ಆದೇಶದ ಯಥಾವತ್ತು ವಿವರ ಹೀಗಿದೆ.  

ಅರಣ್ಯ ಇಲಾಖೆಯ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಾಕ್ಷಣಾಧಿಕಾರಿ ಹುದ್ದೆಗಳನ್ನು ಎನ್-ಕೇಡ‌ರ್ ಹುದ್ದೆಗಳಾಗಿ ಸೃಜಿಸಲಾಗಿದ್ದು, IFS Cared Rule 9(2) ರನ್ವಯ ಈ ಹುದ್ದೆಗಳಿಗೆ ಭಾರತೀಯ ಅರಣ್ಯ ಸೇವೆಯ ಅಧಿಕಾರಿಗಳನ್ನು ಮಾತ್ರ ನಿಯುಕ್ತಿಗೊಳಬೇಕಾಗಿರುತ್ತದೆ.

ಆದರೆ ಅನೇಕ ಪ್ರಕರಣಗಳಲ್ಲಿ. ರಾಜ್ಯ ಅರಣ್ಯ ಸೇವೆಯ ಕಿರಿಯ ಅಧಿಕಾರಿಗಳನ್ನು ಎನ್-ಕೇಡರ್ ಉಪ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳಿಗೆ ನಿಯುಕ್ತಿಗೊಳಿಸಲಾಗುತ್ತಿದೆ. ಮುಂದುವರೆದು. ಸೇವೆಯಿಂದ ಅಮಾನತ್ತುಗೊಂಡ ಅಧಿಕಾರಿಗಳಿಗೆ ಪ್ರಮುಖ ಹುದ್ದೆಗಳನ್ನು ಹಾಗೂ APCCF ವೃಂದ ಅಧಿಕಾರಿಯ ಹುದ್ದೆಗೆ ರಾಜ್ಯ ಅರಣ್ಯಸೇವೆಯ ಅಧಿಕಾರಿಯನ್ನು ಸ್ಥಳನಿಯುಕ್ತಿಗೊಳಿಸಿರುವುದನ್ನು ಗಮನಿಸಲಾಗಿದೆ.

ಇತ್ತೀಚಿನ ಕೇಂದ್ರ ಆಡಳಿತ ನ್ಯಾಯಮಂಡಳಿಯ ಪ್ರಕರಣವೂ ಸೇರಿದಂತೆ. ವಿವಿಧ ಪ್ರಕರಣಗಳಲ್ಲಿ ನ್ಯಾಯಾಲಯ/ನ್ಯಾಯಮಂಡಳಿಗಳು ಈ ರೀತಿಯ ನಿಯೋಜನೆಯನ್ನು ವಾಪಸ್ಸು ಪಡೆಯಲು ಸೂಚಿಸಿರುವ ನಿದರ್ಶಗಳಿರುತ್ತವೆ.

ಇದಲ್ಲದೆ. ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಾಕ್ಷಣಾಧಿಕಾರಿಯು ವಿಭಾಗ ಮಟ್ಟದಲ್ಲಿ ಅರಣ್ಯ ಸಂರಕ್ಷಣೆ. ಅರಣ್ಯ ಸ್ಥಾಪನೆ ಕಾರ್ಯಗಳ ಅನುಷ್ಠಾನ ಮತ್ತು ನಿಯಂತ್ರಣದ ಜವಾಬ್ದಾರಿ ಹೊಂದಿರುವುದಲ್ಲದೆ. ವಿಭಾಗ ಮಟ್ಟದಲ್ಲಿ ಅಧೀನ ಸಿಬ್ಬಂದಿಗಳ ಶಿಸ್ತು ಪ್ರಾಧಿಕಾರವೂ ಆಗಿದ್ದು, ಮಹತ್ವದ ಹುದ್ದೆಯಾಗಿರುತ್ತದೆ. ಈ ಹುದ್ದೆಗಳಿಗೆ ಅರ್ಹರಲ್ಲದ ಅಧಿಕಾರಿಗಳನ್ನು ನಿಯೋಜಿಸುವ ಮೂಲಕ ಇಲಾಖೆಯ ಕಾರ್ಯಕ್ಷಮತೆ ಕುಂಠಿತವಾಗುವುದರೊಂದಿಗೆ, ಪರಿಣಾಮಕಾರಿ ಆಡಳಿತ ನೀಡಲು ತೊಂದರೆಯುಂಟಾಗುವ ಸಂಭವವಿರುತ್ತದೆ. ಆದುದರಿಂದ. ಈ ಹುದ್ದೆಗಳಿಗೆ ಕಡ್ಡಾಯವಾಗಿ ಭಾರತೀಯ ಅರಣ್ಯ ಸೇವೆಯ ಅಧಿಕಾರಿಗಳನ್ನು ನಿಯೋಜಿಸುವುದು ಸಮಂಜಸವಾಗಿರುತ್ತದೆ.

ಮೇಲ್ಕಂಡ ಅಂಶಗಳ ಹಿನ್ನಲೆಯಲ್ಲಿ. ಈಗಾಗಲೇ ಎನ್-ಕೇಡರ್ ಉಪ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳಿಗೆ ಕಡ್ಡಾಯವಾಗಿ ಭಾರತೀಯ ಅರಣ್ಯ ಸೇವೆಯ ಅಧಿಕಾರಿಗಳನ್ನು ಮಾತ್ರ ನಿಯೋಜಿಸಲು ಹಾಗೂ ಇನ್ನು ಮುಂದೆ ಈ ರೀತಿ ಪ್ರಕರಣಗಳು ಮರುಕಳಿಸದಂತೆ ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡಲು ಕೋರಿದೆ.

ಅರಣ್ಯ ಸಚಿವರ ಈ ಆದೇಶದಿಂದಾಗಿ ಕಿರಿಯ ಅಧಿಕಾರಿಗಳು ಪ್ರಮೋಶನ್​ ಮೂಲಕ ಪ್ರಾದೇಶಿಕ ವಿಭಾಗದ APCCF ಅಧಿಕಾರಿಯಾಗಲು ಸಾಧ್ಯವಾಗದು. ನ್ಯಾಯ ಮಂಡಳಿಗಳ ಸೂಚನೆಯಂತೆ ಸರ್ಕಾರ ಈ ಕ್ರಮ ಕೈಗೊಂಡಿದ್ದರೂ ಸಹ, ರಾಜ್ಯ ಅರಣ್ಯ ಸೇವೆಯ ಅಧಿಕಾರಿಗಳಿಗೆ ಅರಣ್ಯ ಇಲಾಖೆಯಲ್ಲಿ ಹುದ್ದೆಗೆ ಸಂಬಂಧಿಸಿದಂತೆ ಮಿತಿ ಹೇರಿದಂತಾಗಿದೆ ಎಂಬ ಚರ್ಚೆ ಅರಣ್ಯ ಇಲಾಖೆಯಲ್ಲಿ ಆರಂಭವಾಗಿದೆ. ಐಎಫ್​ಎಸ್​ ಗ್ರೇಡ್​ನ ಹುದ್ದೆಗಳನ್ನು ಪ್ರಮೋಶನ್​ ಮೂಲಕ ರಾಜ್ಯ ಅರಣ್ಯ ಸೇವೆಯ ಅಧಿಕಾರಿಗಳು ಪಡೆದುಕೊಳ್ಳುವುದಕ್ಕೆ ಇತರೇ ಇಲಾಖೆಯಲ್ಲಿದ್ದಂತೆ ಅವಕಾಶಗಳನ್ನು ನೀಡಬೇಕು  ಎಂಬ ಮನವಿಯು ಅಧಿಕಾರಿಗಳು ಮಾಡುತ್ತಿದ್ದಾರೆ.

ಸರ್ಕಾರದಿಂದ ಹೊರಬಿದ್ದಿರುವ ಆದೇಶ ಪ್ರತಿ

 

Share This Article
Facebook Whatsapp Whatsapp Telegram Threads Copy Link
Previous Article ಉಪನಯನಕ್ಕೆ ಹೋಗಿ ಬಂದವರಿಗೆ ಮನೆಯಲ್ಲಿತ್ತು ಶಾಕ್‌ | 15 ದಿನದಲ್ಲಿ ಸಿಕ್ಕಿಬಿದ್ದ ಅಪರಿಚಿತ 
Next Article ಸಿಗಂದೂರು ಸೇತುವೆ ಕಾಮಗಾರಿಯ ಮತ್ತೊಂದು ಫೋಟೋ ರಿಲೀಸ್‌
Leave a Comment

Leave a Reply Cancel reply

Your email address will not be published. Required fields are marked *

You Might Also Like

ಬಾಯ್ಲರ್‌ ಸ್ಫೋಟಕ್ಕೆ ಹಾರಿ ಬಂದು ಇಡೀ RCC ನೇ ಹೋಳುಮಾಡಿ, ಮನೆಯೊಳಗೆ ಬಿದ್ದ 100 ಕೆಜಿ ತೂಕದ ಐರನ್‌ | ದೃಶ್ಯ ನೋಡಿ

By 13

ಪತ್ನಿಯ ಸಂಗ ಮಾಡಬೇಡ ಎಂದವನನ್ನ ತುಂಡು ತುಂಡಾಗಿ ಕತ್ತರಿಸಿ ನದಿಗೆ ಎಸೆದ ಖದೀಮರು | ಶಿವಮೊಗ್ಗದ ದೊಡ್ಡ ಸುದ್ದಿ

By 13

ಶಿವಮೊಗ್ಗ ಜಯನಗರ ಪೊಲೀಸ್‌ ಠಾಣೆಯ ಆವರಣದಲ್ಲಿ ನಿನ್ನೆ ರಾತ್ರಿ ನಡೆದಿದ್ದೇನು? ಕಂಟೇನರ್‌ ಲಾರಿಯಲ್ಲಿ ಏನಿತ್ತು?

By 13

45 ದಿನದಲ್ಲಿ 200 ಮಂದಿಗೆ ಟೆಸ್ಟ್‌, 10 ಕೇಸ್‌ನಲ್ಲಿ 19 ಮಂದಿ ಅರೆಸ್ಟ್‌ | ಶಿವಮೊಗ್ಗ SP ಮಿಥುನ್‌ ಕುಮಾರ್‌ ಹೇಳಿದ್ದೇನು?

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up